ಪೋಸ್ಟ್‌ಗಳು

ಜನವರಿ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

22. ಅಜ್ಜಂಪುರದ ಒಂದು ಕೌಟುಂಬಿಕ ಸಮಾವೇಶ

ಇಮೇಜ್
ಆತ್ಮೀಯ ಓದುಗರೆಲ್ಲರಿಗೂ ನೂತನ ವರ್ಷದ ಶುಭಾಶಯಗಳು  ಸರಿಯಾಗಿ ವರ್ಷದ ಹಿಂದೆ ಬೆಂಗಳೂರಿನ ಯಶವಂತಪುರದಲ್ಲಿರುವ ಗಾಯತ್ರೀ ದೇವಾಲಯದಲ್ಲಿ ಅಜ್ಜಂಪುರಕ್ಕೆ ಸೇರಿದ ಹಿರಿಯ ದಂಪತಿಗಳ ಸ್ಮರಣಾರ್ಥ ಕಾರ್ಯಕ್ರಮವೊಂದು ನಡೆಯಿತು. ಅಜ್ಜಂಪುರಕ್ಕೆಂದೇ ಮೀಸಲಾದ ಈ ಬ್ಲಾಗ್‌ನಲ್ಲಿ ಇದರಲ್ಲಿ ಭಾಗವಹಿಸಿದ ಯಾರೂ ಬರೆಯಬಹುದಿತ್ತು. ಅದು ನಡೆದ ಅಲ್ಪಕಾಲದಲ್ಲೇ ಇದರ ವರದಿಯನ್ನು ಪ್ರಕಟಿಸಬಹುದಿತ್ತು. ಆದರೆ ಆ ಕೆಲಸ ನಡೆಯಲಿಲ್ಲವಾಗಿ, ಅದನ್ನಿಲ್ಲಿ ಈಗ ಪ್ರಸ್ತಾಪಿಸುತ್ತಿರುವೆ.  ಇದನ್ನೊಂದು ಆಕ್ಷೇಪವೆಂದು ತಿಳಿಯುವ ಅಗತ್ಯವಿಲ್ಲ. ಊರಿಗೆ ಸಂಬಂಧಿಸಿದಂತೆ, ಇಂಥ ಅನೇಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಅವುಗಳ ಕಿರುವರದಿಗಳು ಬ್ಲಾಗ್‌ನಲ್ಲಿ ಪ್ರಕಟವಾಗುವಂತಾದರೆ, ಬಾಂಧವ್ಯ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎನ್ನುವುದಷ್ಟೇ ಆಶಯ.  ಈ ಕಾರ್ಯಕ್ರಮವನ್ನು ಆಯೋಜಿಸಿದವರು, ಅಜ್ಜಂಪುರದ ಶ್ರೀಮತಿ ಪುಟ್ಟಮ್ಮ ಮತ್ತು ಶ್ರೀ ಶಂಕರಭಟ್ಟರ ಕುಟುಂಬದವರು. ಇವರು ಅಜ್ಜಂಪುರದ ಮಾಜಿ ಪುರಸಭಾಧ್ಯಕ್ಷ ಶ್ರೀ ಸೀತಾರಾಮಭಟ್ಟರ ತಂದೆ ತಾಯಿಗಳು.  ಬೆಂಗಳೂರಿನ ಖ್ಯಾತ ಮುದ್ರಣ ಉದ್ಯಮಿ  ಪಯೋನಿಧಿ ಪ್ರಿಂಟರ್ಸ್‌ನ ಮಾಲಿಕರಾದ ಶ್ರೀ ವೆಂಕಟರಾಮಯ್ಯನವರು  ಇವರನ್ನು ಕುರಿತಂತೆ ಕಿರುಪುಸ್ತಕವನ್ನು  ಈ ಸಂದರ್ಭದಲ್ಲಿ ಬಿಡುಗಡೆಮಾಡಿದರು. ಇದರ ಆಯ್ದ ಭಾಗಗಳನ್ನು ಮುಂದೆ ಪ್ರಕಟಿಸುವ ಉದ್ದೇಶವಿದೆ. ಅತ್ಯಂತ ಸುಂದರವಾಗಿ ಆಯೋಜಿತವಾಗಿದ್ದ ಈ ಕುಟುಂಬದ ಸಮಾವೇಶ