ಪೋಸ್ಟ್‌ಗಳು

127) ಹಿಮ್ಸ್ ನಿರ್ದೇಶಕರಾಗಿ ಡಾ| ಬಿ ರಾಜಣ್ಣ

ಇಮೇಜ್
ಮಿತ್ರರಾದ ಶ್ರೀ ಮಲ್ಲಿಕಾರ್ಜುನ ಅಜ್ಜಂಪುರ ಇವರು ಅಜ್ಜಂಪುರದ ಮತ್ತೊಂದು ಪ್ರತಿಭೆಯನ್ನು ಗುರುತಿಸಿ ಫೇಸ್ಬುಕ್ಕಿನಲ್ಲಿ ಲೇಖನ ಪ್ರಕಟಿಸಿದ್ದರು. ಅದನ್ನು ಇಲ್ಲಿಯೂ ಹಂಚಲಾಗಿದೆ. ಹೀಗೆ ನಿಮಗೆ ತಿಳಿದಿರುವ ಅಜ್ಜಂಪುರದ ಹೊಸ ಇಲ್ಲವೇ ಹಳೆಯ ಸಾಧಕರ ಬಗ್ಗೆ ಚಿತ್ರ ಸಹಿತ ಒಂದು ಚಿಕ್ಕ ಪರಿಚಯ ಕಳಿಸಿಕೊಡಿ. ಅದನ್ನು ಪ್ರಕಟಿಸಬಹುದು. ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ         - ೦-೦-೦-೦-೦-೦-೦-೦- ಅಭಿನಂದನೆಗಳು  ಡಾಕ್ಟರ್ ರಾಜಣ್ಣ ! - ಮಲ್ಲಿಕಾರ್ಜುನ ಅಜ್ಜಂಪುರ ನನ್ನೂರಿನ  ಅಜ್ಜಂಪುರದಲ್ಲಿ ಪ್ರಾಥಮಿಕ ಶಾಲೆಯನ್ನು ಅಭ್ಯಾಸ ಮಾಡಿದ ಬಾಲ್ಯದ ಮಿತ್ರ ರಾಜಣ್ಣ ಹಾಸನದ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾಗಿ ಪದಗ್ರಹಣ ಮಾಡಿರುತ್ತಾರೆ. ಇದು ನಮ್ಮೂರಿಗೆ ಹೆಮ್ಮೆ ತರುವ ವಿಷಯವಾಗಿದೆ ಪ್ರಾಥಮಿಕ ಶಿಕ್ಷಣವನ್ನು ಅಜ್ಜಂಪುರದ  ಶಾಲೆಯಲ್ಲಿ ಮಾಧ್ಯಮಿಕ  ಮತ್ತು ಪ್ರೌಢಶಾಲೆಯನ್ನು ಸಹೋದರರ ಜೊತೆಯಲ್ಲಿ ತೆರಳಿ ಚಾಮರಾಜ ನಗರದಲ್ಲಿ ಮುಗಿಸಿದ ರಾಜಣ್ಣ ಎಂಬಿಬಿಎಸ್ ವಿದ್ಯಾಭ್ಯಾಸವನ್ನು ದಾವಣಗೆರೆಯಲ್ಲಿ ನಂತರ ಜನರಲ್ ಸರ್ಜರಿ ಸ್ನಾತಕೋತ್ತರ ಪದವಿಯನ್ನು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿಯೂ ಮುಗಿಸಿ ಸೂಪರ್ ಸ್ಪೆಷಾಲಿಟಿ ತಜ್ಞತೆಯನ್ನು ಬೆಂಗಳೂರು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಪೂರೈಸಿದ ನಂತರ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಪ್ರಾರಂಭಿಸಿ 16

126. ಅಪೂರ್ವ ಕಥೆ ಕವನಗಳ ಅವಲೋಕನ

ಇಮೇಜ್
ಗೆಳೆಯ ಅಪೂರ್ವ ಅಜ್ಜಂಪುರ ಇವರ "ಒಂದಷ್ಟು ಕಥೆಗಳು ಕವಿತೆಗಳು" - ಈ ಪುಸ್ತಕದ ಅವಲೋಕನವು ಇತ್ತೀಚೆಗೆ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಅದರ ಅವಲೋಕನದ ವರದಿ ಇಲ್ಲಿದೆ.  ಅವರು ನನ್ನ ಮಿತ್ರರು ಎಂಬ ಅಭಿಮಾನ ಒಂದು ಕಡೆ ಇದ್ದರೆ, ಈ ಪುಸ್ತಕದ ಪ್ರಕಟಣಾಪೂರ್ವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾದುದು ಕೂಡ ನನಗೆ ಸ್ಮರಣೀಯ ಸಂಗತಿ.  ಊರ ಲೇಖಕನ ಪುಸ್ತಕವು ಊರಿನಲ್ಲೇ ಅವಲೋಕನಗೊಂಡಿರುವುದು ಕೂಡ ವಿಶೇಷ ಹೌದು! ಚಿತ್ರ - ವರದಿಗಳು ಇಲ್ಲಿವೆ. ಸಂಪಾದಕ ಶಂಕರ ಅಜ್ಜಂಪುರ ಅಂತರಜಾಲದಲ್ಲಿ ಅಜ್ಜಂಪುರ ******************************* "ಅಪೂರ್ವ ಬರೆದದ್ದು ಒಂದಷ್ಟಾದರೂ ಅವು ಅಪರೂಪದ ಸಣ್ಣಕತೆಗಳು, ಕವಿತೆಗಳು!" ಈ ಮಾತು ಹೇಳಿದವರು ಕನ್ನಡ ಪ್ರಾಧ್ಯಾಪಕರಾದ ಪ್ರೊ.ಮಹಾಲಿಂಗಪ್ಪ. ಸಂದರ್ಭ :  ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪ರ ಮೇ ತಿಂಗಳ ೨೪, ಶುಕ್ರವಾರದಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿ ಮತ್ತು ಸ.ಪ್ರ.ದ.ಕಾಲೇಜು ಸಂಯುಕ್ತವಾಗಿ ಆಯೋಜಿಸಿದ 'ಒಂದಷ್ಟು ಕಥೆ, ಕವಿತೆಗಳು' ಒಂದು ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಅಭಿಪ್ರಾಯ ವ್ಯಕ್ತಪಡಿಸಿದರು. 'ಒಂದು ನಿಧಿಯ ಸುತ್ತ' ಕತೆಯಲ್ಲಿ ಜಾನಪದ, ಐತಿಹಾಸಿಕ ಹಿನ್ನೆಲೆಯಲ್ಲಿ ವರ್ತಮಾನದ ಪ್ರಸಂಗವು ಬಿಚ್ಚಿಕೊಳ್ಳುತ್ತದೆ. ಕತೆಯು ನಡೆಯುವ 'ಅಸಾವತಿ'ಯು ಗಂಗರ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

ಇಮೇಜ್
ಇವರು ನಮ್ಮ ಹಿರಿಯರು ನಾಗರಾಜ್ ಎಂ.ಎನ್. ಅಜ್ಜಂಪುರದಲ್ಲಿ 60 70 ದಶಕದಲ್ಲಿದ್ದ ಪ್ರಾಥಮಿಕ ಶಾಲಾ ಅಧ್ಯಾಪಕರು. ಇವರಿಂದ ಕಲಿತ ಅನೇಕರು ಇಂದು ಉನ್ನತ ಸ್ಥಿತಿಯಲ್ಲಿದ್ದಾರೆ. ಅವರು ತಮ್ಮ ವೃತ್ತಿಯನ್ನು ಪ್ರೀತಿಸಿದ ಪರಿಣಾಮವೇ ಅದಕ್ಕೆ ಕಾರಣ. ಸ್ಪುರದ್ರೂಪಿಯಾಗಿದ್ದ ನಾಗರಾಜ ಮಾಸ್ತರರ ಕನ್ನಡ ಭಾಷೆ ತುಂಬಾ ಸೊಗಸಾಗಿರುತ್ತಿತ್ತು. ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯ  ಹಾಗೂ ನಾಗರಾಜ್ ಮಾಸ್ತರರು ಆಪ್ತ ಸ್ನೇಹಿತರು. ಅವರಿಬ್ಬರ ಅಭಿರುಚಿ ಮತ್ತು ವೈಚಾರಿಕತೆಗಳು ಸಮಾನವಾಗಿದ್ದರಿಂದ ಅವರ ಸ್ನೇಹ ಗಾಢವಾಗಿತ್ತು. ಒಮ್ಮೆ ಶಿಕ್ಷಣಾಧಿಕಾರಿಯೋರ್ವರು ಶಾಲೆಗೆ ಭೇಟಿ ನೀಡಿದಾಗ, ಇವರಿಬ್ಬರು ಸಡಗರದಿಂದ ಔತಣಕೂಟವನ್ನು ತಮ್ಮದೇ ವೆಚ್ಚದಲ್ಲಿ ಏರ್ಪಡಿಸಿದ್ದರು. ಅದು ಯಾವ ಪ್ರತಿಫಲವನ್ನು ಅಪೇಕ್ಷಿಸಿ ಅಲ್ಲ, ಬದಲಾಗಿ ಆ ಅಧಿಕಾರಿಯ ನಿಸ್ಪೃಹತೆಯನ್ನು ಮೆಚ್ಚಿ ತಮ್ಮ ಗೌರವವನ್ನು ಹಾಗೆ ಸಲ್ಲಿಸಿದ್ದರು. ಒಳ್ಳೆಯವರನ್ನು ಕೇವಲ ಮೆಚ್ಚಿದರೆ ಸಾಲದು, ತಮ್ಮ ಭಾವನೆಯನ್ನು ಅಭಿವ್ಯಕ್ತಗೊಳಿಸುವುದೂ ಮುಖ್ಯ ಎಂಬ ಪಾಠವನ್ನು ಕಾರ್ಯತಃ ಮಾಡಿ ತೋರಿದ್ದರು. ಇತ್ತೀಚೆಗೆ ಎಂ.ಎನ್. ನಾಗರಾಜರ ಮಗ ಶ್ರೀ ನರಸಿಂಹಸ್ವಾಮಿಯನ್ನು ದಾವಣಗೆರೆಯಲ್ಲಿ ಭೇಟಿ ಮಾಡಿದೆ. ಆಗ ಕಂಡ ನಾಗರಾಜ ಮಾಸ್ತರರ ಚಿತ್ರ ಸಹಿತ ಬರಹಕ್ಕಾಗಿ ಕೇಳಿದ್ದೆ. ಅದರಂತೆ ಅವರ ಬಗ್ಗೆ ನರಸಿಂಹಸ್ವಾಮಿ ನೀಡಿದ ವಿವರಗಳು ಕೆಳಗಿನಂತಿವೆ. ಶಂಕರ ಅಜ್ಜಂಪುರ ಸಂಪಾದಕ "ಅಂತರಜಾಲದಲ್ಲಿ ಅಜ್ಜ

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಇಮೇಜ್
ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಗೆ ಉದಾಹರಣೆಯಾಗಿ ನಮ್ಮ ಸುತ್ತಮುತ್ತಲಿನಲ್ಲೇ ಅನೇಕ ಉದಾಹರಣೆಗಳು ದೊರೆಯುತ್ತವೆ. ಆದರೆ ಅದು ಅಮೂಲ್ಯ ಮದ್ದು ಹೌದು ಎಂದು ತಿಳಿಯಲು, ತಿಳಿಸಲು ಸಹೃದಯತೆ ಬೇಕಾಗುತ್ತದೆ. ಅಂಥ ಸಹೃದಯ ಮನೋಭಾವದ ಮಿತ್ರ ಅಪೂರ್ವ ಅಜ್ಜಂಪುರ   ಅವರು ಈ ಸಂಚಿಕೆಯಲ್ಲಿ ಅಪರೂಪದ ವಿದ್ವಾಂಸರನ್ನು ಸೂಕ್ತ ಮತ್ತು ಆಕರ್ಷಕ ಶೀರ್ಷಿಕೆಯೊಡನೆ ಪರಿಚಯಿಸಿದ್ದಾರೆ. ಅವರೇ ಅಜ್ಜಂಪುರ ಸಮೀಪದ ಗೌರಾಪುರದ. ಶ್ರೀ ಗೌ.ಮ. ಉಮಾಪತಿ ಶಾಸ್ತ್ರೀ. ಪ್ರಾಚೀನ ಗ್ರಂಥ ಸಂಪಾದನೆಯು ವಿದ್ವತ್ತನ್ನು ಬೇಡುತ್ತದೆ, ನಿಜ. ಅದೇ ಹೊತ್ತಿಗೆ ಅಂಥ ಸಾಹಿತ್ಯದಲ್ಲಿ ಆಸಕ್ತಿಯಿರುವವರಿಗೆ, ಉಮಾಪತಿಯವರಿದ್ದ ಕಾಲದಲ್ಲಿ ಈಗಿನ ಸೌಲಭ್ಯಗಳು ಇರಲಿಲ್ಲ. ಆದರೆ ಗ್ರಂಥ ಸಂಪಾದನೆಯಂಥ ಕ್ಲಿಷ್ಟಕಾರ್ಯದ ಬಗ್ಗೆ ಸಂಶೋಧಕರು ಇರುತ್ತಿದ್ದರು. ಅವರ ನೆರವು, ಮಾರ್ಗದರ್ಶನಗಳು ದೊರೆಯುತ್ತಿದ್ದ ದಿನಗಳು ಅವು. ಅದೇ ಪ್ರವೃತ್ತಿಯು ಇಂದಿಗೂ ಮುಂದುವರೆದಿರುವುದು ಅಭಿನಂದನೀಯ, ಶಾಸ್ತ್ರಿಗಳನ್ನು ಕುರಿತು ಅಧ್ಯಯನ ಮಾಡಿ ಪಿ.ಎಚ್.ಡಿ. ಪ್ರಬಂಧ ಮಂಡಿಸಿರುವ ಡಾ. ಕಾವ್ಯರ ಕೊಡುಗೆಯೂ ದೊಡ್ಡದು. ಉಮಾಪತಿ ಶಾಸ್ತ್ರಿಗಳ ಬದುಕು-ಬರಹಗಳನ್ನು ದಾಖಲಿಸುವ ಉಪಯುಕ್ತ ಕಾರ್ಯಮಾಡಿದ್ದಾರೆ. ಅವರ ಶ್ರಮ, ಆಸಕ್ತಿಗಳು ಅಭಿನಂದನೀಯ. ಅವರು ಅಜ್ಜಂಪುರ ಸಮೀಪದ ಹೊಸದುರ್ಗ ತಾಲೂಕಿನ  ಜೋಡಿಶ್ರೀರಂಗಾಪುರ ಗ್ರಾಮಕ್ಕೆ ಸೇರಿದವರು. ಉಮಾಪತಿ ಶಾಸ್ತ್ರಿಗಳು ಗೌರಾಪುರದವರಾದರೂ ಅವರ ಕರ್ಮಭೂಮಿ ಉತ್ತರ ಕರ್ನಾಟಕ, ಕರ

ಕೆರೆ ಹಿಂದಿನ ಶ್ರೀ ಶಂಕರ ಲಿಂಗೇಶ್ವರ ದೇವಾಲಯ

ಇಮೇಜ್
ಪರ್ವತರಾಯನ  ಕೆರೆಯಲ್ಲಿ  ಸೂರ್ಯಾಸ್ತ    ಕೆರೆಯ ಹಿನ್ನೆಲೆಯಲ್ಲಿ ಹಣ್ಣೆ ಗುಡ್ಡ ಸಾಮಾನ್ಯವಾಗಿ ಊರಿಗೆ ನೀರು ನೀಡುವ ಜಲಸ್ಥಾನಗಳಲ್ಲಿ ಒಂದು ಚಿಕ್ಕ ಮಂದಿರವಿರುತ್ತಿದ್ದುದು ವಾಡಿಕೆ.  ದೇವಾಲಯದ ಹೊರನೋಟ  ಈ ವಿಷಯದಲ್ಲಿ ಅಜ್ಜಂಪುರವೂ ಹೊರತಾಗಿಲ್ಲ. ಈ ಚಿತ್ರದಲ್ಲಿ ಕಾಣುವ ಚಿಕ್ಕ ಮಂದಿರವನ್ನು ಕೆರೆ ಹಿಂದಿನ ದೇವಸ್ಥಾನ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಅದು ಇರುವುದು ಪರ್ವತರಾಯನ ಕೆರೆಯ ಏರಿಯ ಬುಡದಲ್ಲಿ. ಹೀಗಾಗಿ ಈ ಹೆಸರೇ ಪ್ರಚಲಿತವಿದ್ದರೂ , ಅಲ್ಲಿ ನೆಲೆಗೊಂಡಿರುವುದು ಶ್ರೀ ಶಂಕರಲಿಂಗೇಶ್ವರ.  ನಾಲ್ಕು ಚದರಡಿಯ ಒಂದು ಗರ್ಭಗೃಹ ಮತ್ತು ಹತ್ತು ಚದರಡಿಯ ಮುಖಮಂಟಪವನ್ನು ಮಾತ್ರ ಹೊಂದಿರುವ ಈ ದೇವಾಲಯ ಅಜ್ಜಂಪುರದ ಪ್ರಾಚೀನವೆಂದು ಹೇಳಬಹುದಾದ ಶಿವಮಂದಿರ. ಇಲ್ಲಿ ಹಿಂದೆ ಸಂಭ್ರಮವಿತ್ತು. ಪೂಜಾದಿಗಳು ಯಥಾಕ್ರಮ ನಡೆಯುತ್ತಿದ್ದ ದಿನಗಳಿದ್ದವು. ಇದರ ನಿರ್ವಹಣೆಗೆಂದು ಸಾಕಷ್ಟು ಕೃಷಿ ಜಮೀನನ್ನು ಉಂಬಳಿ ನೀಡಲಾಗಿತ್ತು. ಮಳೆಯ ಅಭಾವವಿರುವ ವರ್ಷಗಳಲ್ಲಿ ಇಲ್ಲಿ ರುದ್ರಾಭಿಷೇಕವನ್ನು ನಡೆಸಿ , ಮಳೆಯನ್ನು ಆಹ್ವಾನಿಸುವ ಪದ್ಧತಿಯಿತ್ತು. ಈಗ ಅದೆಲ್ಲ ಕೇವಲ ನೆನಪು ಮಾತ್ರ.   ಸಾಧಾರಣವಾಗಿ ಇಂಥ ರಚನೆಯ ದೇವಾಲಯಗಳಲ್ಲಿ ಗರ್ಭಗುಡಿಯ ಮೇಲೆ ಇಟ್ಟಿಗೆ-ಗಾರೆಗಳಿಂದ ನಿರ್ಮಿಸುವ ಶಿಖರವಿರುತ್ತದೆ. ಆದರೆ ಈ ದೇವಾಲಯಕ್ಕೆ ಶಿಖರವನ್ನು ನಿರ್ಮಿಸಲಾ

123. ದಕ್ಷ ಅಧಿಕಾರಿ - ಪುಟ್ಟ ರಂಗಪ್ಪ

ಇಮೇಜ್
ನಾನು ಬಹುದಿನಗಳಿಂದ ಈ ಅಂಕಣದಲ್ಲಿ ದಾಖಲು ಮಾಡಬೇಕೆಂದು ಬಯಸಿದ್ದ ವಿಷಯವನ್ನು ಗೆಳೆಯ ಮಲ್ಲಿಕಾರ್ಜುನ ಇಲ್ಲೊಂದು ಸಮಗ್ರ ಚಿತ್ರ ಲೇಖನದೊಡನೆ ಒದಗಿಸಿದ್ದಾರೆ. ಅವರಿಗೆ ಧನ್ಯವಾದಗಳು. ಪಾಂಡುರಂಗಪ್ಪ ಮತ್ತು ಅವರ ಪುತ್ರರು ಅಜ್ಜಂಪುರದ ಜನ ಮಾನಸದಲ್ಲಿ ಸ್ಥಾನಗಳಿಸಲು ಅವರು ವಿದ್ಯಾಭ್ಯಾಸಕ್ಕೆ ನೀಡಿದ ಮಹತ್ವ ಮತ್ತು ದೂರದೃಷ್ಟಿಗಳೇ ಕಾರಣವೆಂದು ಹೇಳಬಹುದು. ಅಜ್ಜಂಪುರದ ಪೇಟೆಯ ಬಳಿ ಇದ್ದ ಚಿತ್ರಮಂದಿರದ ಎದುರಿನಲ್ಲಿ ಇದ್ದ ನಾಲ್ಕಾರು ಮನೆಗಳ ಗುಂಪು, ತನ್ನ ಸ್ವಚ್ಛತೆಯಿಂದ  ಗಮನ ಸೆಳೆಯುವಂತಿತ್ತು. ಸಗಣಿ ಹಾಕಿ ಸಾರಿಸಿದ ನೆಲ, ದೊಡ್ಡ ರಂಗೋಲಿಯ ವಿನ್ಯಾಸಗಳಿಂದಾಗಿ ವಿಶಿಷ್ಟವಾಗಿ ಕಾಣುತ್ತಿತ್ತು. ಈ ಆವರಣದಲ್ಲಿ ವಾಸವಿದ್ದ ಪಾಂಡುರಂಗಪ್ಪನವರು ಗಾಂಧೀಜಿಯ ಪ್ರಭಾವಕ್ಕೆ ಒಳಗಾಗಿದ್ದವರು. ಅವರ ಹಿರಿಯ ಮಗ ತಿಪ್ಪಯ್ಯ ಮಾಸ್ತರರು ಶಿಕ್ಷಕರಾಗಿ ನಂತರ ರಾಜಕೀಯದಲ್ಲಿ ಭಾಗವಹಿಸಿ ತಮ್ಮ ಛಾಪನ್ನು ಮೂಡಿಸಿದ್ದರೆ, ಎರಡನೆಯವರಾದ ಪುಟ್ಟರಂಗಪ್ಪನವರು ತಮ್ಮ ಆಡಳಿತ ಶೈಲಿಯಿಂದ ರಾಜ್ಯದಲ್ಲಿ ಜನಪ್ರಿಯರಾದರು. ಪುಟ್ಟರಂಗಪ್ಪನವರ ಅಧಿಕಾರ ಅವಧಿಯಲ್ಲಿ ಜಾತಿಯ ಹಂಗಿಲ್ಲದೆ ಸಮಾಜದ ಎಲ್ಲ ವರ್ಗಗಳ ಅಜ್ಜಂಪುರದ ಜನ ಪ್ರಯೋಜನ ಪಡೆದದ್ದುಂಟು. ಶಿಕ್ಷಣ ತಂದುಕೊಟ್ಟ ಆತ್ಮ ಗೌರವ ಮತ್ತು ಆತ್ಮ ವಿಶ್ವಾಸಗಳ ಮಹತ್ವವನ್ನು ಸ್ವತಃ ಬದುಕಿ ತೋರಿಸಿದ ಪುಟ್ಟರಂಗಪ್ಪನವರ ಸ್ಮರಣಾರ್ಥ ಅಪರೂಪದ ಚಿತ್ರಗಳೊಂದಿಗೆ ಇರುವ ಈ ಲೇಖನ ಅಜ್ಜಂಪುರವು ನಿಜಕ್ಕೂ ಹೆಮ್ಮೆ ಪಡುವಂಥದ್ದು. ಶಂಕರ ಅಜ್ಜಂಪ