ಪೋಸ್ಟ್‌ಗಳು

ಸೆಪ್ಟೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

120. ಶಿಕ್ಷಣವೇತ್ತ, ವಿದ್ಯಾಭಿಮಾನಿ ಶ್ರೀ ನರಸೀಪುರ ದೊಡ್ಡಮನೆ ನಾಗರಾಜ್ (ಎನ್.ಡಿ.ಎನ್.)

ಇಮೇಜ್
  ಶಿಕ್ಷಣವೇತ್ತ, ವಿದ್ಯಾಭಿಮಾನಿ ಶ್ರೀ ನರಸೀಪುರ ದೊಡ್ಡಮನೆ ನಾಗರಾಜ್ (ಎನ್.ಡಿ.ಎನ್.) ಅಜ್ಜಂಪುರದ ಶೆಟ್ರು ಶಿದ್ದಪ್ಪನವರ ಪದವೀಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ, ಅಜ್ಜಂಪುರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ತರೀಕೆರೆಯಲ್ಲಿ ನೆಲೆಸಿದ್ದ ಎನ್.ಡಿ. ನಾಗರಾಜರು ನಿಧನರಾಗಿದ್ದಾರೆ. ಎನ್.ಡಿ.ಎನ್. ಎಂಬ ಸಂಕ್ಷಿಪ್ತ ನಾಮದಿಂದ ಹೆಸರಾಗಿದ್ದ ನಾಗರಾಜರ ಹೆಚ್ಚಿನ ಪರಿಚಯ ನನಗೆ ಇರಲಿಲ್ಲವಾದರೂ, ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯನವರಿಗೆ ಅವರು ಆಪ್ತರು. ವಿದ್ಯಾಭಿಮಾನಿಗಳಾಗಿದ್ದ ನನ್ನ ತಂದೆಯನ್ನು ಕಂಡರೆ ನಾಗರಾಜರಿಗೂ ಅದೇ ಬಗೆಯ ಗೌರವ. ನಾನು ಅವರನ್ನು ಒಂದೆರಡು ಬಾರಿ ಕಂಡು ಮಾತನಾಡಿದ್ದುಂಟು. ಆಗೆಲ್ಲ ನನ್ನ ತಂದೆಯನ್ನು ಪ್ರೀತಿಯಿಂದ ಸ್ಮರಿಸಿದ್ದರು.. ಸ್ವತಃ ಆಂಗ್ಲ ಪ್ರಾಧ್ಯಾಪಕರಾಗಿದ್ದ ನಾಗರಾಜರಿಗೆ ಸಾಹಿತ್ಯ, ಸಂಸ್ಕೃತಿ, ಕಲೆಗಳಲ್ಲಿ, ರಂಗಭೂಮಿಗಳ ಬಗ್ಗೆ ಅಪಾರ ಅಭಿಮಾನ. ನಿವೃತ್ತಿಯ ನಂತರವೂ ಸಂಸ್ಕೃತದ ಅಧ್ಯಯನದಲ್ಲಿ ತೊಡಗಿದ್ದರು. ನಾನೊಮ್ಮೆ ಇಂಗ್ಲಿಷ್ ಬರಹವೊಂದರ ಪರಿಷ್ಕರಣೆಗಾಗಿ ಅವರನ್ನು ಕೋರಿದಾಗ, ಸಮಯಾಭಾವದಿಂದ ಸಾಧ್ಯವಾಗಲಾರದು ಎಂದು ತುಂಬ ಸಂಕೋಚದಿಂದ ಹೇಳಿಕೊಂಡಿದ್ದರು. ಪ್ರತಿ ಹಬ್ಬಗಳಿಗೂ ಶುಭಾಶಯ ಕೋರುತ್ತಿದ್ದ ಆತ್ಮೀಯರೊಬ್ಬರು ಮರೆಯಾಗಿದ್ದಾರೆ. ಅವರ ಅಧ್ಯಯನಶೀಲತೆ, ಶಿಕ್ಷಣದ ಬಗೆಗಿನ ಪ್ರೀತಿ, ವಿದ್ಯಾರ್ಥಿಗಳನ್ನು ಕುರಿತಾದ ಕಾಳಜಿಗಳಿಂದಾಗಿ ಅವರು ನನ್ನೂರಿನ ವಿದ್ಯಾವಲಯದಲ್ಲಿ ತುಂಬ ಜನಪ್ರಿಯರಾ