ಪೋಸ್ಟ್‌ಗಳು

ಸೆಪ್ಟೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಒಂದೇ ಸೂರಿನಡಿ ಮೂರು ತಲೆಮಾರಿನ ರಂಗ ಕಲಾವಿದರು

ಇಮೇಜ್
ಸಂಚಿಕೆ-64 ಆತ್ಮೀಯ ಓದುಗರೇ, ಅಮೆರಿಕಕ್ಕೆ ಇದು ನನ್ನ ಎರಡನೆಯ ಭೇಟಿ. ಇಲ್ಲಿ ಬಂದ ನಂತರವೂ ನನ್ನ ಈ ಬ್ಲಾಗ್ ಸಂಪಾದನೆಯ ಕೆಲಸ ನಿರುಮ್ಮಳವಾಗಿ ನಡೆಯುತ್ತಿದೆಯೆಂದರೆ, ಅದಕ್ಕೆ ಕಾರಣ ನನ್ನಂತೆಯೇ ಯೋಚಿಸಿ, ಕೆಲಸ ಮಾಡಬಲ್ಲ ಮಿತ್ರರ ತಂಡ. ನಾನು "ಅಮೆರಿಕದಲ್ಲಿ ಅಜ್ಜಂಪುರ" ಎಂಬ ಲೇಖನಮಾಲೆಯನ್ನು ಆರಂಭಿಸಿದೆನಾದರೂ, ಅದರಲ್ಲಿ ಅಜ್ಜಂಪುರದ ಬಗ್ಗೆ ಬರೆದದ್ದು ಕಡಿಮೆಯೇ ಎನ್ನಬೇಕು. ಆದರೆ ಅಮೆರಿಕದಲ್ಲಿ ಕುಳಿತು ಅಜ್ಜಂಪುರಕ್ಕೆ ಸಂಬಂಧಿಸಿದ ವ್ಯಕ್ತಿ, ವಿಷಯಗಳ ಮಾಹಿತಿಗಳನ್ನು ಪ್ರಕಟಿಸಲು ಈಗ ಸಾಧ್ಯವಾಗಿರುವುದು ನನ್ನ ಪ್ರೀತಿಯ ಮಿತ್ರ ಅಪೂರ್ವ ಬಸು ಅವರ ಸಹಕಾರದಿಂದ. ಅಜ್ಜಂಪುರ ಕೃಷಿಕರ ಊರಾಗಿರುವಂತೆ ಕಲಾವಿದರ ನೆಲೆಯೂ ಹೌದು. ಕಲಾ ಸೇವಾ ಸಂಘದ ಕಾರ್ಯ ಚಟುವಟಿಕೆಗಳನ್ನು ಕುರಿತಂತೆ ವಿಸ್ತಾರವಾದ ಲೇಖನಗಳು ಈಗಾಗಲೇ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಪೌರಾಣಿಕ ನಾಟಕಗಳಿಂದ ಆರಂಭಿಸಿ, ಆಧುನಿಕ ರಂಗಭೂಮಿಯ ಎಲ್ಲ ಪ್ರಯೋಗಗಳೂ ಅಜ್ಜಂಪುರದಲ್ಲಿ ನಡೆಯುತ್ತವೆ. ಈ  ಸಂಚಿಕೆಯಲ್ಲಿ ಅಜ್ಜಂಪುರದ ಹೆಮ್ಮೆಯ ಕಲಾವಿದ ಶ್ರೀ ಶಿವಾಜಿರಾವ್ ಮತ್ತು ಅವರ ಮಗ ಮೋಹನರಾವ್ ಹಾಗೂ ಅವರ ಮೊಮ್ಮಗ ಉಲ್ಲಾಸ್ ಜಾಧವ್ ಇವರನ್ನು ಕುರಿತಂತೆ ವಿಸ್ತೃತ ಲೇಖನವನ್ನು ಅಪೂರ್ವ ಬಸು, ಉತ್ತಮ ಚಿತ್ರ ಸಂಗ್ರಹದೊಂದಿಗೆ ನಿಮ್ಮ ಓದಿಗೆಂದು ಇಲ್ಲಿ ಒದಗಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಈ ಚಿತ್ರಮಾಲಿಕೆಯಲ್ಲಿ ಅಜ್ಜಂಪುರದ ಅನೇಕ ಹಿರಿಯರು ಭದ್ರಾ ನದಿಯಲ್ಲಿ ಜಳಕ ಮಾಡ

ನಮ್ಮ ಪ್ರೀತಿಯ ಲಚ್ಚು ಮಾಸ್ತರರು

ಇಮೇಜ್
ನಾನೀಗ ಅಮೆರಿಕದ ಕೊಲಂಬಸ್ ನಲ್ಲಿ ಇರುವಾಗ ನನ್ನ ಪ್ರೀತಿಯ ಹಿರಿಯ ಮಿತ್ರರಾದ ಲಚ್ಚು ಮಾಸ್ತರರು ನಿಧನರಾದ ವಿಷಯ ತಿಳಿಯಿತು. ಅಜ್ಜಂಪುರಕ್ಕೆ ಭೇಟಿ ನೀಡಿದಾಗಲೆಲ್ಲ  ಅವರನ್ನು ಸಂದರ್ಶಿಸದೇ ಬರುತ್ತಿರಲಿಲ್ಲ. ಆದರೆ ಇಲ್ಲಿಗೆ ಬರುವ ಮುನ್ನ ಈ ಬಾರಿ ಜೂನ್ ನಲ್ಲಿ ಅಜ್ಜಂಪುರಕ್ಕೆ ತೆರಳಿದಾಗ ಅವರನ್ನು ಭೇಟಿಮಾಡಲು ಸಾಧ್ಯವಾಗಿರಲಿಲ್ಲ. ಪ್ರತಿ ಭೇಟಿಯಲ್ಲೂ ಹೊಸ ಸಂಗತಿಗಳ ಬಗ್ಗೆ ಆಸ್ಥೆಯಿಂದ ಕೇಳಿ ತಿಳಿದುಕೊಳ್ಳುತ್ತಿದ್ದ ಅವರ ಆಸಕ್ತಿ ಮತ್ತು ಜೀವನೋತ್ಸಾಹಗಳನ್ನು ಮರೆಯಲಾಗದು. ಅವರ ಒಡನಾಟದಲ್ಲಿ ನಾನು ಕಂಡಂತೆ ಅವರನ್ನು ಇಲ್ಲಿ ಚಿತ್ರಿಸಿದ್ದೇನೆ. ಶಂಕರ ಅಜ್ಜಂಪುರ ಈ-ಮೇಲ್ : shankarajp@gmail.com ----------------------------------------------------------------------------------------------------------------------------------- ಬಂಕನಕಟ್ಟೆ ಜೋಡೀದಾರ್ ಲಕ್ಷ್ಮೀಪತಯ್ಯ ಲಕ್ಷ್ಮೀನರಸಿಂಹಯ್ಯ. ಇದು ಅವರ ಪೂರ್ಣ ಹೆಸರು. ಆದರೆ ಅವರು ಕುಟುಂಬ ವಲಯದಲ್ಲಿ “ ಲಚ್ಚು ” ಹಾಗೂ ವೃತ್ತಿ ಜೀವನದಲ್ಲಿ “ ಲಚ್ಚು ಮಾಸ್ತರ ” ರೆಂದೇ ಗುರುತಿಸಲ್ಪಟ್ಟವರು. ಅವರದು ಒಂದು ಕಾಲಕ್ಕೆ ಶ್ರೀಮಂತ ಕುಟುಂಬ. ಅವರ ಹಿರಿಯರು ತುಂಬ ಆಢ್ಯತೆಯಿಂದ ಬಾಳಿ ಬದುಕಿದವರು. ಕಾಲಾಂತರದಲ್ಲಿ ಆ ಶ್ರೀಮಂತಿಕೆಯೇನೂ ಉಳಿಯಲಿಲ್ಲವಾದರೂ, ಲಚ್ಚು ಮಾಸ್ತರರ ಜೀವನದ ಶ್ರೀಮಂತಿಕೆ ಅವರು ಬದುಕಿದ ಪರಿಯಲ್ಲಿ ಅಡಗಿತ್ತು. ಅವರೆ