104. ಅಜ್ಜಂಪುರದಲ್ಲಿ ಮೂರನೇ ವರ್ಷದ ಶ್ರೀ ಹನುಮ ಜಯಂತಿ ಉತ್ಸವ

 ಓದುಗರೆಲ್ಲರಿಗೂ 2020ನೇ ವರ್ಷದ ಶುಭಾಶಯಗಳು 




09-12-2019 ಭಾನುವಾರ, ಎಲ್ಲೆಡೆಯಂತೆ , ನನ್ನ ಹುಟ್ಟೂರು ಅಜ್ಜಂಪುರದಲ್ಲೂ ಶ್ರೀ ಹನುಮ ಜಯಂತಿ ಕಾರ್ಯಕ್ರಮ ಆಯೋಜಿತವಾಗಿತ್ತು. ದೇವಾಲಯವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಮೊದಲು ಪವಮಾನ ಹೋಮವನ್ನು ಮಾಡುವುದು ಎಂದುಕೊಂಡಿದ್ದರು. ಹಾಗೆ ಭಾವಿಸಲು, ಪವಮಾನ ಹೋಮವೆಂದರೆ ಆಂಜನೇಯನನ್ನು ಉದ್ದೇಶಿಸಿ ಮಾಡುವುದೆಂಬ ಕಲ್ಪನೆ ಅದು ಹೇಗೋ ಆಯೋಜಕರ ಮನದಲ್ಲಿ ನೆಲೆ ನಿಂತಿತ್ತು. ಬಹುಶಃ ಆಂಜನೇಯನಿಗೆ ಇರುವ ಇನ್ನೊಂದು ಹೆಸರಾದ ಪವನ ಎಂಬುದು ಕಾರಣವಿದ್ದೀತೆಂದು ನಂತರ ಮಾತನಾಡಿದಾಗ ತಿಳಿಯಿತು. ಇದರ ವ್ಯತ್ಯಾಸಗಳನ್ನು, ಉದ್ದೇಶಗಳನ್ನು ತಿಳಿಸಿದ ನಂತರ ಬದಲಾವಣೆ ಮಾಡಿಕೊಳ್ಳಲು ಒಪ್ಪಿದರು. 
ಕಾರ್ಯಕ್ರಮವನ್ನು ಅದ್ದೂರಿಯಿಂದ ನಡೆಸುತ್ತಿರುವ ಅವಧೂತ ಬಳಗದವರು ಹೋಮ ಕಾರ್ಯಕ್ರಮವನ್ನು ತಮ್ಮ ಫಲಕದಲ್ಲಿ ಪ್ರದರ್ಶಿಸಿದ್ದರೇ ವಿನಾ, ಅದರ ಕುರಿತಾದ ಸಿದ್ಥತೆಗಳ ವಿವರ ಅವರಿಗೆ ತಿಳಿದಂತಿರಲಿಲ್ಲ. ನಂತರ ನಡೆದ ಸಮಿತಿಯ ಸಭೆಯಲ್ಲಿ ಇದೆಲ್ಲವನ್ನೂ ಸ್ಪಷ್ಟಪಡಿಸಲಾಯಿತು. ಸ್ಥಳಪುರೋಹಿತರಾಗಿ  ನಮ್ಮೂರಿನ ಈ ಕಾರ್ಯಕ್ರಮದ ಹೋಮ-ಹವನಾದಿಗಳನ್ನು ನಾನು ನಡೆಸಿಕೊಡುವ ಸದವಕಾಶ ದೊರೆತದ್ದು ತುಂಬ ಸಂತೋಷ ತಂದಿತು.  
ಅಜ್ಜಂಪುರದ ಬ್ರಾಹ್ಮಣ ಸಮಾಜದಿಂದ ಆಯೋಜಿತವಾಗಿದ್ದ ಗಣಪತಿ, ನವಗ್ರಹ, ಶ್ರೀಸೂಕ್ತ, ಪುರುಷಸೂಕ್ತ, ರಾಮತಾರಕ ಹಾಗೂ ಆಂಜನೇಯ ಗಾಯತ್ರಿ ಪುರಸ್ಸರ ಐದು ಹವನಗಳು ಅಜ್ಜಂಪುರದ ಸ್ಥಳ ಪುರೋಹಿತ ಶ್ರೀ ಶಂಕರ ಅಜ್ಜಂಪುರ ಇವರ ನೇತೃತ್ವದಲ್ಲಿ ನೆರವೇರಿದವು. ಬೆಂಗಳೂರು ಹಾಗೂ ಪಕ್ಕದ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿದ್ದರು, ಸ್ಥಳೀಯರಾದ ಸರ್ವಶ್ರೀ ಬಿ.ಎನ್.ರಾಮಚಂದ್ರ, ಅರ್ಚಕ ಅನೂಪ್ ಮಿತ್ರ, ಅಖಿಲ್ ಮಿತ್ರ, ಅಜ್ಜಂಪುರ ರಾಮಚಂದ್ರ, ಪವನ್ ಕುಮಾರ್ ಮುಂತಾದವರಿದ್ದರು.

ಕಳೆದ ಮೂರು ವರ್ಷಗಳಿಂದ ಅಜ್ಜಂಪುರದಲ್ಲಿ ಅವಧೂತ ಬಳಗದವರು ಈ ಕಾರ್ಯಕ್ರಮವನ್ನು ವೈಭವದಿಂದ ಆಯೋಜಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಸಾರ್ವಜನಿಕ ಸಂತರ್ಪಣೆ, ಸಂಜೆ ವೈಭವದ ರಥಯಾತ್ರೆಗಳು ಇಲ್ಲಿನ ವಿಶೇಷ. ವೀರಗಾಸೆ ಕುಣಿತ, ಸುಶ್ರಾವ್ಯ ನಾದಸ್ವರಗಳೊಡನೆ ಊರಿನ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಯಿತು.  



  

   



 





ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.