ಪೋಸ್ಟ್‌ಗಳು

ಮೇ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೆರೆ ಹಿಂದಿನ ಶ್ರೀ ಶಂಕರ ಲಿಂಗೇಶ್ವರ ದೇವಾಲಯ

ಇಮೇಜ್
ಪರ್ವತರಾಯನ  ಕೆರೆಯಲ್ಲಿ  ಸೂರ್ಯಾಸ್ತ    ಕೆರೆಯ ಹಿನ್ನೆಲೆಯಲ್ಲಿ ಹಣ್ಣೆ ಗುಡ್ಡ ಸಾಮಾನ್ಯವಾಗಿ ಊರಿಗೆ ನೀರು ನೀಡುವ ಜಲಸ್ಥಾನಗಳಲ್ಲಿ ಒಂದು ಚಿಕ್ಕ ಮಂದಿರವಿರುತ್ತಿದ್ದುದು ವಾಡಿಕೆ.  ದೇವಾಲಯದ ಹೊರನೋಟ  ಈ ವಿಷಯದಲ್ಲಿ ಅಜ್ಜಂಪುರವೂ ಹೊರತಾಗಿಲ್ಲ. ಈ ಚಿತ್ರದಲ್ಲಿ ಕಾಣುವ ಚಿಕ್ಕ ಮಂದಿರವನ್ನು ಕೆರೆ ಹಿಂದಿನ ದೇವಸ್ಥಾನ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಅದು ಇರುವುದು ಪರ್ವತರಾಯನ ಕೆರೆಯ ಏರಿಯ ಬುಡದಲ್ಲಿ. ಹೀಗಾಗಿ ಈ ಹೆಸರೇ ಪ್ರಚಲಿತವಿದ್ದರೂ , ಅಲ್ಲಿ ನೆಲೆಗೊಂಡಿರುವುದು ಶ್ರೀ ಶಂಕರಲಿಂಗೇಶ್ವರ.  ನಾಲ್ಕು ಚದರಡಿಯ ಒಂದು ಗರ್ಭಗೃಹ ಮತ್ತು ಹತ್ತು ಚದರಡಿಯ ಮುಖಮಂಟಪವನ್ನು ಮಾತ್ರ ಹೊಂದಿರುವ ಈ ದೇವಾಲಯ ಅಜ್ಜಂಪುರದ ಪ್ರಾಚೀನವೆಂದು ಹೇಳಬಹುದಾದ ಶಿವಮಂದಿರ. ಇಲ್ಲಿ ಹಿಂದೆ ಸಂಭ್ರಮವಿತ್ತು. ಪೂಜಾದಿಗಳು ಯಥಾಕ್ರಮ ನಡೆಯುತ್ತಿದ್ದ ದಿನಗಳಿದ್ದವು. ಇದರ ನಿರ್ವಹಣೆಗೆಂದು ಸಾಕಷ್ಟು ಕೃಷಿ ಜಮೀನನ್ನು ಉಂಬಳಿ ನೀಡಲಾಗಿತ್ತು. ಮಳೆಯ ಅಭಾವವಿರುವ ವರ್ಷಗಳಲ್ಲಿ ಇಲ್ಲಿ ರುದ್ರಾಭಿಷೇಕವನ್ನು ನಡೆಸಿ , ಮಳೆಯನ್ನು ಆಹ್ವಾನಿಸುವ ಪದ್ಧತಿಯಿತ್ತು. ಈಗ ಅದೆಲ್ಲ ಕೇವಲ ನೆನಪು ಮಾತ್ರ.   ಸಾಧಾರಣವಾಗಿ ಇಂಥ ರಚನೆಯ ದೇವಾಲಯಗಳಲ್ಲಿ ಗರ್ಭಗುಡಿಯ ಮೇಲೆ ಇಟ್ಟಿಗೆ-ಗಾರೆಗಳಿಂದ ನಿರ್ಮಿಸುವ ಶಿಖರವಿರುತ್ತದೆ. ಆದರೆ ಈ ದೇವಾಲಯಕ್ಕೆ ಶಿಖರವನ್ನು ನಿರ್ಮಿಸಲಾ