ಅಮೃತಮಹಲ್ ಕಾವಲು ಉಳಿಸಿ - ಅವಿರತ ಹೋರಾಟದ ಕ್ರೋಡೀಕೃತ ವರದಿ - ಭಾಗ 3
![ಇಮೇಜ್](https://blogger.googleusercontent.com/img/b/R29vZ2xl/AVvXsEgsqXQWzB8tyLGsNkNOeFZ88-oJDqo_DrVYNgIcPqSIQYtHisrqP03cHaAzoMNXinnyp8g9PY_LuLYR74IDt3BeuzVl_-baOGQhyphenhyphen_CNubAnPdZEhjdtK7FiBXh-pUmFjibiCvXlywRvx28/s1600/Aug+30.jpg)
ಇದು "ಅಮೃತಮಹಲ್ ಕಾವಲು ಉಳಿಸಿ" ಹೋರಾಟದ ಇದುವರೆಗಿನ ವರದಿಯ ಕೊನೆಯ ಕಂತು. ಇಷ್ಟಾಗಿಯೂ ಹೋರಾಟ ತಾರ್ಕಿಕ ಅಂತ್ಯವನ್ನೇನೂ ಕಂಡಿಲ್ಲ. ಆದರೆ ರಾಜ್ಯದ ಹೆಮ್ಮೆಯ ಜಾನುವಾರು ತಳಿ ಸಂವರ್ಧನಾ ಕೇಂದ್ರವು ತನ್ನ ಸ್ಥಾಪಿತ ಉದ್ದೇಶಕ್ಕೆಂದು ಮುಂದುವರೆಯಬೇಕೆಂಬ ಕಳಕಳಿ ಹೋರಾಟಗಾರರದು. ಅವರ ಯತ್ನ ಯಶಸ್ವಿಯಾಗಲೆಂದು ಹಾರೈಸೋಣ. ಈ ಎಲ್ಲ ವರದಿಗಳನ್ನೂ ದಿನಾಂಕ ಸಹಿತ , ಚಿತ್ರ-ಸಹಿತ ಅನುಕ್ರಮಣಿಕೆಯಲ್ಲಿ ಕಳಿಸಿದ ಪವಿತ್ರಾ ಪ್ರಿಂಟರ್ಸ್ ನ ಮಾಲಕ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆಯ ಸ್ಥಳೀಯ ವರದಿಗಾರ ಶ್ರೀ ವೆಂಕಟೇಶ್ ರಿಗೆ ಧನ್ಯವಾದಗಳು. ಈ ಬ್ಲಾಗ್ ನಲ್ಲಿ ಅಜ್ಜಂಪುರದ ಎಲ್ಲ ಬೆಳವಣಿಗೆಗಳನ್ನು ದಾಖಲಿಸಲು ಅವಕಾಶವಿದೆ. ಲೇಖಕರು ತಮ್ಮ ಬರಹಗಳನ್ನು shankarajp@gmail.com ಈ ವಿಳಾಸಕ್ಕಾಗಲೀ , ದೂರವಾಣಿ ಸಂಖ್ಯೆ 99866 72483 ಇಲ್ಲಿಗಾಗಲೀ ತಿಳಿಸಲು ಕೋರುತ್ತೇನೆ. -ಶಂಕರ ಅಜ್ಜಂಪುರ --------------------------------------------------------------------------------------------------------------------------------------------------------------------------------------------- ಈ ಸಭೆಯಲ್ಲಿ ಅಂದು ಹಾಜರಿದ್ದ ಕೇಂದ್ರದ ಉಪ ನಿರ್ದೇಶಕ , ಡಾ. ಸುರೇಶ್ , ನಿರ್ದೇಶಕ ಡಾ. ರಂಗನಾಥ್ , ಸಮಾಜ ಸೇವಕ ಜಿ. ಚನ್ನಪ್ಪ , ಉಪನ್ಯಾಸಕ ಅರವಿಂದ ಐರಣಿ , ರಾಷ್ಟ್ರಪತ