ಪೋಸ್ಟ್‌ಗಳು

ಡಿಸೆಂಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

94. ಅಜ್ಜಂಪುರ ಕೋಟೆ ಶ್ರೀ ಆಂಜನೇಯ ದೇವಾಲಯದ ದ್ವಿತೀಯ ವಾರ್ಷಿಕ ಹನುಮ ಜಯಂತಿ

ಇಮೇಜ್
ಎಲ್ಲರಿಗೂ 2019ನೇ ವರ್ಷದ ಶುಭಾಶಯಗಳು ಅಜ್ಜಂಪುರದಲ್ಲಿ ಕಳೆದ ವರ್ಷ ಹನುಮ ಜಯಂತಿಯು ನಡೆದ ಸಂಭ್ರಮವನ್ನು ನೆನಪಿಸಿಕೊಂಡರೆ, ನ ಭೂತೋ, ನ ಭವಿಷ್ಯತಿ ಎಂಬತಿತ್ತು. ನ ಭೂತೋ-ಇದನ್ನು ಒಪ್ಪಿಕೊಳ್ಳೋಣ, ಆದರೆ ನ ಭವಿಷ್ಯತಿ ಎಂಬಂತೆ ಆಗಲಿಲ್ಲ. ಈ ವರ್ಷವೂ ಅದೇ ಉತ್ಸಾಹದಿಂದ ನಡೆಸಲಾಗಿದೆ. ಈ ಸಂಬಂಧವಾಗಿ ನಾನು ಅವಧೂತ ಬಳಗದ ಕೆಲವರನ್ನು ಮಾತನಾಡಿಸಿದ್ದುಂಟು. "ಭಗವಂತನ ಸೇವೆ ನಡೆಯಲು ಒದಗಿದ ಪ್ರೇರಣೆಯನ್ನು ನಾವು ಮರೆಯಲಾರೆವು. ನಮ್ಮ ನಿರೀಕ್ಷೆಗೂ ಮೀರಿ ಈ ಉತ್ಸವ ನಡೆದದ್ದು ನಮ್ಮಲ್ಲಿ ಹುಮ್ಮಸ್ಸನ್ನು ತುಂಬಿದೆ" ಎಂದು ಹೇಳಿಕೊಂಡರು.  ಊರಿನ ಸಂಭ್ರಮಕ್ಕೆ, ಜನಗಳ ಭಾಗವಹಿಸುವಿಕೆಗೆ ಇಂಥ ಉತ್ಸವಗಳು, ಜಾತ್ರೆಗಳು, ಮೆರವಣಿಗೆಗಳು ಎಲ್ಲವೂ ಅವಶ್ಯಕವೇ ಸರಿ. ಅದನ್ನು ಒಂದೇ ಕ್ರಮದಲ್ಲಿ ನಿರ್ವಹಿಸುವ ವ್ಯವಸ್ಥೆ ಇರುವಂತಾದರೆ, ಅದು ಸಾಂಸ್ಕೃತಿಕ, ಧಾರ್ಮಿಕ ಕಲಾಪಗಳಿಗೆ ನೀಡುವ ಮಹತ್ವದ ಕೊಡುಗೆಯಾದೀತು. ಇಂಥ ಉತ್ಸವ, ಆಚರಣೆಗಳು ಊರೊಟ್ಟಿನ ಜನರನ್ನು ಒಂದುಗೂಡಿಸಲು ನೆರವಾಗುತ್ತದೆ. ಅದನ್ನುಅಜ್ಜಂಪುರದ ಯುವಪೀಳಿಗೆ ಅರ್ಥೈಸಿಕೊಂಡು ಮುಂದುವರೆಸುವಂತಾಗಲಿ ಎನ್ನುವುದು ಆಶಯ. ಚಿತ್ರ-ಲೇಖನಗಳನ್ನು ಗೆಳೆಯ ಅಪೂರ್ವ ಅಜ್ಜಂಪುರ ಸಿದ್ಧಪಡಿಸಿದ್ದಾರೆ. ಅವರಿಗೆ ವಂದನೆಗಳು. ಶಂಕರ ಅಜ್ಜಂಪುರ  ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ದೂರವಾಣಿ - 99866 72483 ಮಿಂಚಂಚೆ - shankarajp@gmail.com ---------------------

93. ಮರೆಯಾದ ಮಾಧವರಾವ್ (ಮಾಧು)

ಇಮೇಜ್
93. ಮರೆಯಾದ ಮಾಧವರಾವ್ (ಮಾಧು) ಬಗ್ಗ ವಳ್ಳಿ ನರಸಿಂಹಮೂರ್ತಿ ಮಾಧವರಾವ್. ಇದು ಅವರ ಪೂರ್ಣ ಹೆಸರು. ಆದರೆ ಅವರು ಮಾಧು ಎಂಬ ಹೆಸರಿನಿಂದಲೇ ಅಜ್ಜಂಪುರದಲ್ಲಿ ಜನಪ್ರಿಯರಾಗಿದ್ದರು. ತೆಳುವಾದ ಶರೀರ, ಸದಾ ಚಟುವಟಿಕೆ, ಉಡುಗೆ ತೊಡುಗೆಗಳಲ್ಲಿ ಉದಾಸೀನವಿರಲಿಲ್ಲ. ಯಾವ ದುರಭ್ಯಾಸಗಳು ಇರಲಿಲ್ಲ. 59 ಸಾಯುವಂಥ ವಯಸ್ಸೇನೂ ಅಲ್ಲ. ಅನಾಯಾಸೇನ ಮರಣಂ ಎಂಬಂತೆ,  ಬೆಂಗಳೂರಿನಲ್ಲಿರುವ ತಮ್ಮ ಮಗನ ಮನೆಯಲ್ಲಿ ಮಲಗಿದಲ್ಲಿಯೇ ಮೃತರಾದರು.   ರಾಜಕೀಯ ವಿದ್ಯಮಾನಗಳ ಬಗ್ಗೆ ತುಂಬ ಆಸಕ್ತಿಯಿದ್ದರೂ, ಸ್ಥಳೀಯ ರಾಜಕೀಯದಲ್ಲಿ ಆಸಕ್ತಿ ತಳೆದವರಲ್ಲ. ಬದಲಾಗಿ ಅವರ ಪತ್ನಿಗೆ ಪ್ರೋತ್ಸಾಹ ನೀಡಿದ್ದರು. ಪುರಸಭೆಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದುಂಟು. ಗೆಲ್ಲಲಿಲ್ಲ, ಅದು ಬೇರೆಯ ಸಂಗತಿ. ಅವರ ತಂದೆ ಬಗ್ಗವಳ್ಳಿ ನರಸಿಂಹಮೂರ್ತಿಗಳ ಬಗ್ಗೆ ಇದೇ ಬ್ಲಾಗ್ ನಲ್ಲಿ ನೆನಪನ್ನು ದಾಖಲಿಸಿದ್ದೇನೆ. ಆದರೆ ಮಾಧವರಾವ್ ಬಗ್ಗೆ ನುಡಿನಮನ ಬರೆಯಬೇಕಾಗಿ ಬರುತ್ತದೆಂದು ಎಣಿಸಿರಲಿಲ್ಲ. ಅದೆಲ್ಲ ವಿಧಿಯ ವೈಪರೀತ್ಯವೆಂದಷ್ಟೇ ಹೇಳಬಹುದು. ನಾನು ಅವರ ಎದುರು ಮನೆಯಲ್ಲೇ ಇದ್ದುದು, ನನ್ನ ಬಾಲ್ಯವನ್ನು ಅಜ್ಜಂಪುರದಲ್ಲಿ ಕಳೆದುದರ ಆಧಾರದಲ್ಲಿ, ನಂತರವೂ ಊರಿನೊಂದಿಗೆ ತಪ್ಪದ ನನ್ನ ಒಡನಾಟದಿಂದ ಈ ಬರಹವನ್ನು ದಾಖಲಿಸಲು ಸಾಧ್ಯವಾಗಿದೆ. ಅಂತೆಯೇ ನಾನು ಐದು ವರ್ಷಗಳ  ಹಿಂದೆ ಶಿವಮೊಗ್ಗಕ್ಕೆ ಬಂದು ನೆಲೆಸಿದ ನಂತರ, ಅಜ್ಜಂಪುರದ ಗ್ರಾಮದೇವತೆ ಕಿರಾಳಮ್ಮನ ಜಾತ್ರೆ,