ಪೋಸ್ಟ್‌ಗಳು

ಸೆಪ್ಟೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಪರೂಪದ ಸಾಧನೆಯ ಹೆಚ್.ಆರ್.ಇಂದಿರಾ

ಇಮೇಜ್
ಅಜ್ಜಂಪುರದ ಹಿರೇನಲ್ಲೂರು ರಾಮಸ್ವಾಮಿಯವರ ಪುತ್ರಿ  ಇಂದಿರಾ,   1960ರ ದಶಕದಲ್ಲಿ ಬೆಂಗಳೂರಿನ ಕಾಫೀ ಬೋರ್ಡ್ ನಲ್ಲಿ ಉದ್ಯೋಗಿಯಾಗಿದ್ದರು.  ಅವರಿಗೆ ಆಕಾಶವಾಣಿಯ ಸಂಪರ್ಕ ಚೆನ್ನಾಗಿತ್ತು. ಅವರಲ್ಲಿದ್ದ ಸಾಹಿತ್ಯ, ಸಂಗೀತಗಳ ಸದಭಿರುಚಿಯ ಪರಿಣಾಮವಾಗಿ, ಎಚ್. ವಿ. ನಾರಾಯಣ್ ಅವರ ಸಲಹೆ-ಸಹಕಾರಗಳೊಂದಿಗೆ ಕನ್ನಡ ಲೇಖಕಿಯರ ಸಂಘವನ್ನು ಸ್ಥಾಪಿಸಿದರು. ಅದುವರೆಗೂ ಲೇಖಕಿಯಾಗಿ ಪರಿಚಿತರಿದ್ದ ಎಚ್. ಎಸ್. ಪಾರ್ವತಿಯವರನ್ನು ಹುರಿದುಂಬಿಸಿ ಭಾಷಣಕಾರ್ತಿಯನ್ನಾಗಿ ರೂಪಿಸಿದರು.  ಅಜ್ಜಂಪುರದಂಥ ಸಣ್ಣ ಊರಿನಿಂದ ಬೆಂಗಳೂರು ತಲುಪಿ, ಅಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡದ್ದು ಅವರ ಹೆಚ್ಚುಗಾರಿಕೆಯಾಗಿರುವಂತೆಯೇ, ಬೆಂಗಳೂರಿನಲ್ಲಿ ಆ ದಿನಗಳಲ್ಲಿ ಅಂಥ ವಾತಾವರಣ ಇದ್ದಿತೆನ್ನುವುದೂ ಸ್ಮರಣಾರ್ಹ.    ಸಾಹಿತ್ಯ, ಸದಭಿರುಚಿ, ಸಂಘಟನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸದಾ ಚಟುವಟಿಕೆ, ಕ್ರಿಯಾಶೀಲತೆಯ ಸ್ವಭಾವ ಹೊಂದಿದ್ದ ಇಂದಿರಾ ನಮ್ಮ ಊರಿನವರೆಂಬುದು ಹೆಮ್ಮೆಯ ಸಂಗತಿ. ಶ್ರೀಮತಿ ಮಾಲಾ ಮಂಜುನಾಥ್    ಇಂಥ ಸಾಧಕಿಯ ಸೋದರಿ, ಶ್ರೀಮತಿ ಮಾಲಾ ಮಂಜುನಾಥ್ ಕೂಡ ಸಾಹಿತ್ಯದ ಅಭಿರುಚಿಯುಳ್ಳವರು. ನಾಡಿನ ಹಲವು ಕನ್ನಡ ಪತ್ರಿಕೆಗಳಲ್ಲಿ   ಅವರ ಕಿರುಗತೆಗಳು, ಕವಿತೆಗಳು  ಪ್ರಕಟಗೊಳ್ಳುತ್ತಿರುತ್ತವೆ. ತಮ್ಮ ಪ್ರೀತಿಯ ಸೋದರಿಯ ಕುರಿತಾದ ನೆನಪುಗಳನ್ನು ಆತ್ಮೀಯವಾಗಿ ಇಲ್ಲಿ ಹಿಡಿದಿಟ್ಟಿದ್ದಾರೆ.  ================================