ಪೋಸ್ಟ್‌ಗಳು

ನವೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

121. ಅಜ್ಜಂಪುರ ತಾಲೂಕಿಗೆ ರಾಜ್ಯೋತ್ಸವ ಪ್ರಶಸ್ತಿಯ ಮೂರನೇ ಗರಿ : ಕೃಷಿಋಷಿ ಎಸ್.ಚಂದ್ರಶೇಖರ್ ನಾರಣಾಪುರ

ಇಮೇಜ್
ಅಜ್ಜಂಪುರ ತಾಲೂಕು ಆದ ನಂತರ ಸ್ವಾಭಾವಿಕವಾಗಿ ವ್ಯಾಪ್ತಿಯು ವಿಸ್ತಾರವಾಗಿದೆ. ಅಂತೆಯೇ ಅಜ್ಜಂಪುರದ ಸಾಧಕರ ಹಿರಿಮೆಯು ಬೆಳೆಯುತ್ತಿರುವುದು ಸಂತೋಷದ ಸಂಗತಿ. ಅಜ್ಜಂಪುರದ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಸುಬ್ರಹ್ಮಣ್ಯ ಶೆಟ್ಟರು ಹಾಗೂ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾದ ಅಜ್ಜಂಪುರ ಮಂಜುನಾಥ್ ಅವರು ಸೇರಿದಂತೆ, ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಶ್ರೀ ಚಂದ್ರಶೇಖರ್ ಅವರಿಗೆ 2022ನೇ ಸಾಲಿಗೆ ಸಂದಿರುವ ರಾಜ್ಯೋತ್ಸವ ಪ್ರಶಸ್ತಿಯು  ಮೂರನೆಯದಾಗಿದೆ. ಅವರನ್ನು ನೇರವಾಗಿ ಮಾತನಾಡಿಸಿ ಸಂದರ್ಶನ ಪಡೆಯುವ ಅವಕಾಶ ಆಗದಿದ್ದರೂ ಮಿತ್ರ ಅಪ್ಪಾಜಿ ಅಜ್ಜಂಪುರ ಅವರು ಚಿತ್ರ ಮಾಹಿತಿಗಳನ್ನು ಸಂಗ್ರಹಿಸಿ ಈ ಲೇಖನವನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಚಂದ್ರಶೇಖರ ನಾರಣಾಪುರ ಅವರಿಗೆ ಅಭಿನಂದನೆಗಳು. ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ - ೦-೦-೦-೦-೦-೦ - ಅಜ್ಜಂಪುರ ತಾಲೂಕಿಗೆ ರಾಜ್ಯೋತ್ಸವ ಪ್ರಶಸ್ತಿಯ ಮೂರನೇ ಗರಿ : ಕೃಷಿ ಋಷಿ ಚಂದ್ರಶೇಖರ ನಾರಣಾಪುರ ಕೃಷಿ ಕ್ಷೇತ್ರದ ಸಾಧನೆಗಾಗಿ  ಚಂದ್ರಶೇಖರ ನಾರಣಾಪುರ ಅವರಿಗೆ  ೨೦೨೨ನೆಯ ಸಾಲಿನ  ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರಕಾರವು  ನೀಡಿ ಗೌರವಿಸಿದೆ. ಸಾವಯವ ಕೃಷಿಯಲ್ಲಿ ಅವರು ಪರಿಣತರು. ತಮ್ಮ ಕೃಷಿ ಕ್ಷೇತ್ರದಲ್ಲಿ ಸಾವಯವ ಕೃಷಿಯ ಅನೇಕ ಪ್