ಪೋಸ್ಟ್‌ಗಳು

2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಮೃತಮಹಲ್ ಕಾವಲು ಉಳಿಸಿ - ಅವಿರತ ಹೋರಾಟದ ಕ್ರೋಢೀಕೃತ ವರದಿ - ಭಾಗ 2

ಇಮೇಜ್
ಸಚಿವ ಟಿ . ಬಿ. ಜಯಚಂದ್ರರಿಂದ ಪರಿಸ್ಥಿತಿಯ ಪರಿಶೀಲನೆ   ಈ ತಳಿ ಅಭಿವೃದ್ಧಿ ಕೇಂದ್ರಕ್ಕೆ ಅತಿ ಜರೂರಾಗಿ ಬೇಕಿರುವ ಹೆಚ್ಚುವರಿ ಸಿಬ್ಬಂದಿ, ವಾಹನಗಳು, ಪಶು ಆಸ್ಪತ್ರೆಗಳ ಆರಂಭ, ಮೇವು ಬೆಳೆಯಲು ವ್ಯವಸ್ಥೆ, ಒತ್ತುವರಿಯಾಗಿರುವ ಜಮೀನುಗಳನ್ನು ಬಿಡಿಸಿಕೊಳ್ಳುವುದು, ವಸತಿ ಗೃಹಗಳ ಪುನರ್ ನಿರ್ಮಾಣ, ಭ್ರಷ್ಟ ಕಾವಲುಗಾರ ಸಿಬ್ಬಂದಿಯ ಸುಧಾರಣೆ, ಘನೀಕೃತ ವೀರ್ಯ ಬ್ಯಾಂಕ್ ಸ್ಥಾಪನೆ ಮುಂತಾದ ಹಲವಾರು ಮುಖ್ಯ ಸುಧಾರಣೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು. ಇದಕ್ಕೆ ಸಾರ್ವಜನಿಕರ, ಸಿಬ್ಬಂದಿಯ ಬೆಂಬಲವನ್ನೂ ಕೋರಿದರು. ಇದೆಲ್ಲವೂ ಕಾರ್ಯಗತವಾಗುವವರೆಗೆ ತಾವು ಕಡೂರಿನಲ್ಲಿ ವಾಸಿಸುತ್ತ ಕಾರ್ಯಾಚರಣೆ ನಡೆಸುವುದಾಗಿಯೂ ತಿಳಿಸಿದರು. ಇದೇ ಹಂತದಲ್ಲಿ ನಿವೃತ್ತ ನಿರ್ದೇಶಕರಾದ ಡಾ. ಟಿ.ಎಸ್. ಕೃಷ್ಣಮೂರ್ತಿಯವರನ್ನು ಸಂಪರ್ಕಿಸಿ, ಅವರ ಅನುಭವದ ಬೆಳಕಿನಲ್ಲಿ ಕೈಗೊಳ್ಳಬಹುದಾದ ಸುಧಾರಣೆಗಳ ಬಗ್ಗೆ ಚರ್ಚಿಸಿದರು. ಅದರಂತೆ ಡಾ. ಕೃಷ್ಣಮೂರ್ತಿಯವರೂ ಸೂಕ್ತವಾಗಿ ಸ್ಪಂದಿಸಿ ಅಗತ್ಯ ಸಲಹೆಗಳನ್ನು ನೀಡಿದರು.  ಇದೆಲ್ಲ ಆಗಿ ಒಂದು ತಿಂಗಳೂ ಸಂದಿರಲಿಲ್ಲ. ಡಿಸೆಂಬರ್ ವೇಳೆಗೆ, ಹೊಸದಾಗಿ ನಿಯುಕ್ತರಾಗಿದ್ದ ಡಾ. ರಾಮಚಂದ್ರರ ಕಾರ್ಯವೈಖರಿ ಬಯಲಿಗೆ ಬಂದಿತು. ಊದುವುದನ್ನು ಬಿಟ್ಟು ಬಡಿಯುವುದನ್ನು ತೆಗೆದುಕೊಂಡಂತಾಯಿತು ಸಂಸ್ಥೆಯ ಪರಿ. ಹಿಂದಿದ್ದ ಡಾ. ಸುರೇಶ್, ಅಜ್ಜಂಪುರದಲ್ಲಿಯಾದರೂ ಇರುತ್ತಿದ್ದರು. ಡಾ. ರಾಮಚಂದ್ರ ಕಡೂರಿನಿಂದ ಓಡಾಡಿಕೊಂಡು ಕಾರ್ಯ

ಅಮೃತಮಹಲ್ ಕಾವಲು ಉಳಿಸಿ -ಅವಿರತ ಹೋರಾಟದ ಕ್ರೋಢೀಕೃತ ವರದಿ ಸಂಗ್ರಹ - ಭಾಗ ೧

ಇಮೇಜ್
ಅಮೃತಮಹಲ್  ತಳಿ  ಸಂವರ್ಧನಾ ಕೇಂದ್ರ, ಅಜ್ಜಂಪುರ ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು  ಈ ಲೇಖನ ಸರಣಿ ಮೂರು ಸಂಚಿಕೆಗಳಲ್ಲಿದೆ. ಅಜ್ಜಂಪುರದಲ್ಲಿರುವ ಯುವ ಪತ್ರಕರ್ತ ಶ್ರೀ ಎನ್. ವೆಂಕಟೇಶ ಹಾಗೂ ಅಮೃತಮಹಲ್ ಕಾವಲು ಉಳಿಸಿ ಹೋರಾಟ ಸಮಿತಿಯವರ ಅವಿರತ ಶ್ರಮ ಮತ್ತು ಹೋರಾಟದ ಫಲವಾಗಿ ಅಜ್ಜಂಪುರದ ಅಮೃತಮಹಲ್ ಪಶು ಸಂವರ್ಧನಾ ಕ್ಷೇತ್ರದ ಅಸ್ತಿತ್ವ ನಾಶವಾಗದಂಥ ನೆಲೆ ಕಂಡಿದೆ. ಡಾ. ಟಿ.ಎಸ್. ಕೃಷ್ಣಮೂರ್ತಿಯವರ ಕಳಕಳಿಯುಕ್ತ ಸಲಹೆ ತಮ್ಮ  ಸಗಣಿಯ ರಾಶಿಯಲ್ಲೇ ಮಲಗಿರುವ ಗೋ-ಕುಲ ಈ ಸಂಸ್ಥೆಯನ್ನು ಅಷ್ಟುದ್ದ ಹೆಸರು ಹಿಡಿದು ಯಾರೂ ಕರೆಯುವುದಿಲ್ಲ, ಬದಲಾಗಿ ಫಾರಂ ಎನ್ನುವುದೇ ಹೆಚ್ಚು ಬಳಕೆಯಲ್ಲಿದೆ. ಫಾರಂನ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲ ಮತ್ತು ಪ್ರೀತಿ. ಏಕೆಂದರೆ ಬಾಲ್ಯದಲ್ಲಿ ಅಲ್ಲಿನ ಅಮೃತಮಹಲ್ ತಳಿಯ ಹಸುಗಳ ಹಾಲನ್ನು ಕುಡಿದೇ ಬೆಳೆದವರು ನಾವೆಲ್ಲ. ಅದರ ಉತ್ತುಂಗ ಸ್ಥಿತಿಯಿದ್ದುದು 60-70ರ ದಶಕಗಳಲ್ಲಿ. ಆಗ ಈ ಕೇಂದ್ರದ ವ್ಯವಸ್ಥಾಪಕರಾಗಿದ್ದ ಶ್ರೀ ಟಿ. ಎಸ್. ಕೃಷ್ಣಮೂರ್ತಿಯವರು ಅದನ್ನು ವ್ಯವಸ್ಥಿತ ರೂಪದಲ್ಲಿಟ್ಟಿದ್ದರು. ಮೊಲ ಸಾಕಾಣಿಕೆಯಂಥ ಹೊಸ ಆಯಾಮವನ್ನು ಅಜ್ಜಂಪುರಕ್ಕೆ ಪರಿಚಯಿಸಿದರು. ಸರಕಾರದಿಂದ ದೊರೆಯುತ್ತಿದ್ದ ಅನುದಾನದಲ್ಲಿ ತಮ್ಮಿಂದ ಸಾಧ್ಯವಿದ್ದುದನ್ನೆಲ್ಲ ಪ್ರಾಮಾಣಿಕವಾಗಿ ಮಾಡಿದರು. ತಮ್ಮ ವೃತ್ತಿ ಮತ್ತು ಸಂಸ್ಥೆಯ ಬಗ್ಗೆ ಅವರಿಗೆ ಭಾವನಾತ್ಮಕ ಸಂಬಂಧಗಳಿದ್ದವು. ಅವರು ನಿವೃತ

ಅಜ್ಜಂಪುರದ ಬಸವಣ್ಣ ದೇವರ ಗುಡಿ

ಇಮೇಜ್
ಎಲ್ಲರಿಗೂ 2016 - ಹೊಸ ವರ್ಷದ ಶುಭಾಶಯಗಳು  ಈ ಲೇಖನದ ಹೊಳಹು ಮೂಡಿದ್ದು ಅಜ್ಜಂಪುರದ ಹಿರಿಯ ಪತ್ರಕರ್ತರಾದ ಶ್ರೀ ಜಿ.ಬಿ. ಮಲ್ಲಿಕಾರ್ಜುನ ಸ್ವಾಮಿಯವರಿಂದ. ಒಮ್ಮೆ ಅವರೊಂದಿಗೆ ಅಜ್ಜಂಪುರದಲ್ಲಿರುವ ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾಗ, ಅವರು ಈಗ ಅಜ್ಜಂಪುರದ ಪೇಟೆಬೀದಿಯಲ್ಲಿ ನೆಲೆಗೊಂಡಿರುವ ಬಸವಣ್ಣನ ದೇವಾಲಯವು ಹಿಂದೆ ಕೋಟೆ ಪ್ರದೇಶದಲ್ಲಿತ್ತು ಎಂಬ ಅಪರೂಪದ ಸಂಗತಿಯನ್ನು ಹೊರಗೆಡಹಿದ್ದರು. ಬಹಳ ಕಾಲ ಅದರ ವಿವರಗಳು ದೊರೆಯಲಿಲ್ಲವಾಗಿ ಹಾಗೇ ನೆನೆಗುದಿಯಲ್ಲಿತ್ತು. ನನ್ನ ಮಿತ್ರ ಅಪೂರ್ವ (ಅಪ್ಪಾಜಿ)ಯನ್ನು ಈ ಬಗ್ಗೆ ಸಂಪರ್ಕಿಸಿದಾಗ, ಅವರು ಆಸ್ಥೆತಳೆದು, ಈ ದೇವಾಲಯದ ಚಿತ್ರ ಮತ್ತು ಲೇಖನದ ವಿವರಗಳನ್ನು ಕಳಿಸಿದರು. ನಾನು ಪದೇ ಪದೇ ವಿನಂತಿಸುತ್ತಿರುವಂತೆ, ಊರಿನಲ್ಲಿರುವವರು ಅಪೂರ್ವರಂತೆಯೇ ಆಸಕ್ತಿ ತಳೆದು ಚಿತ್ರ-ಮಾಹಿತಿಗಳನ್ನು ಕಳಿಸುವಂತಾದರೆ, ಈ ಬ್ಲಾಗ್ ನ್ನು ಅಜ್ಜಂಪುರದ ಬಗ್ಗೆ ಮಾಹಿತಿ ಕಣಜವನ್ನಾಗಿಸಬಹುದು. ಹಾಗೆ ಆದೀತೆಂದು ನನ್ನ ಆಶಯ. ಬ್ಲಾಗ್ ಆರಂಭವಾದಂದಿನಿಂದ ಬೆಂಬಲಿಸುತ್ತಿರುವ ಅಜ್ಜಂಪುರ ಮಂಜನಾಥ, ಮಲ್ಲಿಕಾರ್ಜನ ಅಜ್ಜಂಪುರ, ಬಿ.ಎನ್. ಮಾಧವರಾವ್ ಇವರ ಕೊಡುಗೆಯನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ರುದ್ರದೇವರು ಮತ್ತು ವೀರಭದ್ರದೇವರು ದಕ್ಷಪ್ರಜಾಪತಿಯ ಯಜ್ಞಕಾಲದಲ್ಲಿ ಅವತರಣಗೊಂಡ ಶಿವನ ಉಗ್ರರೂಪವೆನ್ನುವುದು ಪೌರಾಣಿಕ ಐತಿಹ್ಯ. ಈ ಕಥಾನಕವನ್ನು ಒಳಗೊಂಡಿರುವ ಜಾನಪದ ಕಲೆ ವೀರಗಾಸೆ ನಮ್ಮೂರ ವಿಶೇಷಗಳಲ್ಲಿ ಒಂದ

ಅಜ್ಜಂಪುರ ಜಿ ಸೂರಿ

ಇಮೇಜ್
ನಾನು ಈ ಬ್ಲಾಗ್ ನ್ನು ಆರಂಭಿಸಿದಾಗಿನಿಂದ ಹಲವರು ಅಜ್ಜಂಪುರ ಸೂರಿಯವರ ಬಗ್ಗೆ ನೀವೇಕೆ ಇನ್ನೂ ಲೇಖನ ಪ್ರಕಟಿಸಿಲ್ಲ ಎಂದು ಅನೇಕರು  ನನ್ನನ್ನು ಕೇಳುತ್ತಿದ್ದರು. ನಾನು ಅಜ್ಜಂಪುರದಲ್ಲಿ ಇದ್ದ ಸಮಯದಲ್ಲಿ ಅವರ ಅನುವಾದಿತ ಕಥೆ-ಕಾದಂಬರಿಗಳ ಬಗ್ಗೆ ಕೇಳುತ್ತಿದ್ದೆನಾದರೂ,  ಅವರನ್ನು ಭೇಟಿಮಾಡಿ ಮಾತನಾಡುವಷ್ಟು ಸಂಪರ್ಕವಿರಲಿಲ್ಲ. ನಮ್ಮೂರಿನ ಹೆಸರನ್ನು ತಮ್ಮ ಸಾಹಿತ್ಯ ಚಟುವಟಿಕೆಗಳಿಂದ ಜನರ ಮನಸ್ಸಿನಲ್ಲಿ ಮೂಡಿಸಿದ ಸೂರಿಯವರ ಬಗ್ಗೆ ಬರೆಯಬೇಕೆಂಬುದು  ಅನೇಕ ವರ್ಷಗಳ ಆಶಯ. ಮುಂದೆ, ಮಿತ್ರ ಮಲ್ಲಿಕಾರ್ಜುನರು, ಸೂರಿಯವರ ಪುತ್ರನನ್ನು ಸಂಪರ್ಕಿಸಿ ಮಾಹಿತಿ ಕೊಡುವುದಾಗಿಯೂ ತಿಳಿಸಿದ್ದರು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಅವರ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ದೊರೆತ ಸವಿವರ-ಸಚಿತ್ರ ಮಾಹಿತಿಗಿಂತ ಹೆಚ್ಚಿನದೇನೂ ಬೇಕಿರಲಿಲ್ಲ. ಹೀಗಾಗಿ ಕಣಜದಲ್ಲಿ ದೊರೆತ ಈ ಲೇಖನವನ್ನು ಕೃತಜ್ಞತಾಪೂರ್ವಕವಾಗಿ ಇಲ್ಲಿ ಪ್ರಕಟಿಸಿರುವೆ.  - ಶಂಕರ ಅಜ್ಜಂಪುರ  ಕವಿ , ವಚನಕಾರ , ಕಾದಂಬರಿಕಾರ , ಅನುವಾದಕ ಎಲ್ಲಕ್ಕಿಂತ ಹೆಚ್ಚಾಗಿ ಸಹೃದಯ ಸಾಹಿತಿ ಎನಿಸಿಕೊಂಡಿದ್ದ ಜಿ. ಸೂರ್ಯನಾರಾಯಣರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಜ್ಜಂಪುರದಲ್ಲಿ 1939 ರ ಏಪ್ರಿಲ್‌ 17 ರಂದು. ತಂದೆ   ಗೋವಿಂದಪ್ಪನವರು ಮತ್ತು ತಾಯಿ ಪಾರ್ವತಮ್ಮನವರು. ತಂದೆಯವರದು ಮೂಲತಃ ಬಳೆಮಾರುವ ಕಾಯಕ ಪ್ರವೃತ್ತಿಯಾದರೂ , ದೈಹಿಕ ಸೌ

ಇತಿಹಾಸದ ಪುಟ ಸೇರಿದ ಅಜ್ಜಂಪುರದ ಖಾದಿ ಗ್ರಾಮೋದ್ಯೋಗ ಭಂಡಾರ

ದೇಶದ ಎಲ್ಲ ಚಿಕ್ಕ ಹಳ್ಳಿ, ಪಟ್ಟಣ, ನಗರಗಳಂತೆ ಸ್ವಾತಂತ್ರ್ಯ ಸಂಗ್ರಾಮದ ವಿಷಯದಲ್ಲಿ ಅಜ್ಜಂಪುರದ ಮೇಲೆ ಕೂಡ ಅದರ ಪ್ರಭಾವವಿತ್ತು. ಹೀಗಾಗಿಯೇ ಆ ಚಳವಳಿಯಲ್ಲಿ ಅಜ್ಜಂಪುರದ ಅನೇಕರು ಭಾಗವಹಿಸಿದರು. ಶ್ರೀ ಸುಬ್ರಹ್ಮಣ್ಯ ಶೆಟ್ಚರು ಅಜ್ಜಂಪುರದ ಮಟ್ಟಿಗೆ ಆ ದಿನಗಳಲ್ಲಿ ಸ್ಥಳೀಯ ಗಾಂಧಿಯೇ ಆಗಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಅವರ ಮಾತಿಗೆ ಆ ಮಟ್ಟಿನ ಮನ್ನಣೆಯಿತ್ತು. ಗಾಂಧೀಜಿಯವರ ಚಿಂತನೆಗಳಲ್ಲಿ ಸ್ವಾವಲಂಬನೆ, ಖಾದಿ, ಕೃಷಿಗೆ ಬೆಂಬಲ ಮುಂತಾದ ಅನೇಕ ಸಂಗತಿಗಳು ಸೇರಿದ್ದವಷ್ಟೇ. ಅದರಲ್ಲಿ ಖಾದಿ ತಯಾರಿಕೆ ಮತ್ತು ಅದರ ಬಳಕೆ ಬಗ್ಗೆ ಅಜ್ಜಂಪುರದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಕೂಡ ಸಾಕಷ್ಟು ಕೆಲಸಗಳು ನಡೆದವು. ನಾನು ಶಿವಮೊಗ್ಗೆಯಲ್ಲಿ ನೆಲೆಸಿದ ನಂತರ ನಿಧಾನವಾಗಿ ನನ್ನ ಬಡಾವಣೆಯ ಜನರ ಪರಿಚಯವಾಗುತ್ತಾ ಬಂದಿತು. ಆ ಹಂತದಲ್ಲಿ ಶ್ರೀ ಹುಚ್ಚಪ್ಪ ಎನ್ನುವವರ ಪರಿಚಯವೂ ಆಯಿತು. ನನ್ನ ಪರಿಚಯ ಹೇಳಿಕೊಳ್ಳುವಾಗ ನಾನು ಅಜ್ಜಂಪುರದವನು ಎಂದು ಹೇಳಿದ್ದೇ ತಡ, ಅವರ ಪ್ರತಿಕ್ರಿಯೆಯಲ್ಲಿ ತುಂಬ ಉತ್ಸಾಹ ಮೂಡಿದ್ದು ಕಾಣಿಸಿತು. ಅವರು ಹೇಳಿದರು – “ ಸ್ವಾಮೀ, ನಾನು ಕೂಡ ಅಜ್ಜಂಪುರದಲ್ಲಿ ಖಾದಿ ಮಂಡಲಿಯಲ್ಲಿ ಕೆಲಸದಲ್ಲಿದ್ದವ. ಅಂದಿನ ದಿನಗಳನ್ನು ನೆನೆಸಿಕೊಳ್ಳುವುದೇ ಒಂದು ಸಂತಸ, ಏಕೆಂದರೆ, ಯಾವ ಕೈಗಾರಿಕೆಯೂ ಇರದಿದ್ದ ನಿಮ್ಮ ಊರಿನಲ್ಲಿ ನಮ್ಮ ಖಾದಿ ಸಂಸ್ಥೆಯೊಂದೇ ಹೇಳಿಕೊಳ್ಳಬಹುದಾಗಿದ್ದ ಒಂದು ಕೈಗಾರಿಕೆ. ಅದೀಗ ನಶಿಸಿ ಹ

ಮಹಾರಾಜರ ಕಟ್ಟೆ !

ಇಮೇಜ್
  ಅಜ್ಜಂಪುರದ ಶೆಟ್ಟರ ಸಿದ್ಧಪ್ಪನವರ ಪ್ರೌಢಶಾಲೆ, ಕಾಲೇಜು ಆಗಿ ಪರಿವರ್ತನೆಯಾಗಿ ಅರ್ಧ ಶತಮಾನವೇ ಕಳೆದಿದೆ. ಈ ಭವ್ಯ ಕಟ್ಟಡವನ್ನು ಪ್ರವೇಶಿಸುತ್ತಿದ್ದಂತೆಯೇ ಪ್ರಾಂಗಣದಲ್ಲಿ  ಸಿಮೆಂಟಿನಿಂದ ರಚಿಸಿದ ಒಂದು ಕಟ್ಟೆ ಕಾಣುತ್ತದೆ. ಶಾಲೆಯ ಕಟ್ಟಡದ ಸುತ್ತಮುತ್ತ ಅಭಿವೃದ್ಧಿಗೆಂದು ಇದುವರೆಗೆ ಅನೇಕ ಕಾಮಗಾರಿಗಳು ನಡೆದಿವೆಯಾದರೂ, ಕಟ್ಟಡದ ಮುಂಭಾಗವನ್ನು ವಿರೂಪಗೊಳಿಸದೇ, ಅಲ್ಲಿರುವ ಕಟ್ಟೆಯನ್ನು ತೆಗೆಯದೇ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಈ ಕಟ್ಟೆಯೊಡನೆ ಶಾಲೆಗೊಂದು ಭಾವನಾತ್ಮಕ ಸಂಬಂಧವಿದೆ.  ಮಹಾರಾಜರ ಕಟ್ಟೆ ! ಅದೆಂದರೆ ಅಜ್ಜಂಪುರದ ಪುರಸಭೆಯು 1960ರಲ್ಲಿ ಕುಡಿಯುವ ನೀರು ಸರಬರಾಜಿನ ಉದ್ಘಾಟನೆಗೆಂದು ಅಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಆಹ್ವಾನಿಸಿತ್ತು. ಆ ಸಂದರ್ಭದಲ್ಲಿ ಮಹಾರಾಜರು ಉನ್ನತ ಸ್ಥಾನದಲ್ಲಿ ಕಂಗೊಳಿಸಬೇಕೆಂಬ ಉದ್ದೇಶದಿಂದ ಈ ಕಟ್ಟೆಯನ್ನು ನಿರ್ಮಿಸಲಾಯಿತು. ಮಹಾರಾಜರು ಅದರ ಮೇಲೆ ನಿಂತು ತಮ್ಮ ಭಾಷಣವನ್ನು ಮಾಡಿದರು. ಆ ಸವಿನೆನಪಿಗೆಂದು ಅದನ್ನು ಇಂದಿಗೂ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಊರಿನ ಪ್ರಮುಖರು, ಗಣ್ಯರು ಮಹಾರಾಜರನ್ನು ಸ್ವಾಗತಿಸಿದ್ದರು. ಅವರೆಲ್ಲ ಅಂದಿನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಅಪೂರ್ವ ಚಿತ್ರವನ್ನು ಅಜ್ಜಂಪುರದ ಹಿರಿಯರಾದ ಶ್ರೀ ಸತ್ಯನಾರಾಯಣ ಶೆಟ್ಟರು ಕಾಪಿಟ್ಟಿದ್ದಾರೆ.  ಇತ್ತೀಚೆಗಷ್ಟೇ ಫೇಸ್ ಬುಕ್ ನ

ಶಿಕ್ಷಕ - ಶಾಸಕ ಶ್ರೀ ಪಿ. ತಿಪ್ಪಯ್ಯ

ಇಮೇಜ್
ಅತ್ಮೀಯ ಓದುಗರೇ, ಅಜ್ಜಂಪುರದ ಇತ್ತೀಚಿನ ಯುವ ಸಾಧಕರನ್ನು ಕುರಿತು ಪರಿಚಯಿಸುವ ಆಶಯವಿದೆಯಾದರೂ, ಹಿರಿಯರ ಬಗ್ಗೆ ಬರೆಯುವುದು, ತಿಳಿಯಬೇಕಾದುದು ಇನ್ನೂ ಇದೆಯೆನ್ನುವುದು ಕೂಡ ಸಂತಸದ ಸಂಗತಿಯೇ ಸರಿ. ಹೀಗಾಗಿ, ಈ ಸಂಚಿಕೆಯಲ್ಲಿ ಅಜ್ಜಂಪುರದ ಸಭ್ಯ, ಸರಳ ರಾಜಕಾರಣಿ ಮತ್ತು ಶಿಕ್ಷಕರಾದ ಶ್ರೀ ಪಿ. ತಿಪ್ಪಯ್ಯನವರನ್ನು ಕುರಿತ ಲೇಖನವಿದೆ. ಇದನ್ನು ಯುವ ಮಿತ್ರ ಮಲ್ಲಿಕಾರ್ಜುನ ಅಜ್ಜಂಪುರ ಅವರು ತಿಪ್ಪಯ್ಯನವರ ಪುತ್ರ ಶ್ರೀ ಉಮಾಶಂಕರ್ ಅವರನ್ನು ಸಂಪರ್ಕಿಸಿ, ವಿವರಗಳನ್ನು ಸಂಗ್ರಹಿಸಿ ಇಲ್ಲಿ ನೀಡಿದ್ದಾರೆ. ಅವರ ಆಸಕ್ತಿ ಹೆಚ್ಚಿನದು. ಇದೇ ರೀತಿ ಓದುಗ ಬಳಗದಲ್ಲಿರುವ ಮಿತ್ರರು ತಮ್ಮ ಗಮನಕ್ಕೆ ಬರುವ ವಿಶೇಷ ಸಂಗತಿಗಳನ್ನು. ನೆನಪುಗಳನ್ನು ಹಂಚಿಕೊಳ್ಳಲು ಕೋರುತ್ತೇನೆ.  -ಶಂಕರ ಅಜ್ಜಂಪುರ ಶಿಕ್ಷಕ - ಶಾಸಕ ಶ್ರೀ ಪಿ. ತಿಪ್ಪಯ್ಯ ಇಂದು ಸಾಹಿತಿಗಳು ರಾಜಕಾರಣಕ್ಕೆ ಬರಬೇಕೇ ಬೇಡವೇ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಾಹಿತಿಗಳು ರಾಜಕೀಯಕ್ಕೆ ಬಂದರೆ , ರಾಜಕಾರಣವು ಕೆಡುವುದಕ್ಕಿಂತ , ಸಾಹಿತಿಗಳು ಕೆಟ್ಟು ಹೋಗುತ್ತಾರೆ ಎಂಬ ಕಾಳಜಿ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಅವರು ದೂರವಿದ್ದರೆ ಒಳಿತು ಎಂಬ ಭಾವ ಸಮಾಜದಲ್ಲಿ ನೆಲೆ ನಿಂತಿದೆ.   ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯಾಗುವುದಕ್ಕಿಂತ ಮುಂಚೆ ಉಪನ್ಯಾಸಕ ರಾಗಿದ್ದವರು.   ಶಿಕ್ಷಣ ಕ್ಷೇತ್ರದಲ್ಲಿದ್ದ    ಅವರು ಸಕ್ರಿಯ ರಾಜಕಾರಣದಲ್ಲಿ ಭಾ