ಪೋಸ್ಟ್‌ಗಳು

ಫೆಬ್ರವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

02. ಇದ್ದದ್ದು-ಇಲ್ಲದ್ದು

ಇಮೇಜ್
ಶೀರ್ಷಿಕೆ ಬದಲಾಗಿರುವುದನ್ನು ನೀವು ಗಮನಿಸಿರಬಹುದು. ಸಾಮಾನ್ಯ ಉಪಯೋಗದಲ್ಲಿರುವ ಪದವನ್ನು ನಾನು ಬಳಸಿದ್ದೆ. ಆದರೆ ಅದು ಹಾಗಲ್ಲ, ಶೀರ್ಷಿಕೆ ಸರಿಯಾದ ರೂಪ ಹೀಗಿರಬೇಕು ಎಂದು ಆಧಾರ ಸಹಿತವಾಗಿ ಮಿತ್ರ ಮಂಜುನಾಥ ಅಜ್ಜಂಪುರ  ತಿಳಿಸಿದ್ದಾರೆ. ಕಮೆಂಟ್ ನಲ್ಲಿ ಅವರ ಪ್ರತಿಕ್ರಿಯೆಯನ್ನು ಗಮನಿಸಿ. ಇಂಥ ಸಕ್ರಿಯ ಭಾಗವಹಿಸುವಿಕೆಯೇ ಬ್ಲಾಗ್‌ನ ಗುಣಮಟ್ಟ ಹೆಚ್ಚಿಸಬಲ್ಲದು. ಅಜ್ಜಂಪುರದ ಬಿ.ಆರ್. ಮಮತಾ ಫೇಸ್ ಬುಕ್‌ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಬರೆಯುವಾಗ ಹೀಗೆ ಹೇಳಿದ್ದಾರೆ : "very nice blog uncle, ಖುಷಿ ಆಗುತ್ತೆ, ನಮ್ಮ ಊರಿನ ಬಗ್ಗೆ ನನ್ನ ಫ್ರೆಂಡ್ಸ್ ಎಲ್ಲರಿಗೂ ವಿವರಿಸಲು ಈ ಬ್ಲಾಗ್ ತುಂಬಾ ಚೆನ್ನಾಗಿದೆ".  ಹಲವರಿಗೆ ವಿದ್ಯಾಭ್ಯಾಸ, ಉದ್ಯೋಗ ಮುಂತಾದ ಕಾರಣಗಳಿಂದಾಗಿ ಈಗ ಊರಿನಲ್ಲಿ ಇರಲಾಗದಿದ್ದರೂ, ಅದರ ಬಗ್ಗೆ ಅಭಿಮಾನವೇನೂ  ಕುಂದುವುದಿಲ್ಲ. ಬದಲಾಗಿ ಇನ್ನಷ್ಟು ಹೆಚ್ಚಾಗುತ್ತದೆ. ಹುಟ್ಟಿದೂರಿನ ಸೆಳೆತವೇ ಅಂಥದು. ಆಕೆ ಹೇಳಿರುವಂತೆ ಊರಿನ ಬಗ್ಗೆ ವಿವರಿಸಲು, ತಿಳಿಯಲು ನನ್ನ ನೆನಪಿನಲ್ಲಿರುವ ಕೆಲ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವೆ. ಇಲ್ಲದ್ದನ್ನು ಇದ್ದಂತೆ ಚಿತ್ರಿಸುವಂತಾಗುವುದೇ ಇಂಥ ಬರವಣಿಗೆಗಳಲ್ಲಿ ಇರುವ ಅಪಾಯ. ಹಾಗಾಗದಂತೆ ನಾನು ಗಮನಿಸಿದ್ದಷ್ಟನ್ನು ಮಾತ್ರವೇ ಇಲ್ಲಿ ದಾಖಲಿಸಿರುವೆ. ಈ ಮಾಹಿತಿಗಳಿಗೆ ಪೂರಕವಾಗಿ ನಿಮ್ಮಿಂದ ಇನ್ನಷ್ಟು ವಿವರಗಳು ಹರಿದುಬರುವಂತಾದರೆ ಸಂತೋಷ. ಈ ಬಗ್ಗೆ ಇನ್ನೂ ಗ

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

ಇಮೇಜ್
ಹಣ್ಣೆ ಸಂಜೀವಯ್ಯನವರ ಭಾಷಣವನ್ನು ಶ್ರೀ ಕೆಂಗಲ್ ಹನುಮಂತಯ್ಯನವರು ಗಮನವಿರಿಸಿ ಆಲಿಸುತ್ತಿರುವುದು. ಪಕ್ಕದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಶ್ರೀ ತಗಡೂರು ರಾಮಚಂದ್ರರಾಯರು. ಶಂಕರ ಅಜ್ಜಂಪುರ, ರಾಮಚೆಂದಿರ್ ಹಾಗೂ ಹಣ್ಣೆ ಸಂಜೀವಯ್ಯನವರ ಮೊಮ್ಮಗ ಶ್ರೀ ರಾಮಚಂದ್ರ  ನಾನು ಅಂತರಜಾಲದಲ್ಲಿ ಅಜ್ಜಂಪುರ ಎಂಬ ಈ ಬ್ಲಾಗನ್ನು ಆರಂಭಿಸಿ ಎಂಟು ವರ್ಷಗಳೇ ಸಂದಿವೆ. ಪ್ರತಿ ತಿಂಗಳಿಗೆ ಒಂದು ಲೇಖನದಂತೆ, ನಾನೂ ಬರೆಯುತ್ತ, ಅಜ್ಜಂಪುರದ ಬಂಧು-ಮಿತ್ರರನ್ನು  ಕಾಡಿ ಬೇಡಿ ಅವರಿಂದಲೂ ಲೇಖನಗಳನ್ನು ಬರೆಸುತ್ತ, ಇದೀಗ ನೂರನೆಯ ಲೇಖನದತ್ತ ಬಂದಿದ್ದಾಯಿತು.  ಆರಂಭದಲ್ಲಿ ಕೇವಲ ಅಜ್ಜಂಪುರದ ವ್ಯಕ್ತಿಗಳು, ವಿಶೇಷಗಳಿಗೆ ಮಾತ್ರ  ಸಂಬಂಧಿಸಿದ ಲೇಖನಗಳನ್ನು ಬರೆಯುತ್ತೇನೆಂದು ಭಾವಿಸಿದ್ದರೂ ಅದು ಹಾಗಾಗಲು ಬಿಡಲಿಲ್ಲ. ಅಜ್ಜಂಪುರದ ಸುತ್ತಮುತ್ತಣ ವ್ಯಕ್ತಿಗಳು, ಸ್ಥಳಗಳು ಅಜ್ಜಂಪುರವನ್ನು ಪ್ರಭಾವಿಸಿದ್ದು ಇದೆಯಾಗಿ, ಅವುಗಳನ್ನು ಸ್ಮರಿಸದೇ ಹೋದರೆ, ಅದು ಅಪೂರ್ಣ ಕಾರ್ಯವಾದೀತೆಂಬ ತಿಳುವಳಿಕೆ ನಂತರ ಮೂಡಿತು. ಹೀಗಾಗಿಯೇ ಈ ಸಂಕಲನದಲ್ಲಿ ಅಜ್ಜಂಪುರದ ಸಮೀಪದ ಗಡಿಹಳ್ಳಿ, ಹಣ್ಣೆ, ಬಗ್ಗವಳ್ಳಿ ಮುಂತಾದ ಗ್ರಾಮಗಳ ಪ್ರಸ್ತಾಪ ಬಂದಿದೆ. ಇದು ಅಜ್ಜಂಪುರದ ವಿಷಯ ವ್ಯಾಪ್ತಿಗೆ ಪೂರಕವಾಗಿರುವುದರಿಂದ ಹೆಚ್ಚಿನ ಮಾಹಿತಿಗಳನ್ನು ಅರಿಯಲು ಸಹಾಯಕವಾಯಿತು. ಅದಂತಿರಲಿ. ಈ ಲೇಖನದಲ್ಲಿ ಪ್ರಸ್ತಾಪಿಸಿರುವ ಶ್ರೀ ಹಣ್ಣೆ ಸಂಜೀವಯ್ಯನವರು ಅಜ್ಜಂಪುರದೊಡನೆ