ಪೋಸ್ಟ್‌ಗಳು

ಡಿಸೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆ ಪರಿಮಳಕ್ಕೆ ಮರುಳಾಗದವರುಂಟೇ ? !

ಇಮೇಜ್
ನನಗೆ ಚೆನ್ನಾಗಿ ನೆನಪಿದೆ. ಅಜ್ಜಂಪುರದ ರೇಲ್ವೇ ಸ್ಟೇಷನ್ ನ ಎದುರಿಗಿರುವ ಶ್ರೀ ಶೆಟ್ಟರ ಸಿದ್ಧಪ್ಪನವರ ಮನೆಯ ಎದುರು ಬಂಗಾರ ಬಣ್ಣದ ಕೊತ್ತಂಬರಿಯ ರಾಶಿ ಬಿದ್ದಿರುತ್ತಿತ್ತು. ಅಲ್ಲಿ ಹಾದುಹೋಗುವಾಗ ಅದರ ಪರಿಮಳ ಹರಡಿರುತ್ತಿತ್ತು. ಸಮೃದ್ಧಿಯೆಂಬುದು ಮೈವೆತ್ತಿದ್ದಂಥ ದಿನಗಳವು. ಅಜ್ಜಂಪುರದ ಕೃಷಿ ಪದ್ಧತಿಯು ಕಾಲದಿಂದ ಕಾಲಕ್ಕೆ ಬದಲಾದ ಪರಿಯನ್ನು, ಅದರೊಂದಿಗೆ ತನ್ನ ಸ್ವಂತಿಕೆಯನ್ನು ಕಾಯ್ದಿಟ್ಟುಕೊಂಡಿರುವ ಸಂಗತಿಯನ್ನು ಅಪ್ಪಾಜಿ (ಅಪೂರ್ವ) ಇಲ್ಲಿ ದಾಖಲಿಸಿದ್ದಾರೆ. ಅವರ ಸಕ್ರಿಯ ಭಾಗವಹಿಸುವಿಕೆಯಿಂದ ಬ್ಲಾಗ್ ಗೆ ಅಪಾರ ಬೆಂಬಲ ದೊರಕಿದೆ. ಇದು ಹೀಗೇ ಮುಂದುವರೆಯಲೆಂದು ಆಶಿಸುತ್ತೇನೆ. ಇಲ್ಲಿಯೇ ಇನ್ನೊಂದು ಮಾತು. ನಾನು ಪ್ರಕಟಪಡಿಸಿರುವ ನನ್ನ ಶಾಲೆಯ ಕುರಿತಾದ ಜಾಲಪುಟ ಎಸ್.ಎಸ್.ಟಿ.ಬಿ. ಹೈಸ್ಕೂಲ್ ವಾರದಿಂದ ವಾರಕ್ಕೆ ಮೆಚ್ಚುಗೆ ಗಳಿಸುತ್ತಿದೆ. ಇತ್ತೀಚಿನ ಬೆಳವಣಿಗೆಯೆಂದರೆ, ಈ ಶಾಲೆಗೆ ಸೇರಿದ ಹಲವು ವಿದ್ಯಾರ್ಥಿಗಳು ರಾಜ್ಯ, ದೇಶ, ಅಂತರರಾಷ್ಟ್ರೀಯ ಸ್ಥಳಗಳನ್ನು ತಲುಪಿದ್ದಾರೆ. ಅವರಿಂದ ಪ್ರತಿವಾರ ಮೆಚ್ಚುಗೆಯ ಪ್ರತಿಕ್ರಿಯೆಗಳು ಬರುತ್ತಿವೆ. ಅವರೆಲ್ಲರಿಗೆ ನನ್ನ ಮನವಿಯೆಂದರೆ, ಈ ಬ್ಲಾಗ್ ಕೂಡ ಅಜ್ಜಂಪುರಕ್ಕೆ ಸಂಬಂಧಿಸಿದ್ದಾಗಿರುವುದರಿಂದ, ನಿಮ್ಮ ನೆನಪುಗಳನ್ನು ಇಲ್ಲಿ ಚಿತ್ರಸಹಿತ ದಾಖಲಿಸಲು ಕೋರುತ್ತೇನೆ. - ಶಂಕರ ಅಜ್ಜಂಪುರ ಹಿಂಗಾರು ಕಡಲೆ ಬೆಳೆ ರಾತ್ರಿ 7-8ರ ಸಮಯ. ಮಾಗಿಯ ಕಾಲ. ನಮ್ಮೂರಿನ ಚೌ