ಪೋಸ್ಟ್‌ಗಳು

122. ಅಪೂರ್ವ ಅಜ್ಜಂಪುರ - ಸಾಧನೆಗೆ ಸಂದ ಗೌರವ

ಇಮೇಜ್
ಅಪ್ಪಾಜಿ ಅಜ್ಜಂಪುರ (ಕಾವ್ಯನಾಮ - ಅಪೂರ್ವ) ನನ್ನ ಆತ್ಮೀಯ ಮಿತ್ರರು. ನನ್ನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ 'ಅಂತರಜಾಲದಲ್ಲಿ ಅಜ್ಜಂಪುರ' ಬ್ಲಾಗಿನ ಅನೇಕ ಲೇಖನಗಳನ್ನು ಅವರು ವಿಷಯ ಸಂಗ್ರಹಿಸಿ ಬರೆದು ಸಹಕರಿಸಿದ್ದಾರೆ.  ಇತ್ತೀಚೆಗಷ್ಟೇ ಅವರ ಕಥಾ ಕವನ ಸಂಕಲನ  'ಒಂದಷ್ಟು ಕತೆಗಳು, ಕವಿತೆಗಳು' ಅಜ್ಜಂಪುರದಲ್ಲಿ ಬಿಡುಗಡೆಯಾಯಿತು. ಸಾಹಿತ್ಯಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜಿಲ್ಲಾ ಪತ್ರಿಕೆಗಳು ಮತ್ತು ರಾಜ್ಯ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.   ಸೂಕ್ಷ್ಮ ಸಂವೇದನೆಯ ಅಭಿವ್ಯಕ್ತಿಯು ಅವರ ಕವಿತೆಗಳಲ್ಲಿ ಎದ್ದು ಕಾಣುತ್ತದೆ. ವಿಶೇಷತಃ ಅಲ್ಲಮನ ವಚನಗಳ ಅವರ ವಿಶ್ಲೇಷಣೆ ನನಗೆ ತುಂಬ ಮೆಚ್ಚಿನ ಸಂಗತಿ.  ಅವರಿಗೆ ಸಂಬಂಧಿಸಿದಂತೆ 2023ರ ಹೊಸ ಸಂಗತಿ ಎಂದರೆ ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಜ್ಜಂಪುರ ಶಾಖೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ನಿಜಕ್ಕೂ ಅವರ ಸೇವೆ ಮತ್ತು ಅಭಿರುಚಿಗೆ ಸಂದ ಗೌರವವೆಂದೇ ತಿಳಿಯುತ್ತೇನೆ. ಅವರಿಗೆ ಹಾರ್ದಿಕ ಅಭಿನಂದನೆಗಳು.

121. ಅಜ್ಜಂಪುರ ತಾಲೂಕಿಗೆ ರಾಜ್ಯೋತ್ಸವ ಪ್ರಶಸ್ತಿಯ ಮೂರನೇ ಗರಿ : ಕೃಷಿಋಷಿ ಎಸ್.ಚಂದ್ರಶೇಖರ್ ನಾರಣಾಪುರ

ಇಮೇಜ್
ಅಜ್ಜಂಪುರ ತಾಲೂಕು ಆದ ನಂತರ ಸ್ವಾಭಾವಿಕವಾಗಿ ವ್ಯಾಪ್ತಿಯು ವಿಸ್ತಾರವಾಗಿದೆ. ಅಂತೆಯೇ ಅಜ್ಜಂಪುರದ ಸಾಧಕರ ಹಿರಿಮೆಯು ಬೆಳೆಯುತ್ತಿರುವುದು ಸಂತೋಷದ ಸಂಗತಿ. ಅಜ್ಜಂಪುರದ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಸುಬ್ರಹ್ಮಣ್ಯ ಶೆಟ್ಟರು ಹಾಗೂ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾದ ಅಜ್ಜಂಪುರ ಮಂಜುನಾಥ್ ಅವರು ಸೇರಿದಂತೆ, ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಶ್ರೀ ಚಂದ್ರಶೇಖರ್ ಅವರಿಗೆ 2022ನೇ ಸಾಲಿಗೆ ಸಂದಿರುವ ರಾಜ್ಯೋತ್ಸವ ಪ್ರಶಸ್ತಿಯು  ಮೂರನೆಯದಾಗಿದೆ. ಅವರನ್ನು ನೇರವಾಗಿ ಮಾತನಾಡಿಸಿ ಸಂದರ್ಶನ ಪಡೆಯುವ ಅವಕಾಶ ಆಗದಿದ್ದರೂ ಮಿತ್ರ ಅಪ್ಪಾಜಿ ಅಜ್ಜಂಪುರ ಅವರು ಚಿತ್ರ ಮಾಹಿತಿಗಳನ್ನು ಸಂಗ್ರಹಿಸಿ ಈ ಲೇಖನವನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಚಂದ್ರಶೇಖರ ನಾರಣಾಪುರ ಅವರಿಗೆ ಅಭಿನಂದನೆಗಳು. ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ - ೦-೦-೦-೦-೦-೦ - ಅಜ್ಜಂಪುರ ತಾಲೂಕಿಗೆ ರಾಜ್ಯೋತ್ಸವ ಪ್ರಶಸ್ತಿಯ ಮೂರನೇ ಗರಿ : ಕೃಷಿ ಋಷಿ ಚಂದ್ರಶೇಖರ ನಾರಣಾಪುರ ಕೃಷಿ ಕ್ಷೇತ್ರದ ಸಾಧನೆಗಾಗಿ  ಚಂದ್ರಶೇಖರ ನಾರಣಾಪುರ ಅವರಿಗೆ  ೨೦೨೨ನೆಯ ಸಾಲಿನ  ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರಕಾರವು  ನೀಡಿ ಗೌರವಿಸಿದೆ. ಸಾವಯವ ಕೃಷಿಯಲ್ಲಿ ಅವರು ಪರಿಣತರು. ತಮ್ಮ ಕೃಷಿ ಕ್ಷೇತ್ರದಲ್ಲಿ ಸಾವಯವ ಕೃಷಿಯ ಅನೇಕ ಪ್

120. ಶಿಕ್ಷಣವೇತ್ತ, ವಿದ್ಯಾಭಿಮಾನಿ ಶ್ರೀ ನರಸೀಪುರ ದೊಡ್ಡಮನೆ ನಾಗರಾಜ್ (ಎನ್.ಡಿ.ಎನ್.)

ಇಮೇಜ್
  ಶಿಕ್ಷಣವೇತ್ತ, ವಿದ್ಯಾಭಿಮಾನಿ ಶ್ರೀ ನರಸೀಪುರ ದೊಡ್ಡಮನೆ ನಾಗರಾಜ್ (ಎನ್.ಡಿ.ಎನ್.) ಅಜ್ಜಂಪುರದ ಶೆಟ್ರು ಶಿದ್ದಪ್ಪನವರ ಪದವೀಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ, ಅಜ್ಜಂಪುರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ತರೀಕೆರೆಯಲ್ಲಿ ನೆಲೆಸಿದ್ದ ಎನ್.ಡಿ. ನಾಗರಾಜರು ನಿಧನರಾಗಿದ್ದಾರೆ. ಎನ್.ಡಿ.ಎನ್. ಎಂಬ ಸಂಕ್ಷಿಪ್ತ ನಾಮದಿಂದ ಹೆಸರಾಗಿದ್ದ ನಾಗರಾಜರ ಹೆಚ್ಚಿನ ಪರಿಚಯ ನನಗೆ ಇರಲಿಲ್ಲವಾದರೂ, ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯನವರಿಗೆ ಅವರು ಆಪ್ತರು. ವಿದ್ಯಾಭಿಮಾನಿಗಳಾಗಿದ್ದ ನನ್ನ ತಂದೆಯನ್ನು ಕಂಡರೆ ನಾಗರಾಜರಿಗೂ ಅದೇ ಬಗೆಯ ಗೌರವ. ನಾನು ಅವರನ್ನು ಒಂದೆರಡು ಬಾರಿ ಕಂಡು ಮಾತನಾಡಿದ್ದುಂಟು. ಆಗೆಲ್ಲ ನನ್ನ ತಂದೆಯನ್ನು ಪ್ರೀತಿಯಿಂದ ಸ್ಮರಿಸಿದ್ದರು.. ಸ್ವತಃ ಆಂಗ್ಲ ಪ್ರಾಧ್ಯಾಪಕರಾಗಿದ್ದ ನಾಗರಾಜರಿಗೆ ಸಾಹಿತ್ಯ, ಸಂಸ್ಕೃತಿ, ಕಲೆಗಳಲ್ಲಿ, ರಂಗಭೂಮಿಗಳ ಬಗ್ಗೆ ಅಪಾರ ಅಭಿಮಾನ. ನಿವೃತ್ತಿಯ ನಂತರವೂ ಸಂಸ್ಕೃತದ ಅಧ್ಯಯನದಲ್ಲಿ ತೊಡಗಿದ್ದರು. ನಾನೊಮ್ಮೆ ಇಂಗ್ಲಿಷ್ ಬರಹವೊಂದರ ಪರಿಷ್ಕರಣೆಗಾಗಿ ಅವರನ್ನು ಕೋರಿದಾಗ, ಸಮಯಾಭಾವದಿಂದ ಸಾಧ್ಯವಾಗಲಾರದು ಎಂದು ತುಂಬ ಸಂಕೋಚದಿಂದ ಹೇಳಿಕೊಂಡಿದ್ದರು. ಪ್ರತಿ ಹಬ್ಬಗಳಿಗೂ ಶುಭಾಶಯ ಕೋರುತ್ತಿದ್ದ ಆತ್ಮೀಯರೊಬ್ಬರು ಮರೆಯಾಗಿದ್ದಾರೆ. ಅವರ ಅಧ್ಯಯನಶೀಲತೆ, ಶಿಕ್ಷಣದ ಬಗೆಗಿನ ಪ್ರೀತಿ, ವಿದ್ಯಾರ್ಥಿಗಳನ್ನು ಕುರಿತಾದ ಕಾಳಜಿಗಳಿಂದಾಗಿ ಅವರು ನನ್ನೂರಿನ ವಿದ್ಯಾವಲಯದಲ್ಲಿ ತುಂಬ ಜನಪ್ರಿಯರಾ

119. ಅಜ್ಜಂಪುರದ ದೇವರಮನೆಗಳು-2

ಇಮೇಜ್
ಆತ್ಮೀಯ ಓದುಗರೇ, ಈ ಸಂಚಿಕೆಯಲ್ಲಿ ಅಪೂರ್ವ ಅವರು ಅಜ್ಜಂಪುರದ ಮತ್ತೊಂದು ದೇವರಮನೆಯನ್ನು ಪರಿಚಯಿಸಿದ್ದಾರೆ. ಈ ಹಿಂದೆಯೂ ಎರಡು ಪ್ರಕಟವಾಗಿವೆ. ಇವು ಹಿಂದಿನಿಂದಲೂ ಅಜ್ಜಂಪುರದಲ್ಲಿ ಇವೆಯಾದರೂ, ಇವುಗಳ ಬಗ್ಗೆ ಜನರ ಗಮನ ಅಷ್ಚಾಗಿ ಹರಿದಂತಿಲ್ಲ. ಏಕೆಂದರೆ ಇವು ಹಿಂದೆ ಇದ್ದ ಸಾಧಾರಣ ಮಣ್ಣಿನ ಮನೆಗಳ ಜೊತೆಗೇ ಇರುತ್ತಿದ್ದುದರಿಂದ, ಇವುಗಳನ್ನು ವಿಶೇಷವೆಂದು ತಿಳಿದವರು ಕಡಿಮೆ.  ಈ ವಂಶಾವಳಿಯ ಕಾರಣದಿಂದ ಅಜ್ಜಂಪುರದ ಕೆರೆಗೆ ಪರ್ವತರಾಯನ ಕೆರೆ ಎಂದು ಹೆಸರು ಬಂದಿತೆಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ ಒಂದು ತರ್ಕದ ಪ್ರಕಾರ, ವಿಜಯನಗರದ ಅರಸರು ನಾಡಿನ ಹಲವಾರು ದೇವಾಲಯಗಳನ್ನು, ಕೆರೆಗಳನ್ನು ಅಭಿವೃದ್ಧಿಪಡಿಸಿದ  ಉದಾಹರಣೆಗಳಿವೆ. ಇದೇ ವಂಶಕ್ಕೆ ಸೇರಿರಬಹುದಾದ ಸಾಮಂತರೋ, ನಾಯಕರಲ್ಲಿ ಓರ್ವನಾಗಿರಬಹುದಾದ ಪರ್ವತರಾಯನಿಂದಲೂ ಇದು ಉಗಮವಾಗಿರಬಹುದು. ಏಕೆಂದರೆ, ಬುಕ್ಕಾಂಬುಧಿಯ ಕೆರೆಗೆ ವಿಜಯನಗರದ ಸಂಸರ್ಗವಿದೆ. ಅಜ್ಜಂಪುರದ ದೇವಾಲಯಗಳ ನವೀಕರಣದಲ್ಲಿ ವಿಜಯನಗರದ ಪಾತ್ರವಿದೆ. ಏನಿದ್ದರೂ, ಇತಿಹಾಸಜ್ಞರು ಸಂಶೋಧಿಸಬೇಕಾಗಿರುವ  ಅಂಶವಿದೆಂದು ತಿಳಿಯಬಹುದು.   ಆದರೆ ಸಾಂಸ್ಕೃತಿಕ ಮಹತ್ವವುಳ್ಳ ಈ ದೇವರಮನೆಗಳು, ಆಯಾ ಕುಟುಂಬಗಳ, ವರ್ಗಗಳ ಪದ್ಧತಿಯನ್ನು ಜೀವಂತವಾಗಿಟ್ಟಿವೆ. ಸುಧಾರಿಸಿದ ಆರ್ಥಿಕ ಪರಿಸ್ಥಿತಿಯಿಂದಾಗಿ, ಸಮುದಾಯದ ಜನರು ತಮ್ಮ ಕುಲದೈವವನ್ನು ಮರೆಯದೇ, ಅವುಗಳಿದ್ದ ಸ್ಥಳಗಳನ್ನು ನವೀಕರಿಸಿ, ಸಮಾಜದ ಕಾರ್ಯಗಳಿಗೆ

118. ಮರುಕಳಿಸಿದ ನೆನಪುಗಳು

ಇಮೇಜ್
ಅಜ್ಜಂಪುರದ ಮಿತ್ರ, ಸಹಪಾಠಿ ದತ್ತರಾಜ ರ ಪುತ್ರಿ ಸೌಜನ್ಯಾ ಫೇಸ್ ಬುಕ್ ನಲ್ಲಿ ಬರೆಯುತ್ತಿರುವ ಕವಯಿತ್ರಿ. ಇತ್ತೀಚೆಗೆ ಅಜ್ಜಂಪುರದಲ್ಲಿ ಅವರ ಚಿಕ್ಕಪ್ಪ ಮಂಜುನಾಥ ಅಜ್ಜಂಪುರ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದಾಗ, ಊರಿನ ನೆನಪುಗಳು ಒತ್ತರಿಸಿಕೊಂಡು ಬಂದುದಕ್ಕೆ ಅವರು ಬರೆದ ಈ ಟಿಪ್ಪಣಿ ಅನೇಕ ಸ್ವಾರಸ್ಯಕರ ಅಂಶಗಳನ್ನು ಒಳಗೊಂಡಿದೆ ಎಂಬ ಕಾರಣಕ್ಕೆ ಇಲ್ಲಿ ಪ್ರಕಟಿಸಲಾಗಿದೆ. - ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ - - - - - - - - - - - - - - - - - - - - - - - - - - - ನಿಮ್ಮೂರು ಯಾವುದು? ಅಂತ ಯಾರಾದರೂ ಪ್ರಶ್ನಿಸಿದರೆ ಅರೆಕ್ಷಣ ಗಲಿಬಿಲಿಗೊಳ್ಳುತ್ತೇನೆ ನಾನು. ತಕ್ಷಣವೇ ಮರು ಪ್ರಶ್ನಿಸುತ್ತೇನೆ. ನಿಮ್ಮೂರು ಯಾವುದು? ಅಲ್ಲಿಂದ ನಾನು ಅವರ ಊರಿನ ಹತ್ತಿರದ ನಾನು ಕಂಡ ಊರನ್ನು ನನ್ನದಾಗಿಸಿಕೊಳ್ಳುತ್ತೇನೆ. ಕಾರಣ ಇಷ್ಟೇ ನಾನು ಒಂದು ಊರಲ್ಲಿ ಬೆಳೆದವಳಲ್ಲ.  ಅಜ್ಜಂಪುರದ ಕಿರಾಳಮ್ಮನಿಗೆ ನನ್ನ ಹೆಸರಲ್ಲಿ ಎಷ್ಟು ಅರ್ಚನೆಗಳಾಗಿವೆಯೋ ಅದರಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಎನ್ನುವಷ್ಟು ತರೀಕೆರೆಯ ಸಾಲುಮರದಮ್ಮನಿಗೂ ಮತ್ತು ಬೀರೂರಿನ ಅಂತರಘಟ್ಟಮ್ಮನಿಗೂ ನನ್ನ ಹೆಸರಿನಲ್ಲಿ ಅರ್ಚನೆಗಳಾಗಿವೆ. ಶಿವಮೊಗ್ಗದ ದಿನಗಳ ನೆನಪೂ ನನ್ನೊಳಗೆ ಹಸಿರಾಗಿವೆ. ಚಿಕ್ಕಪ್ಪನೊಂದಿಗೆ ಹೇಳುವುದಿದೆ, ನಿಮ್ಮಷ್ಟು ಅಜ್ಜಂಪುರನ ಹಚ್ಕೊಂಡಿಲ್ಲ ನಾನು. ಅದು ನನಗೆ ನಮಪ್ಪನೂರು ಅಷ್ಟೇ ಅಂತ.  ನಾನು ಬಾಯಲ್ಲಿ

117. ತಾಮ್ರ ಕವಚದ ಪ್ರಾಚೀನ ಶಿವಲಿಂಗ

ಇಮೇಜ್
ಈ ವರ್ಷದ ನವೆಂಬರ್ ತಿಂಗಳಲ್ಲಿ ಅಜ್ಜಂಪುರಕ್ಕೆ ಭೇಟಿ ನೀಡಿದಾಗ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯದ ಅರ್ಚಕ ಅನೂಪ ಮಿತ್ರ ಒಂದು ಶಿವಲಿಂಗವನ್ನು ತೋರಿಸಿದರು. ತಾಮ್ರದ ಕವಚವುಳ್ಳ ಈ ಲಿಂಗವು ಅಜ್ಜಂಪುರದಲ್ಲೇ ಯಾರದೋ ಮನೆಯಲ್ಲಿ ಪೂಜಿಸಲ್ಪಡುತ್ತಿತ್ತು ಎಂದು ತೋರುವಂತಿದೆ. ಈ ಹಿಂದೆಯೂ ನಾನು ಈ ದೇಗುಲದಲ್ಲಿ ರುದ್ರಾಭಿಷೇಕ ಪೂಜೆಗಳಲ್ಲಿ  ತೊಡಗಿಕೊಂಡಿದ್ದುಂಟು. ಆಗ ಈ ವಿಗ್ರಹವನ್ನು ನೋಡಿದ್ದೆನಾದರೂ, ಅದರ ಮೇಲೆ ಕೊಳೆ ಸೇರಿಕೊಂಡು ಕಲ್ಲಿನದೆಂದು ತೋರುವಂತಿತ್ತು. ಈಗ  ಶುಚಿಗೊಳಿಸಿದ ನಂತರ ಅದರ ಮೂಲ ರೂಪ ಕಾಣುತ್ತಿದೆ. ಇದೊಂದು ಪ್ರಾಚೀನ ರಚನೆಯೆಂದು ಇಲ್ಲಿ ನಮೂದಿಸಲಾಗಿದೆ. - ಶಂಕರ ಅಜ್ಜಂಪುರ

116. ಅಜ್ಜಂಪುರದ ದೇವರಮನೆಗಳು:

ಇಮೇಜ್
ಆತ್ಮೀಯ ಓದುಗರೇ, ಅಂತರಜಾಲದಲ್ಲಿ ಅಜ್ಜಂಪುರ - ಈ ಬ್ಲಾಗ್ ನ ಮುಂದುವರಿಕೆಯು ಊರಿನ ಬಗ್ಗೆ ಅಭಿಮಾನವುಳ್ಳ ಲೇಖಕರನ್ನು ಅವಲಂಬಿಸಿದೆ. ಈಗ ಅಜ್ಜಂಪುರವು ತಾಲೂಕು ಆದ ನಂತರ ಪಟ್ಟಣದ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಗತಿ ಕಾಣುತ್ತಿದೆ. ಸ್ಥಳೀಯರು ಮನಸ್ಸು ಮಾಡಿ ಇಲ್ಲಿನ ಬೆಳವಣಿಗೆಗಳನ್ನು ದಾಖಲಿಸುವಂತಾದರೆ, ಇನ್ನಷ್ಟು ಮಾಹಿತಿಗಳು ಸೇರಿಕೊಳ್ಳುತ್ತವೆ. ಅಜ್ಜಂಪುರದಲ್ಲೇ ವಾಸವಾಗಿರುವ ಮಿತ್ರ ಅಪೂರ್ವ, ಊರಿನಲ್ಲಿ ಏನೇ ಹೊಸದು ಕಾಣಿಸಿದರೂ, ಅದನ್ನು ದಾಖಲಿಸುತ್ತ, ಈ ಬ್ಲಾಗ್ ನ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಸಂಚಿಕೆಯಲ್ಲಿ ಅವರು ಪ್ರಸ್ತಾಪಿಸಿರುವ ವಿಷಯವು ಊರಿನಲ್ಲೇ ಅನೇಕರಿಗೆ ತಿಳಿದಿರದಿದ್ದರೆ ಆಶ್ಚರ್ಯವಿಲ್ಲ. ಅದು ಊರೊಟ್ಟಿನ ವಿಷಯವೇ ಆಗಿದ್ದರೂ, ಸಮುದಾಯಗಳ ಜನರು ತಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡು, ತನ್ಮೂಲಕ  ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತಿರುವರು. ಅಂಥ ಸಂಗತಿಗಳು ಊರಿನ ಸಾಂಸ್ಕೃತಿಕ ಮಹತ್ವವನ್ನು ಬಿಂಬಿಸುತ್ತವೆ. ಅವುಗಳನ್ನು ಯಾರಾದರೂ ಗಮನಿಸಿ ತಿಳಿಸಿದಾಗಷ್ಟೇ ಇತರರಿಗೂ ತಿಳಿದೀತು. ಆಯಾ ಸಮುದಾಯದವರೇ ಆ ಬಗ್ಗೆ ಪ್ರಚುರ ಪಡಿಸಬಹುದು. ದೇವರಮನೆ ಎಂಬ ವ್ಯವಸ್ಥೆಯು ಸಾಮುದಾಯಿಕವಾಗಿದ್ದು, ಅದು ಎಲ್ಲ ಊರುಗಳಲ್ಲೂ ಇರಬಹುದು. ಕಾಲ ಕಾಲಕ್ಕೆ ಬಂದ ಬದಲಾವಣೆಗಳನ್ನು ಅಳವಡಿಸಿಕೊಂಡು, ಪದ್ಧತಿಯನ್ನು ಜೀವಂತವಾಗಿ ಇಟ್ಟಿರುವ ಸಮುದಾಯಗಳ ಧಾರ್ಮಿಕ ಪ್ರಜ್ಞೆ ಮೆಚ್ಚುವಂಥದು. ಅಜ್ಜಂಪುರದಲ್ಲಿರುವ ಇಂಥ ಎರಡು ದೇವರಮನೆಗಳ ಬ