ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

103. ನನ್ನ ನೆನಪಿನ ಅಜ್ಜಂಪುರ - ಕೆ.ಎಸ್. ರಾಘವನ್ ರ ನೆನಪುಗಳು

ಇಮೇಜ್
6 ನವೆಂಬರ್ 2019 ಮೇಲ್ಕಂಡ ದಿನಾಂಕದಂದು ನನಗೆ ತಲುಪಿದ ಈ-ಪತ್ರದ ಪಠ್ಯ ಇಲ್ಲಿದೆ. ಸ್ವಾಮಿ ,  ನಾನು ಇಂದು ಮೇಲ್ಕಂಡ ಬ್ಲಾಗ್‍ಸೈಟನ್ನು ಮೊದಲ ಬಾರಿ ನೋಡಿದೆ. ಮನಕ್ಕೆ ತುಂಬಾ ಸಂತೋಷವಾಯಿತು. ಆಶ್ಚ್ಚರ್ಯ ಕೂಡಾ.    ನನ್ನ ಜೀವನದಲ್ಲಿ ಅಜ್ಜಂಪುರದ ಬಹು ಮಹತ್ವವಾದ ಪಾತ್ರವಿದೆ. ನನ್ನ ಬಾಲ್ಯ ಅಲ್ಲೇ ಕಳೆಯಿತು. ನಮ್ಮ ತಂದೆ ಅಜ್ಜಂಪುರಕ್ಕೆ ಬಂದಾಗ ನನಗೆ ಮೂರು ತಿಂಗಳು ಮಾತ್ರ. ಅದು  1946  ರಲ್ಲಿ. ನನ್ನ  SSLC  ವರೆಗಿನ ವಿದ್ಯಾಬ್ಯಾಸ ಅಲ್ಲೇ. ನಮ್ಮ ತಂದೆಗೆ  CBS ( ಅಮೃತಮಹಲ್) ನಲ್ಲಿ ಕೆಲಸ. ಅವರ ಹೆಸರು ಕೆ ಎ ಶ್ರೀನಿವಾಸನ್.  1960  ರಲ್ಲಿ ಅವರಿಗೆ ಕುಣಿಗಲ್‍ಗೆ ವರ್ಗವಾಯಿತು. ನನ್ನ ನಂತರದ ಒಬ್ಬ ತಮ್ಮ ಮತ್ತು ಐದು ತಂಗಿಯರು ಜನಿಸಿದ್ದು ಅಜ್ಜಂಪುರದಲ್ಲೇ. ಕಳೆದ  60  ವರ್ಷಗಳಲ್ಲಿ ಅಜ್ಜಂಪುರವನ್ನು ಮತ್ತೆ ನೋಡುವ ಅವಕಾಶ ನನಗೆ ಸಿಗಲಿಲ್ಲ. ಪೋಸ್ಟ್ ಗಳನ್ನು ಓದುತ್ತಿದ್ದಂತೆ ನನ್ನ ಬಾಲ್ಯದಹಲವು    ನೆನಪುಗಳು ಕಣ್ಣಮುಂದೆ ಸುಳಿದು ಬಂದವು. ವಿಶೇಷವಾಗಿ ಸುಬ್ರಮಣ್ಯ ಶೆಟ್ಟಿ ,  ಸತ್ಯನಾರಾಯಣ ಶೆಟ್ಟಿ ,  ಶೆಟ್ರ ಸಿದ್ದಪ್ಪ ಹಾಗೂ ಕಲಾ ಸೇವಾ ಸಂಘ. ನನಗೆ ಒಂದು ಮಾಹಿತಿ ಬೇಕು. ಅಜ್ಜಂಪುರ ಕೃಷ್ಣಸ್ವಾಮಿಯವರ ತಂದೆಯ ಹೆಸರೇನು ? ನೀವು ಸಲ್ಲಿಸುತ್ತರುವ ಸೇವೆಗಾಗಿ ವಂದನೆಗಳು. ನಿಮ್ಮ ಈ ಬ್ಲಾಗ್‍ಗೆ ಲೇಖನಗಳನ್ನು ಹೇಗೆ ಕಳಿಸುವುದು ? 6 ನವೆಂಬರ್ 2019 ಆತ್ಮೀಯ ರಾಘವನ್ ರಿಗೆ ನಮಸ್ಕಾರಗಳು. ನಾನು ಬ್ಲಾಗ್ ಮಾಡಿದ

102. ಅಜ್ಜಂಪುರದಲ್ಲಿ ವಾಲೀಬಾಲ್ ಪಂದ್ಯ ವರದಿ ಮತ್ತು ಸಮಾಜ ಸೇವಕಿ ಬೂಬಮ್ಮ

ಇಮೇಜ್
64ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಅಜ್ಜಂಪುರವು ಕಲೆಗೆ ಹೆಸರುವಾಸಿಯಾಗಿರುವಂತೆಯೇ, ಕ್ರೀಡಾ ಚಟುವಟಿಕೆಗಳಲ್ಲೂ ಮುಂದೆ ಇದ್ದ ದಿನಗಳಿದ್ದವು. ಅಂಥದೊಂದು ಸ್ಮರಣೆ ಇಲ್ಲಿದೆ. ಅಜ್ಜಂಪುರದ ಕಲಾಸೇವಾ ಸಂಘ ಶಾಲೆಯಲ್ಲಿ ಕನ್ನಡ ಉಪಾಧ್ಯಾಯರಾಗಿದ್ದ ಶ್ರೀ ಜಿ.ಟಿ. ಶ್ರೀಧರ ಶರ್ಮಾ ಅವರು ಅಜ್ಜಂಪುರದಲ್ಲಿ ಪತ್ರಿಕೋದ್ಯಮವನ್ನು ನೆಲೆಗೊಳಿಸಲು ನೆರವಾದವರು.  ಅವರ ಪತ್ನಿ ಶ್ರೀಮತಿ ರೋಹಿಣಿ ಶರ್ಮಾ ಇವರ ಲೇಖನಗಳು ಈಗಾಗಲೇ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಅಜ್ಜಂಪುರದಲ್ಲಿದ್ದ ಶವ ಸಂಸ್ಕಾರಕ್ಕೆ ನೆರವಾಗುತ್ತಿದ್ದ ಬೂಬಮ್ಮ ಇವರ ಬಗ್ಗೆ ಬರೆದಿರುವ ಲೇಖನವೂ ಇಲ್ಲಿದೆ. ಇವರ ಪುತ್ರ ಶ್ರೀ ಆರ್ಯಮಿತ್ರ ಕೂಡ ಲೇಖಕರು.  ಅಜ್ಜಂಪುರಕ್ಕೆ ಸಂಬಂಧಿಸಿದ ಅನೇಕ ಬರಹಗಳನ್ನು ತಮ್ಮ ಸಂಗ್ರಹದಿಂದ ನೀಡಿ ಸಹಕರಿಸುತ್ತಿದ್ದಾರೆ, ಶ್ರೀಧರ ಶರ್ಮರ ಪುತ್ರಿ ಆತ್ಮಾ ಕೂಡ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದು,  ಅವರ ಕೆಲ ಬರಹಗಳು ಮುಂದೆ ಮೂಡಿಬರಲಿವೆ.  ಕಳೆದ ದಿನಗಳ ನೆನಪೇ ಚೆಂದ ಎನ್ನುವಂತೆ ಇವನ್ನು ಮತ್ತೆ ಸ್ಮರಿಸಲೆಂದು ಶ್ರೀ ಆರ್ಯಮಿತ್ರ ನೀಡಿರುವ ಪ್ರಕಟಿತ ಲೇಖನಗಳ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ. 

101. ಅಜ್ಜಂಪುರದಲ್ಲಿ ಋಗ್ವೇದ ಪಾರಾಯಣ

ಇಮೇಜ್
ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಲಾಗದು ಎನ್ನುವುದೊಂದು ವಾಡಿಕೆ. ಇದಕ್ಕೆ ಹಲವು ಕಾರಣಗಳನ್ನು ನೀಡುವರು. ಕೃಷಿ ಚಟುವಟಿಕೆಗಳಿಲ್ಲದ ವಿರಾಮದ ಕಾ ಲವಿದು. ಅಂತೆಯೇ ವೇದಾಧ್ಯಯನಕ್ಕೂ ಬಿಡುವು ಎನ್ನುವುದು ಮತ್ತೊಂದು ಕಾರಣ. ಇದೇ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳಿಂದ ಲಕ್ಕವಳ್ಳಿಯ ಸಮೀಪದ ಸೋಮಪುರದಲ್ಲಿರುವ ದತ್ತಾಶ್ರಮದ ಆಯೋಜಕರೂ, ವೇದವಿದರೂ ಆದ ಶ್ರೀ ಸೋ.ತಿ. ನಾಗರಾಜರು ಈ ಅವಧಿಯಲ್ಲಿ ವೇದಪಾರಾಯಣದ ಕಾರ್ಯಕ್ರಮವನ್ನು ಹಮ್ಮಿಕೊಂಡು ನಡೆಸುತ್ತಿದ್ದಾರೆ. ಶ್ರೀ ಸೋ.ತಿ. ನಾಗರಾಜರು ಪ್ರಸ್ತುತ ಸೋಮಪುರದಲ್ಲಿ ನೆಲೆಸಿ, ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಗ್ರಾಮಗಳು, ಪಟ್ಟಣಗಳಲ್ಲಿ ವೇದಪಾರಾಯಣದ ವ್ಯವಸ್ಥೆ ಮಾಡುತ್ತಿರುವರು. ಅವರು ನಡೆಸುತ್ತಿರುವ ದತ್ತ ಆಶ್ರಮದ ಪ್ರಾಯೋಜಕತ್ವದೊಡನೆ, ಊರಿನ ಸಂಘ-ಸಂಸ್ಥೆಗಳು ಪಾರಾಯಣಕ್ಕೆ ಬೇಕಿರುವ ಅಗತ್ಯ ವ್ಯವಸ್ಥೆ, ಎಂದರೆ ಪಾರಾಯಣಕರ್ತರಿಗೆ ಊಟ-ವಸತಿಗಳನ್ನು, ದೇವಾಲಯ ಅಥವಾ ಮನೆಗಳಲ್ಲಿ ಮಾಡಿಕೊಡುವಂತಿದ್ದರೆ, ವೇದ ಪಾರಾಯಣ ಸಪ್ತಾಹವನ್ನು ನಡೆಸಿಕೊಡುವರು. ಸಪ್ತಾಹದ ಸಮಾರೋಪದ ದಿನ, ಜನರನ್ನು ಉದ್ದೇಶಿಸಿ ಈ ಕಾರ್ಯಕ್ರಮದ ಬಗ್ಗೆ ಮಾಹಿತಿಗಳನ್ನು ನೀಡುವರು. ಕಳೆದ ವರ್ಷ ಅಜ್ಜಂಪುರದ ಸಮೀಪದ ಗ್ರಾಮ ಬುಕ್ಕಾಂಬುಧಿಯಲ್ಲಿ ನಡೆದಿತ್ತು. ಈ ಬಾರಿ ಅಜ್ಜಂಪುರದ ಬ್ರಾಹ್ಮಣ ಸಂಘದ ಸಹಯೋಗದಲ್ಲಿ ದಿನಾಂಕ ಜುಲೈ 9ರಿಂದ ಜುಲೈ 14ರವರೆಗೆ ಅಜ್ಜಂಪುರದ ಶ್ರೀ ಕೋಟೆ ಆಂಜನೇಯ ದೇವಾಲಯದಲ

100. ಅಜ್ಜಂಪುರ ಕ್ಷೇತ್ರಪಾಲಯ್ಯ ಮೇಷ್ಟ್ರು – ಕೆಲವು ನೆನಪುಗಳು

ಇಮೇಜ್
ಈ ಲೇಖನವು ಈ ಮಾಲಿಕೆಯಲ್ಲಿ ನೂರನೆಯದು. 2011ರ ಅಗಸ್ಟ್ 8ರಂದು ಆರಂಭವಾದ ಈ ಮಾಲಿಕೆಗೆ ಇದೀಗ ಎಂಟು ವರ್ಷಗಳು. ಪ್ರತಿ ತಿಂಗಳ ಒಂದನೇ ದಿನಾಂಕ ದಂದು ಒಂದು ಲೇಖನ ಪ್ರಕಟಿಸುತ್ತ ಬಂದಿದ್ದಾಗಿದೆ. ನನ್ನೂರಿಗೆ ಸಂಬಂಧಿಸಿದಂತೆ ಇದೊಂದು ಕಾರ್ಯ ಸಾಧ್ಯವಾಗಿದ್ದಕ್ಕೆ ಹಲವರ ಬೆಂಬಲವೇ ಕಾರಣ.  ಈ ಹಿಂದೆ ಹೇಳಿದಂತೆ ಮುಂದಿನ ಸಂಚಿಕೆಗಳಿಗೆ ನಿಗದಿಯಿರದು. ವಿಷಯ, ಅವಕಾಶಗಳು ದೊರೆತಂತೆ ಲೇಖನಗಳು ಪ್ರಕಟವಾಗುತ್ತವೆ. ಇದುವರೆಗಿನ ಎಲ್ಲ ಸಂಚಿಕೆಗಳಿಗೂ, ನಾನು ಕೋರಿದಾಗಲೆಲ್ಲ ಲೇಖನಗಳನ್ನು ಬರೆದುಕೊಟ್ಟು, ಈ ಮಾಲಿಕೆಯ ಸಾತತ್ಯವನ್ನು ಕಾಯ್ದುಕೊಂಡು ಬರಲು ನೆರವಾದ ಎಲ್ಲರಿಗೂ ನಾನು ಅತ್ಯಂತ ಕೃತಜ್ಞ. ಇನ್ನು ಮುಂದೆಯೂ ನಿಮ್ಮ ನೆರವಿನ ಅಗತ್ಯ ಇದ್ದೇ ಇರುತ್ತದೆ. ನೂರು ಎಂಬುದೊಂದು ಘಟ್ಟ ಎಂಬ ಕಾರಣಕ್ಕಾಗಿಯಷ್ಟೇ ಈ ಸ್ಮರಣೆ. ಅಂತೆಯೇ ಓದುಗರಿಗೂ ಸಹ. ನನ್ನ ತಂದೆ ಶ್ರೀ ಅಜ್ಜಂಪುರ ಕ್ಷೇತ್ರಪಾಲಯ್ಯನವರನ್ನು ಕುರಿತಂತೆ ಮಿತ್ರ ಅಪ್ಪಾಜಿಯವರ ಸ್ಮರಣೆ ಇಲ್ಲಿದೆ. ಅಂತೆಯೇ ನಿಮ್ಮಲ್ಲೂ ಅನೇಕರಿಗೆ ಅವರ ಪರಿಚಯ, ಸಹವಾಸಗಳು ದೊರಕಿದ್ದಿರಬಹುದು. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ನಮೂದಿಸಲು ಕೋರುವೆ.  ----------------------------------------------------------------------------------------------------------------------------------------------------------------- ನನ್ನ ತಂದೆಯ ನೆನಪಿನಲ್ಲಿ............

99. ಗೀತಾಮಿತ್ರ – ಸುವರ್ಣ ಸಂಭ್ರಮ

ಇಮೇಜ್
ಅಜ್ಜಂಪುರಕ್ಕೆ ಸಂಬಂಧಿಸಿದಂತೆ ಗೀತಾಮಿತ್ರ ಆಧ್ಯಾತ್ಮಿಕ ಮಾಸ ಪತ್ರಿಕೆಯನ್ನು ಪ್ರಸ್ತಾಪಿಸದಿದ್ದರೆ ಅದು ಅಪೂರ್ಣವೇ ಸರಿ. 1963ರಲ್ಲಿ ಆರಂಭವಾಗಿ 2012ಕ್ಕೆ ಐವತ್ತು ವರ್ಷ ತುಂಬಿದ, ಭಗವದ್ಗೀತೆಯ ಪ್ರಸಾರಕ್ಕೆಂದೇ ಮೀಸಲಾದ ಈ ಪತ್ರಿಕೆಯ ಉಲ್ಲೇಖ 2012ರಲ್ಲೇ ಈ ಬ್ಲಾಗ್ ನಲ್ಲಿ ಪ್ರಸ್ತಾಪವಾಗಬೇಕಿತ್ತು. ಆದರೆ ಸೂಕ್ತ ಸಂವಹನದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಆದರೆ ಇದಕ್ಕೆ ಪೂರಕವಾಗಿ ಈ ಬ್ಲಾಗ್ ನಲ್ಲಿ, ಈ ಪತ್ರಿಕೆಯ ಸಂಪಾದಕ ಶ್ರೀ ಸುಬ್ರಹ್ಮಣ್ಯಶೆಟ್ಟರು, ಅಜ್ಜಂಪುರದಲ್ಲಿ ಗೀತೆಯ ಮೂಲಸ್ರೋತವಾದ ಶ್ರೀ ಶಿವಾನಂದಾಶ್ರಮ, ಇನ್ನೋರ್ವ ಸಂಪಾದಕ ಶ್ರೀ ರಾಜಗೋಪಾಲ ಗುಪ್ತರು ಮುಂತಾಗಿ ಹಲವಾರು ಲೇಖನಗಳು ಪ್ರಕಟವಾಗಿರುವುದುಂಟು. ಸುವರ್ಣ ಸಂಚಿಕೆಯ ಸಂಭ್ರಮದ ವರದಿ ಆಗ ಸಾಧ್ಯವಾಗದ್ದು, ಈಗ ಇಲ್ಲಿದೆ. ಗೀತಾಮಿತ್ರದ ಮೊದಲ ಸಂಪಾದಕ ಶ್ರೀ ಎಸ್. ಸುಬ್ರಹ್ಮಣ್ಯಶೆಟ್ಟರು   ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಅಜ್ಜಂಪುರದಲ್ಲಿ ಶ್ರೀ ಶಂಕರಾನಂದ ಸ್ವಾಮಿಗಳು ಬಂದು ನೆಲೆಸಿದಾಗ, ಶ್ರೀ ಸುಬ್ರಹ್ಮಣ್ಯ ಶೆಟ್ಟರಿಗೆ ಅವರ ಬಗ್ಗೆ ಒಂದು ವಿಶೇಷವಾದ ಆಕರ್ಷಣೆ.  ಅವರ ಪ್ರವಚನಗಳಿಂದ ಪ್ರಭಾವಿತರಾಗಿ, ಇದನ್ನು ಗ್ರಂಥಸ್ಥಗೊಳಿಸಬೇಕೆಂಬ ನಿರ್ಧಾರದಿಂದ ಒಂದು ಪತ್ರಿಕೆಯನ್ನು ಆರಂಭಿಸಿದರು. ಆಗ ಮುದ್ರಣ ಸೌಲಭ್ಯವೂ ಸುಲಭವಾಗಿರಲಿಲ್ಲ. ಇಂದು ಬಹುವರ್ಣದ ಮುದ್ರಣ ತುಂಬ ಸುಲಭವಾಗಿದೆ. ಆದರೆ ಕಳೆದ ಶತಮಾನದ 60ರ ದಶಕದಲ್ಲಿ ಇದು ಸುಲಭ ಸಾಧ್ಯವಿರಲಿಲ್

98. ಮಠದ ಮನೆ

ಇಮೇಜ್
ಆತ್ಮೀಯ ಓದುಗರೇ,  ಅಜ್ಜಂಪುರಕ್ಕೆ ಭೇಟಿ ನೀಡಿದಾಗಲೆಲ್ಲ ಒಂದಲ್ಲ ಒಂದು ಮಾಹಿತಿ ದೊರೆಯುತ್ತಿರುತ್ತದೆ. ಅದಕ್ಕೆ ಅಲ್ಲಿನ ಗೆಳೆಯರೂ ನೆರವಾಗುತ್ತಾರೆ. ಇಲ್ಲಿನ ಮಠದ ಮನೆಗೊಂದು ಚಿಕ್ಕ ಇತಿಹಾಸವಿದೆ. ಅಲ್ಲಿಗೆ ಕರೆದೊಯ್ದು, ಮಾಹಿತಿಗಳನ್ನು ವಿವರಿಸಿದವರು ಸಮಾನ ಮನಸ್ಕ ಮಿತ್ರ ಅಪ್ಪಾಜಿ. ನಮ್ಮೂರಿಗೂ ಒಂದು ಶಾಸನವಿದೆ ಎಂದು ತಿಳಿದದ್ದೇ ಈಗ. ಅದನ್ನು ಓದಲು ಪ್ರಯತ್ನಿಸೋಣವೆಂದರೆ, ಅದರಲ್ಲಿನ ಅಕ್ಷರಗಳೆಲ್ಲ ನಷ್ಟವಾಗಿದೆ. ಗ್ರಾಮದೇವತೆ ಕಿರಾಳಮ್ಮ ದೇವಾಲಯದಲ್ಲಿರುವ ಬರಹಕ್ಕೂ ತೀರ ಹಿಂದಿನದು ಎಂದು ಹೇಳಬಹುದಾದ ಇದು ಹೊಯ್ಸಳೋತ್ತರ ಶಾಸನವಿದ್ದೀತು ಎಂದು ಭಾವಿಸಬಹುದು.  ಶತಕವನ್ನು ಸಮೀಪಿಸುತ್ತಿರುವ ಈ ಬರಹದ ಮಾಲಿಕೆಗೆ ಇನ್ನೆರಡು ಸಂಚಿಕೆಗಳ ನಂತರ ವಿರಾಮ ಘೋಷಿಸುವ ಸಮಯ ಬಂದಿದೆಯೆಂದು ಭಾವಿಸುವೆ. ಹಾಗೆಂದು ಇದು ಸಂಪೂರ್ಣ ನಿಂತುಹೋದೀತೆಂದಲ್ಲ. ಮಾಹಿತಿಗಳು ದೊರೆತಂತೆ, ಲೇಖಕರು ಆಸಕ್ತಿ ವಹಿಸಿ ಲೇಖನಗಳನ್ನು ಕಳಿಸಿದಾಗಲೆಲ್ಲ ಪ್ರಕಟವಾದೀತು.  ನಿಮ್ಮೆಲ್ಲರ ಸಹಕಾರಕ್ಕೆ ವಂದನೆಗಳು. - ಶಂಕರ ಅಜ್ಜಂಪುರ ಮಠದ ಮನೆಯ ಆವರಣದಲ್ಲಿರುವ ನಂದಿಯ ವಿಗ್ರಹ ಪೆ.23ರಂದು ಅಜ್ಜಂಪುರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಲನ ನಡೆಯಿತು. ಈ ಸಂದರ್ಭದಲ್ಲಿ ಗೋಷ್ಠಿಯೊಂದರಲ್ಲಿ ಭಾಗವಹಿಸಲು ತೆರಳಿದ್ದೆ. ಮಿತ್ರ ಅಪ್ಪಾಜಿ, ಊರಿಗೆ ಹೋದಾಗಲೆಲ್ಲ ಯಾವುದಾದರೊಂದು ವಿಶೇಷದ ಬಗ್ಗೆ ನೆನಪಿಸಿ, ಆ ಸ್ಥಳಕ್ಕೆ ಕರೆದೊಯ್ದು, ಅಲ್ಲಿನ ಮಾಹಿತಿಗಳನ