80. ಅನನ್ಯ ಪ್ರತಿಭೆಯ ರಂಗಕರ್ಮಿ - ಎ.ಎಸ್. ಕೃಷ್ಣಮೂರ್ತಿ
ಆತ್ಮೀಯ ಓದುಗರೇ,
ಎಲ್ಲರಿಗೂ 62ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡದ ಬೆಳವಣಿಗೆಯಲ್ಲಿ ಭಾಷೆಯ ಬಳಕೆ ಮತ್ತು ಸಂವಹನಗಳಿಗೆ ಪ್ರಾಮುಖ್ಯತೆಯಿದೆಯಷ್ಟೆ. ಈ ನಿಟ್ಟಿನಲ್ಲಿ "ಅಂತರಜಾಲದಲ್ಲಿ ಅಜ್ಜಂಪುರ" ಬ್ಲಾಗ್ ಮೂಲಕ ನನ್ನೂರು ಅಜ್ಜಂಪುರದ ಸಾಧಕರು, ದೇವಾಲಯಗಳು, ಆಚರಣೆಗಳು, ಹಬ್ಬ-ಹರಿದಿನಗಳು, ಸಂಘ-ಸಂಸ್ಥೆಗಳು ಮುಂತಾದ ವಿಶೇಷಗಳ ಹಲವು ಆಯಾಮಗಳನ್ನು ದಾಖಲಿಸುವ ಕಾರ್ಯವು ನನ್ನ ಅನೇಕ ಮಿತ್ರರ ಸಹಾಯ ಸಹಕಾರಗಳಿಂದ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ನೀವು ಕೂಡ ಊರಿನ ಅನೇಕ ವಿಶೇಷಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ, ಸಂಘ-ಸಂಸ್ಥೆಗಳ ಬಗ್ಗೆ ಚಿತ್ರಸಹಿತ ಮಾಹಿತಿಯನ್ನು ಕೆಳಕಂಡ ಈ-ಮೇಲ್ ವಿಳಾಸಕ್ಕೆ ಕಳಿಸಿ ಸಹಕರಿಸಲು ಕೋರುತ್ತೇನೆ.
ಪ್ರಸ್ತುತ ರಾಜ್ಯೋತ್ಸವದ ಈ ಸಂಚಿಕೆಯಲ್ಲಿ ಅಜ್ಜಂಪುರದ ಪ್ರಸಿದ್ಧ ರಂಗಕರ್ಮಿ ಶ್ರೀ ಎ.ಎಸ್. ಕೃಷ್ಣಮೂರ್ತಿಯವರನ್ನು ಕುರಿತಂತೆ ಲೇಖನ-ಚಿತ್ರಗಳನ್ನು ಪ್ರಕಟಿಸಲಾಗಿದೆ.
ವಂದನೆಗಳೊಡನೆ.
- ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ಬ್ಲಾಗ್
ಈ-ಮೇಲ್ ವಿಳಾಸ -shankarajp@gmail.com
ದೂರವಾಣಿ - 99866 72483
-------------------------------------------------------------------------------------------------------------------------------------------------------------------
![]() |
ಎ.ಎಸ್. ಕೃಷ್ಣಮೂರ್ತಿಯವರಿಗೆ ಅಭಿನಂದನಾ ಪತ್ರ ಸಮರ್ಪಣೆ |
ರಂಗಕರ್ಮಿಗಳಲ್ಲಿ ನಟರು ಜನಪ್ರಿಯರಾಗುವುದು ಸ್ವಾಭಾವಿಕ. ಅವರು ತಮ್ಮ ಅಭಿನಯಕಲೆಯಿಂದ ಜನರೆದುರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆಯುತ್ತಾರೆ. ಆದರೆ ರಂಗಕಲೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನೇಪಥ್ಯದಲ್ಲಿರುವ ರಂಗಕರ್ಮಿಗಳ ಸಹಕಾರ, ಕುಶಲತೆಗಳಿಲ್ಲದೆ ಪೂರ್ಣವಾಗದು. ನೈಜ ಅರ್ಥದಲ್ಲಿ ಅವರು ಎಲೆಮರೆಯಲ್ಲಿಯೇ ಇರುತ್ತಾರೆ.

![]() |
ರಂಗಾಯಣದ ಪ್ರಶಾಂತ ಹಿರೇಮಠ, ಹಿರಿಯ ರಂಗಕರ್ಮಿ ಶ್ರೀಕಂಠ ಗುಂಡಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಮಲಾ ಮಠಪತಿ ಇವರಿಂದ ಸನ್ಮಾನಿತರಾದ ಎ.ಎಸ್. ಕೃಷ್ಣಮೂರ್ತಿ |

ರಂಗಾಯಣ ಕರ್ನಾಟಕದ ದೊಡ್ಡ ರಂಗಸಂಸ್ಥೆಯು ರಂಗಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಹಸಿರು ದಸರಾ ನಾಟಕೋತ್ಸವದಲ್ಲಿ ರಾಜ್ಯದ ಒಂಭತ್ತು ರಂಗಸಾಧಕರನ್ನು ಸನ್ಮಾನಿಸಲಾಯಿತುಈ ಕಾರ್ಯಕ್ರಮ ದಿನಾಂಕ 09-10-2106ರಂದು ಲ್ಲಿ ಮೈಸೂರಿನಲ್ಲಿ ನವರಾತ್ರಿ ರಂಗೋತ್ಸವದಲ್ಲಿ ನಡೆಯಿತು. ರಂಗದಾಖಲೆಗಳ ಸಂಗ್ರಹಕಾರ, ರಂಗಕರ್ಮಿ, ಕಲಾವಿದ ಎಂದು ಗುರುತಿಸಿ ಮೈಸೂರಿನ ರಂಗಾಯಣವು ಸನ್ಮಾನಿಸಿ ಅಭಿನಂದನಾ ಪತ್ರ ನೀಡಿತು. ಈ ಸಂದರ್ಭದಲ್ಲಿ ರಂಗಾಯಣದ ಪ್ರಶಾಂತ ಹಿರೇಮಠ, ಹಿರಿಯ ರಂಗಕರ್ಮಿ ಶ್ರೀಕಂಠ ಗುಂಡಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಮಲಾ ಮಠಪತಿ ಉಪಸ್ಥಿತರಿದ್ದು ಆತ್ಮೀಯವಾಗಿ ಸನ್ಮಾನಿಸಿರುವ ಕೆಲವು ಚಿತ್ರಗಳು ಇಲ್ಲಿವೆ.
-0-0-0-0-0-0-0-0-0-0-
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ