ಪೋಸ್ಟ್‌ಗಳು

ಅಕ್ಟೋಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

91. ಅಜ್ಜಂಪುರದ ಹಿರಿಯ ಪತ್ರಕರ್ತ, ವರ್ತಕ ಜಿ.ಬಿ.ಮಲ್ಲಿಕಾರ್ಜುನಸ್ವಾಮಿ

ಇಮೇಜ್
ಕಿರಿಯರ ಮೇಲೆ ಹಿರಿಯರ ಪ್ರಭಾವವು ಅಪರೋಕ್ಷವಾಗಿಯಾದರೂ ಇರುತ್ತದೆನ್ನಲು ನಾನು ಕಂಡಂತೆ  ಜಿ.ಬಿ. ಮಲ್ಲಿಕಾರ್ಜುನ ಸ್ವಾಮಿಯವರೂ ಉತ್ತಮ ಉದಾಹರಣೆ ಎಂದರೆ ತಪ್ಪಾಗದು. ಸಾಂಘಿಕ ಚಟುವಟಿಕೆಗಳು, ಕಷ್ಟಗಳನ್ನು ಸಹಿಸಿಕೊಂಡು ನಗುತ್ತ ಬಾಳುವುದು, ವಿನೀತತೆಗಳೇ ಅವರ ಬಲವೆಂದು ಅವರನ್ನು ಹತ್ತಿರದಿಂದ ನೋಡಿ ತಿಳಿದಿದ್ದೇನೆ.  70ರ ಪ್ರಾಯದಲ್ಲಿರುವ ಅವರ ವೃತ್ತಿಪರ ಚಟುವಟಿಕೆ ಮತ್ತು ಕ್ರಿಯಾಶೀಲತೆಗಳು ಬೆರಗು ಹುಟ್ಟಿಸುತ್ತವೆ. ಜನರೊಂದಿಗಿನ ಸೌಹಾರ್ದದ ನಡವಳಿಕೆ, ಹೊಸ ಸಂಗತಿಗಳನ್ನು ತಿಳಿಯುವ ಕುತೂಹಲಗಳಿಂದಾಗಿ ಅವರು ಆಪ್ತರಾಗುತ್ತಾರೆ.  ಮನಸ್ಸುಮಾಡಿದ್ದರೆ, ಸ್ಥಳೀಯ ರಾಜಕೀಯದಲ್ಲಿ ಮಿಂಚಬಹುದಾಗಿದ್ದ  ಎಲ್ಲ ಅವಕಾಶಗಳಿದ್ದರೂ, ಅದರಿಂದ ದೂರವುಳಿದು, ತಮ್ಮಿಂದಾದ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ನಾನು ಇನ್ನೂ ಎರಡು ತಿಂಗಳು ಅಮೆರಿಕಾದಲ್ಲಿರಬೇಕಿದೆ. ಬ್ಲಾಗ್ ಪ್ರಕಟಣೆ ನಿಲ್ಲಬಾರದೆಂಬುದು ಆಶಯ. ಅದು ಈವರೆಗೂ ನಡೆದುಬಂದಿದೆ.  ಮಿತ್ರ ಅಪೂರ್ವ, ಆರ್ಯಮಿತ್ರ ಮುಂತಾದವರ ಸಹಕಾರದಿಂದ ಇದು ಸಾಧ್ಯವಾಗಿದೆ. ಮಲ್ಲಿಕಾರ್ಜುನ ಸ್ವಾಮಿಯವರನ್ನು ಕುರಿತಾಗಿ ಚಿಕ್ಕದೊಂದು ಟಿಪ್ಪಣಿಯನ್ನು ಅವರ ಸೋದರ, ನನ್ನ ಮಿತ್ರ ಅಪೂರ್ವ ಇಲ್ಲಿ ದಾಖಲಿಸಿದ್ದಾರೆ. ಅವರಿಗೆ ವಂದನೆಗಳು.   ಶಂಕರ ಅಜ್ಜಂಪುರ  ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ - 99866 72483 ಮಿಂಚಂಚೆ - shankarajp@gmail.com ==================