ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

107. ಗಂಗಮ್ಮನ ಪಾಲು

ಇಮೇಜ್
ಗಂಗಮ್ಮನ ಪಾಲು ಇಲ್ಲಿರುವುದು ಪ್ರಾಚೀನ ಶಿಲ್ಪವಲ್ಲ. ಅದರ ಕಲಾಮೌಲ್ಯಕ್ಕೆಂದೂ ಇದನ್ನು ಪ್ರಕಟಿಸಿಲ್ಲ. ಇದರ ಹಿಂದಿನ ಕಥೆ ಮಾತ್ರ ಹೃದಯಸ್ಪರ್ಶಿಯಾಗಿದೆ. ಇಂಥ ಘಟನೆ ನಾಲ್ಕು ದಶಕಗಳ ಹಿಂದೆ ಅಜ್ಜಂಪುರದಲ್ಲಿ ನಡೆದು ಅದು ಶಿಲ್ಪರೂಪದಲ್ಲಿ ದಾಖಲಾಗಿದೆ ಮತ್ತು ಅದರ ಹಿಂದಿನ ಮನೋಭಾವ ಎಂಥ ನೆಮ್ಮದಿಯನ್ನು ಆ ತಾಯಿಗೆ ನೀಡಿರಬಹುದು ಎನ್ನುವುದೇ ಅದರ ವಿಶೇಷ. ಚಿತ್ರದಲ್ಲಿ ಮೂವರು ಸ್ತ್ರೀಯರ ಚಿತ್ರಗಳಿವೆ. ಅದರಲ್ಲಿ ಮಧ್ಯದಲ್ಲಿರುವುದು ಗಂಗಾಮಾತೆ. ಅಕ್ಕಪಕ್ಕದಲ್ಲಿರುವುದು ಗಂಗಮ್ಮನ ಪಾಲಾದ ಈರ್ವರು ಬಾಲ ಕಿಯರು. ಹಿಂದೊಂದು ಮಳೆಗಾಲದ ದಿನಗಳಲ್ಲಿ ಅಜ್ಜಂಪುರದ ಹೊಂಬಾಳಮ್ಮ ಎಂಬ ಮಹಿಳೆಯ ಇಬ್ಬರು ಮಕ್ಕಳು ಅವರೊಂದಿಗೆ ಊರಿನ ಹತ್ತಿರದಲ್ಲಿ ಬುಕ್ಕಾಂಬುಧಿ ರಸ್ತೆಯಲ್ಲಿರುವ ತುಂಬೇ ಹಳ್ಳದ ಬಳಿ ಹೋಗಿದ್ದರು. ಹಳ್ಳದಲ್ಲಿ ತುಂಬ ನೆರೆ ಬಂದಿತು. ದಡದಲ್ಲಿದ್ದ ಇಬ್ಬರು ಹೆಣ್ಣುಮಕ್ಕಳು ನೀರಿನಲ್ಲಿ ಕೊಚ್ಚಿಹೋದರು. ಅಸಹಾಯಕಳಾದ ತಾಯಿಗೆ ಕಣ್ಣೆದುರಿಗೆ ತೇಲಿಹೋದ ಆ ಮಕ್ಕಳನ್ನು ರಕ್ಷಿಸಿಕೊಳ್ಳಲಾಗಲಿಲ್ಲ. ಅವರ ದಾರುಣ ಸಾವು ತಾಯಿಯ ಮನಸ್ಸಿಗೆ ತುಂಬ ಆಘಾತ ನೀಡಿದ್ದು ಸಹಜವೇ ಸರಿ. ನಂತರ ಆಕೆಯ ಕನಸಿನಲ್ಲಿ ಗಂಗಾಮಾತೆ ಕಾಣಿಸಿಕೊಂಡು, ನಿನ್ನ ಮಕ್ಕಳನ್ನು ನಾನೇ ಕರೆದೊಯ್ದಿರುವೆ. ಅವರ ನೆನಪಿಗೆಂದು ಶಿಲೆಯಲ್ಲಿ ನನ್ನೊಡನೆ ಅವರು ಇರುವಂತೆ ಕಾಣುವ ಶಿಲ್ಪವನ್ನು ಮಾಡಿಸಿ ಹಾಕು ಎಂದು ಹೇಳಿದಳಂತೆ. ಅದರಂತೆ ಆ ತಾಯಿ ಈ ಶಿಲ್ಪವನ್ನು ಮಾಡಿಸಿ, ಹಳ್ಳದ

106. ಮೇಜರ್ ಜನರಲ್ ಬಿ.ಎಸ್. ರಾಜು, ಬಗ್ಗವಳ್ಳಿ

ಇಮೇಜ್
ಭಾರತೀಯ ಸೈನ್ಯದಲ್ಲಿ ಸೇರಿ ಸೇವೆ ಸಲ್ಲಿಸುತ್ತಿರುವವರಲ್ಲಿ ಅಜ್ಜಂಪುರ ತಾಲೂಕಿನ ಜನರ ಕೊಡುಗೆಯೂ ಇದೆ ಎನ್ನುವುದು ಹೆಮ್ಮೆಯ ವಿಷಯ. ಅನೇಕರು ಸಿಪಾಯಿಗಳಾಗಿ ದುಡಿಯುತ್ತಿರುವಂತೆ, ಅಜ್ಜಂಪುರ ಸಮೀಪದ ಗ್ರಾಮ ಬಗ್ಗವಳ್ಳಿಯಿಂದ ಸೈನ್ಯಕ್ಕೆ ಸೇರಿ, ಉನ್ನತ ಹುದ್ದೆಗೆ ಏರಿರುವ ಶ್ರೀ ಬಿ.ಎಸ್. ರಾಜು ಇವರನ್ನು 16-04-2018 ರಲ್ಲಿ ಬಗ್ಗವಳ್ಳಿಯ ಗ್ರಾಮಸ್ಥರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಮಿತ್ರ ಜಿ.ಬಿ. ಅಪ್ಪಾಜಿ ರಾಜು ಅವರೊಂದಿಗೆ ಮಾತನಾಡಿದ್ದರು. ಅದರ ವಿವರಗಳು ಈ ಸಂಚಿಕೆಯಲ್ಲಿದೆ. ಶಂಕರ  ಅಜ್ಜಂಪುರ ಸಂಪಾದಕರು, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ - 91485 72483 ಹನ್ನೆರಡನೆಯ ಶತಮಾನದ ಪ್ರಾರಂಭ ಕಾಲದಲ್ಲಿ‌ ಹೊಯ್ಸಳ ಸಾಮ್ರಾಜ್ಯದ ದೊರೆ ಕಟ್ಟಿಸಿದ ಯೋಗನರಸಿಂಹ ದೇವಾಲಯವಿರುವ ಬಗ್ಗವಳ್ಳಿಗೆ ಐತಿಹಾಸಿಕತೆ ಗರಿಮೆ‌ ಇದೆ. ಈಗ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಅವರ ಧೀರೋದಾತ್ತ ವ್ಯಕ್ತಿತ್ವದಿಂದಾಗಿ ಇನ್ನೊಂದು ಬಗೆಯ ಹಿರಿಮೆಯೂ ಕೂಡಿಬಂದಿದೆ. ಅವರು ಬಗ್ಗವಳ್ಳಿ ಅಷ್ಟೇ ಏಕೆ ಕನ್ನಡಿಗರೆಲ್ಲ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ.  ಇತ್ತೀಚೆಗೆ ಮೇಜರ್ ಜನರಲ್ ಆಗಿ ನಿವೃತ್ತಿ ಹೊಂದಿದ ಬಗ್ಗವಳ್ಳಿ ಸೋಮಶೇಖರ್ ರಾಜು  (ಬಿ.ಎಸ್. ರಾಜು) ಬಗ್ಗವಳ್ಳಿಯ ಗ್ರಾಮಸ್ಥರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಾನೂ ಅಲ್ಲಿದ್ದೆನಾದ್ದರಿಂದ, ರಾಜು ಅವರೊಂದಿಗೆ ಮಾತನಾಡುವ ಸದವಕಾಶ ದೊರ

25. ಕೋಟೆಯ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯ

ಇಮೇಜ್
ದೇವಾಲಯದ ಹೊರನೋಟ  ನಮ್ಮ ಊರಿನಲ್ಲಿ ಸುಮಾರು ಇಪ್ಪತ್ತಾರು ದೇವಾಲಯಗಳಿವೆಯೆಂದು ಒಮ್ಮೆ ಲೆಕ್ಕ ಹಾಕಿದ ಅಂದಾಜು. ಈ ಮೊದಲು ಅಜ್ಜಂಪುರದ ಗ್ರಾಮದೇವತೆ ಕಿರಾಳಮ್ಮ ದೇವಾಲಯದ ಬಗ್ಗೆ ಒಂದು ಲೇಖನ ಪ್ರಕಟವಾಗಿದೆ.  ಶ್ರೀ ಪ್ರಸನ್ನ ಸೋಮೇಶ್ವರ  ಅಜ್ಜಂಪುರದ ಕೋಟೆಯಲ್ಲಿ ಶ್ರೀ  ಪ್ರಸನ್ನ ಸೋಮೇಶ್ವರ  ದೇವಾಲಯವಿದೆ. ಅದು ಹೊರಗಿನಿಂದಲೇ ಏಕೆ, ಒಳಗಿನಿಂದಲೂ ಆಕರ್ಷಕವಾಗಿ ಕಾಣುವುದಿಲ್ಲ. ಹಿಂದೊಂದು ಕಾಲಕ್ಕೆ ಅಲ್ಲೊಂದು ಹಳೇ ಮಾದರಿಯ ಶಿವಮಂದಿರವಿದ್ದಿರಬೇಕು. ಏಕೆಂದರೆ ಈಗಿರುವ ರಚನೆಯಷ್ಟನ್ನೇ ನೋಡಿದರೆ, ಅದು ಪುನರ್ನಿರ್ಮಿತವಾದುದೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಆರೆಂಟು ದಶಕಗಳ ಹಿಂದೆ    ಕೋಟೆಯಲ್ಲಿ ಬ್ರಾಹ್ಮಣ್ಯವು ಚೆನ್ನಾಗಿಯೇ ಇತ್ತು. ಸಾಂಪ್ರದಾಯಿಕ ಪೂಜೆ-ಪುರಸ್ಕಾರಗಳು ಧಾರಾಳವಾಗಿ ನಡೆ ಯುತ್ತಿತ್ತು. ಮಳೆ ಬಾರದ ಬರಗಾಲದ ದಿನಗಳಲ್ಲಿ ಗರ್ಭಗುಡಿಯಲ್ಲಿನ ಶಿವ ಲಿಂಗಕ್ಕೆ ಕಟ್ಟೆ ಕಟ್ಚಿ ದೂರದ ಬಾವಿಗಳಿಂದ ನೀರು ತಂದು ರುದ್ರಾಭಿಷೇಕ ಮಾಡುತ್ತಿದ್ದರು. ಹಾಗೆಯೇ ನಂತರ ಸಮೃದ್ಧ ಮಳೆಯಾದ ಬಗ್ಗೆ ಹಿರಿಯರು ಮಾತನಾಡುತ್ತಿದ್ದುದನ್ನು ಕೇಳಿದ್ದೇನೆ. ದೇವಾಲಯಕ್ಕೆ ಮುಖಮಂಟಪ ಮತ್ತು ಗರ್ಭಗುಡಿಗಳು ಮಾತ್ರವೇ ಇತ್ತು. ನಂತರ ಅದಕ್ಕೊಂದು ಮಂಗಳೂರು ಹೆಂಚಿನ ಮಾಡನ್ನು ಮುಂಭಾಗಕ್ಕೆ ಸಿದ್ಧಪಡಿಸಿದರು. ಮುಖ ಮಂಟಪದಲ್ಲಿ ನಂದಿಯಿದ್ದು ಅದರ ಸುತ್ತಣ  ಚೌಕಾಕಾರದ ಕಂಬಗಳಲ್ಲಿ ನಕಾಶೆಗಳೇನೂ ಇಲ್ಲ.  ಆದರೆ ಗರ್ಭಗುಡಿಯಲ್ಲಿರುವ ಶಿವಲಿಂ

105. "ಅಜ್ಜಂಪುರ" ಸ್ಥಳನಾಮದ ಸುತ್ತ...........!

ಇಮೇಜ್
ಆತ್ಮೀಯ ಓದುಗರೇ, ದಿನಾಂಕ 16-02-2020 ರಂದು ವಾಗರ್ಥವೆಂಬ ಫೇಸ್ ಬುಕ್ ಅಂಕಣದಲ್ಲಿ ಪ್ರಕಟವಾದ ಶ್ರೀ ಮಾಧವ ಅಜ್ಜಂಪುರ ಅವರ ಕಿರುಬರಹವು ಅಜ್ಜಂಪುರದ ಸ್ಥಳನಾಮದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಅವರ ಆಸ್ಥೆಯನ್ನು ಮೆಚ್ಚುತ್ತೇನೆ.  ಇದು ಸಾಮಾಜಿಕ ಜಾಲತಾಣದ ಶಕ್ತಿಯೂ ಹೌದು. ಒಂದು ವಿಷಯದ ಬಗ್ಗೆ ಚರ್ಚೆ ಆರಂಭವಾಯಿತೆಂದರೆ, ಅದಕ್ಕೆ ಇರುವ ಹಲವು ಆಯಾಮಗಳು ಹೊರಬರುತ್ತವೆ. ಹೊಸ ಸಂಗತಿಗಳು ತಿಳಿಯುತ್ತವೆ.  ಈ ಕಾರಣದಿಂದ ಇದುವರೆಗೆ ಪ್ರಕಟವಾದ ಅಭಿಪ್ರಾಯಗಳನ್ನು ಇಲ್ಲಿ ದಾಖಲು ಮಾಡಿರುವೆ. ನನ್ನ ಅಭಿಪ್ರಾಯವನ್ನೂ ನಮೂದಿಸಿರುವೆ. ಅನೇಕರು ಈ ವಿಷಯದ ಕುರಿತು ಆಸಕ್ತಿಯಿಂದ ಸ್ಪಂದಿಸಿದ್ದಾರೆ. ಶಾಸನಾಧಾರಿತ ಮಾಹಿತಿಗಳನ್ನು ಹುಡುಕುವಂತೆ ಸಲಹೆ ನೀಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು. ಈ ಕುರಿತು ಇನ್ನಷ್ಟು ಮಾಹಿತಿಗಳು ದೊರೆತಂತೆಲ್ಲ ಅದನ್ನೂ ಇಲ್ಲಿಯೇ ಸೇರಿಸಲಾಗುವುದು. Madhav Ajjampur ವಾಗರ್ಥ 14 hrs  ·  ಈಚೆಗೆ ನನ್ನ surname ಆಗಿರುವ "ಅಜ್ಜಂಪುರ"ದ ಬಗ್ಗೆ ಒಂದು ಸ್ವಾರಸ್ಯವಾದ ಕತೆ ಕೇಳಿದೆ. ಅದರ ತಾತ್ಪರ್ಯ ಹೀಗಿತ್ತು: "ಅಜ್ಜಂಪುರ" ಎಂಬುದು "ಅಮ್ಮಿಜಾನ್ ಪುರ" ಆಗಿತ್ತು. ಅಮ್ಮಿಜಾನ್ ಎಂಬ ಒಬ್ಬ ಮುಸಲ್ಮಾನರು ಆ ಊರಲ್ಲಿ ನಡೆಯುವ ಸುಮಾರು ಎಲ್ಲ ಕಾರ್ಯಕ್ರಮಗಳಿಗೆ ಸಹಾಯ ನೀಡುತ್ತಿದ್ದರು. ಆದ್ದರಿಂದ, ಆ ಊರಿನ ಹೆಸರು 'ಅಮ್ಮಿ ಜಾನ್