ಪೋಸ್ಟ್‌ಗಳು

ಏಪ್ರಿಲ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

112. ಸೊಲ್ಲಾಪುರದ ಸಿದ್ದರಾಮೇಶ್ವರರು: ಬೇಡಿದಾಗ ಮಳೆಬೀಜ ತಂದು ಹರಸುವ ಮಹಾನುಭಾವರು!

ಇಮೇಜ್
 ಸೊಲ್ಲಾಪುರದ ಸಿದ್ದರಾಮೇಶ್ವರರು: ಬೇಡಿದಾಗ ಮಳೆಬೀಜ ತಂದು ಹರಸುವ ಮಹಾನುಭಾವರು!    'ಯೋಗಿಗಳ ಯೋಗಿ, ಶಿವಯೋಗಿ, ಸಿದ್ಧರಾಮನೊಬ್ಬನೆ ನಿಜಯೋಗಿ' ಎಂದು ಸಮಕಾಲೀನ ಶರಣರಾದ ಸೊಡ್ಡಳ  ಬಾಚಾರಸರಿಂದ ಹೊಗಳಿಸಿಕೊಂಡಿರುವ ಸಿದ್ದರಾಮೇಶ್ವರರು ಕುಗ್ರಾಮವಾಗಿದ್ದ ಸೊನ್ನಲಿಗೆಯನ್ನು ಸೊಲ್ಲಾಪುರವೆಂಬ ಅಭಿನವಕೈಲಾಸವಾಗಿ ಕಟ್ಟಿದವರು. ಮಹಾನ್ ಕನಸುಗಾರ ಶಿಲ್ಪಿ ಇವರು. ಕೇವಲ ಕನಸು ಕಾಣುವುದಷ್ಟೇ ಅಲ್ಲ, ಅದನ್ನು ತಕ್ಷಣವೇ ಕಾರ್ಯರೂಪಕ್ಕೆ ತಂದು ಆದರ್ಶಗಳಿಗೆ ವಾಸ್ತವತೆಯ ಸ್ಪರ್ಷ ನೀಡಿದವರು. 'ಶಿವಯೋಗಿಯ ಶರೀರಂ ವೃಥಾ ಸಮೆಯಲಾಗದು, ಅನುಗೊಂಬನಿತು ಕಾಯಕವನು ನಡೆಸುತಿರಬೇಕು' ಎಂಬುದು ಇವರ ಸಾಧನೆಯ ನಿತ್ಯಮಂತ್ರ. ಇಂಥ ಪವಿತ್ರ ಸಂಕಲ್ಪದಿಂದಲೇ ಸಿದ್ದರಾಮೇಶ್ವರರು ಪರಮತೆಯ ಔನ್ನತ್ಯವನ್ನು ಸಾಧಿಸಿದರು. ಹನಿಮೊಸರನ್ನು  ಮಲ್ಲಯ್ಯನಿಗೆ ಸಮರ್ಪಿಸಲಾಗದ ಏಕೈಕ ಕಾರಣದಿಂದ ಶ್ರೀಶೈಲಪರ್ವತದಲ್ಲಿ ಆತ್ಮಾಹುತಿಯನ್ನು ಮಾಡಿಕೊಳ್ಳಹೊರಟ ಬಾಲಕನನ್ನು  ಕಪಿಲಸಿದ್ಧಮಲ್ಲಿಕಾರ್ಜುನ ತನ್ನ ಮಡಿಲಿಗೆ ಆತುಕೊಂಡು ಸಂರಕ್ಷಿಸಿಕೊಂಡ  ಕಥೆಯ ಹಿಂದಿರುವುದೂ ಸಿದ್ದರಾಮರ ದೃಢಸಂಕಲ್ಪ ಮನೋಭಾವವೇ.       ಈ ಮನೋದೃಢತೆಯೇ ಬಡ ಒಕ್ಕಲಿಗರ ಮನೆಯ ಮಗನಾದ ಧೂಳಿಮಾಕಾಳನನ್ನು ಆದರ್ಶ ಶಿವಯೋಗಿಯಾಗಿ ಬೆಳೆಸಿತು. ಕೆರೆಗಳನ್ನು ಕಟ್ಟಿಸುವ, ದೇವಾಲಯಗಳನ್ನು ನಿರ್ಮಿಸುವ, ಅಗ್ರಹಾರಗಳನ್ನು ರೂಪಿಸುವ ಸಮಾಜಮುಖಿ ಚಟುವಟಿಕೆಗಳು ಅವರ ಉಸಿರಾದವು. ಸೊನ್ನಲಿಗೆಯಲ್ಲಿ ಕಪಿಲಸಿದ್ಧ ಮಲ್ಲಿ

111. ಗೊ.ರು.ಚ ಕಾವ್ಯನಾಮದ ಶರಣತೇಜಸ್ವಿ: ನಮ್ಮ ಗೊಂಡೇದಹಳ್ಳಿಯ ಗೌರವ ತಪಸ್ವಿ!

ಇಮೇಜ್
ಆತ್ಮೀಯ ಓದುಗರೇ, 111ನೆಯ ಈ ಸಂಚಿಕೆಯಲ್ಲಿ ಹಿರಿಯರೂ, ವಿದ್ವಾಂಸರು, ಜಾನಪದ ತಜ್ಞರೂ ಆದ ಡಾ. ಗೊ.ರು. ಚನ್ನಬಸಪ್ಪನವರ ಬಗ್ಗೆ ವಿಸ್ತೃತ ಬರಹವನ್ನು ಪ್ರಕಟಿಸಲು ತುಂಬ ಸಂತೋಷವೆನಿಸುತ್ತದೆ. ಶತಾಯುಷದ ಸಮೀಪದಲ್ಲಿರುವ ಈ ಹಿರಿಯರು ತಮ್ಮ ಊರಿನ ಬಗ್ಗೆ, ಜನರು, ಸಂಸ್ಕೃತಿ, ಕಲೆಗಳ ಬಗ್ಗೆ ತಳೆದಿರುವ ಅಭಿಮಾನಗಳು ಅನ್ಯಾದೃಶವಾದುದು.  ಡಾ. ಮಂಜುಳಾ ಹುಲ್ಲಹಳ್ಳಿಯವರು ಶ್ರಮವಹಿಸಿ ಅನೇಕ ಮಾಹಿತಿಗಳನ್ನು ಸಂಗ್ರಹಿಸುರುವುದರಿಂದ ಗೊ.ರು.ಚ. ರ ಬಗ್ಗೆ ಆಕರ ಲೇಖನವಾಗುವಂತಿದೆ.  ಅಜ್ಜಂಪುರ ತಾಲೂಕಿಗೆ ಸೇರಿದ "ಗೊಂಡೇದಹಳ್ಳಿಯ ಗೌರವ ತಪಸ್ವಿ"ಯ ವಿವರಗಳನ್ನು ಓದಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಇದನ್ನು ಸಾಧ್ಯವಾಗಿಸಿದ ಡಾ. ಮಂಜುಳಾ ಅವರಿಗೆ ಕೃತಜ್ಞತೆಗಳು. ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ. ------------------------------------------------------------------------------------------------------ ಗೊ.ರು.ಚ ಕಾವ್ಯನಾಮದ ಶರಣತೇಜಸ್ವಿ: ನಮ್ಮ ಗೊಂಡೇದಹಳ್ಳಿಯ ಗೌರವ ತಪಸ್ವಿ!        ಗೊಂಡೇದಹಳ್ಳಿಯ ರುದ್ರಪ್ಪ ಚನ್ನಬಸಪ್ಪ ಅವರು ನಿಮಗೆ ಗೊತ್ತೇ? ಎಂದು ಚಿಕ್ಕಮಗಳೂರಿನವರನ್ನು ಕೇಳಿ ನೋಡಿ ಊಹೂ, ಯಾರಿಗೂ ಗೊತ್ತಿಲ್ಲ. ಗೊರುಚ ಎನ್ನಿ ಸಾಕು "ಓಹ್, ನಮ್ಮ ಗೊರುಚ" ಎಂದು ಕೇಳಿದವರೆಲ್ಲ ತಲೆಯಾಡಿಸುತ್ತಾರೆ!  ಅಜ್ಜಂಪುರ ತಾಲೂಕಿನ ಪುಟ್ಟಗ್ರಾಮ ಗೊಂಡೇದಹಳ್ಳಿಯ ಗಿರಿಗೌಡ ಸ್ವಾಭಿಮಾನಕ್ಕೇ