ಪೋಸ್ಟ್‌ಗಳು

2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

127) ಹಿಮ್ಸ್ ನಿರ್ದೇಶಕರಾಗಿ ಡಾ| ಬಿ ರಾಜಣ್ಣ

ಇಮೇಜ್
ಮಿತ್ರರಾದ ಶ್ರೀ ಮಲ್ಲಿಕಾರ್ಜುನ ಅಜ್ಜಂಪುರ ಇವರು ಅಜ್ಜಂಪುರದ ಮತ್ತೊಂದು ಪ್ರತಿಭೆಯನ್ನು ಗುರುತಿಸಿ ಫೇಸ್ಬುಕ್ಕಿನಲ್ಲಿ ಲೇಖನ ಪ್ರಕಟಿಸಿದ್ದರು. ಅದನ್ನು ಇಲ್ಲಿಯೂ ಹಂಚಲಾಗಿದೆ. ಹೀಗೆ ನಿಮಗೆ ತಿಳಿದಿರುವ ಅಜ್ಜಂಪುರದ ಹೊಸ ಇಲ್ಲವೇ ಹಳೆಯ ಸಾಧಕರ ಬಗ್ಗೆ ಚಿತ್ರ ಸಹಿತ ಒಂದು ಚಿಕ್ಕ ಪರಿಚಯ ಕಳಿಸಿಕೊಡಿ. ಅದನ್ನು ಪ್ರಕಟಿಸಬಹುದು. ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ         - ೦-೦-೦-೦-೦-೦-೦-೦- ಅಭಿನಂದನೆಗಳು  ಡಾಕ್ಟರ್ ರಾಜಣ್ಣ ! - ಮಲ್ಲಿಕಾರ್ಜುನ ಅಜ್ಜಂಪುರ ನನ್ನೂರಿನ  ಅಜ್ಜಂಪುರದಲ್ಲಿ ಪ್ರಾಥಮಿಕ ಶಾಲೆಯನ್ನು ಅಭ್ಯಾಸ ಮಾಡಿದ ಬಾಲ್ಯದ ಮಿತ್ರ ರಾಜಣ್ಣ ಹಾಸನದ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾಗಿ ಪದಗ್ರಹಣ ಮಾಡಿರುತ್ತಾರೆ. ಇದು ನಮ್ಮೂರಿಗೆ ಹೆಮ್ಮೆ ತರುವ ವಿಷಯವಾಗಿದೆ ಪ್ರಾಥಮಿಕ ಶಿಕ್ಷಣವನ್ನು ಅಜ್ಜಂಪುರದ  ಶಾಲೆಯಲ್ಲಿ ಮಾಧ್ಯಮಿಕ  ಮತ್ತು ಪ್ರೌಢಶಾಲೆಯನ್ನು ಸಹೋದರರ ಜೊತೆಯಲ್ಲಿ ತೆರಳಿ ಚಾಮರಾಜ ನಗರದಲ್ಲಿ ಮುಗಿಸಿದ ರಾಜಣ್ಣ ಎಂಬಿಬಿಎಸ್ ವಿದ್ಯಾಭ್ಯಾಸವನ್ನು ದಾವಣಗೆರೆಯಲ್ಲಿ ನಂತರ ಜನರಲ್ ಸರ್ಜರಿ ಸ್ನಾತಕೋತ್ತರ ಪದವಿಯನ್ನು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿಯೂ ಮುಗಿಸಿ ಸೂಪರ್ ಸ್ಪೆಷಾಲಿಟಿ ತಜ್ಞತೆಯನ್ನು ಬೆಂಗಳೂರು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಪೂರೈಸಿದ ನಂತರ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯನ್ನು ಪ್ರಾರಂಭಿಸಿ 16

126. ಅಪೂರ್ವ ಕಥೆ ಕವನಗಳ ಅವಲೋಕನ

ಇಮೇಜ್
ಗೆಳೆಯ ಅಪೂರ್ವ ಅಜ್ಜಂಪುರ ಇವರ "ಒಂದಷ್ಟು ಕಥೆಗಳು ಕವಿತೆಗಳು" - ಈ ಪುಸ್ತಕದ ಅವಲೋಕನವು ಇತ್ತೀಚೆಗೆ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಅದರ ಅವಲೋಕನದ ವರದಿ ಇಲ್ಲಿದೆ.  ಅವರು ನನ್ನ ಮಿತ್ರರು ಎಂಬ ಅಭಿಮಾನ ಒಂದು ಕಡೆ ಇದ್ದರೆ, ಈ ಪುಸ್ತಕದ ಪ್ರಕಟಣಾಪೂರ್ವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾದುದು ಕೂಡ ನನಗೆ ಸ್ಮರಣೀಯ ಸಂಗತಿ.  ಊರ ಲೇಖಕನ ಪುಸ್ತಕವು ಊರಿನಲ್ಲೇ ಅವಲೋಕನಗೊಂಡಿರುವುದು ಕೂಡ ವಿಶೇಷ ಹೌದು! ಚಿತ್ರ - ವರದಿಗಳು ಇಲ್ಲಿವೆ. ಸಂಪಾದಕ ಶಂಕರ ಅಜ್ಜಂಪುರ ಅಂತರಜಾಲದಲ್ಲಿ ಅಜ್ಜಂಪುರ ******************************* "ಅಪೂರ್ವ ಬರೆದದ್ದು ಒಂದಷ್ಟಾದರೂ ಅವು ಅಪರೂಪದ ಸಣ್ಣಕತೆಗಳು, ಕವಿತೆಗಳು!" ಈ ಮಾತು ಹೇಳಿದವರು ಕನ್ನಡ ಪ್ರಾಧ್ಯಾಪಕರಾದ ಪ್ರೊ.ಮಹಾಲಿಂಗಪ್ಪ. ಸಂದರ್ಭ :  ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪ರ ಮೇ ತಿಂಗಳ ೨೪, ಶುಕ್ರವಾರದಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿ ಮತ್ತು ಸ.ಪ್ರ.ದ.ಕಾಲೇಜು ಸಂಯುಕ್ತವಾಗಿ ಆಯೋಜಿಸಿದ 'ಒಂದಷ್ಟು ಕಥೆ, ಕವಿತೆಗಳು' ಒಂದು ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಅಭಿಪ್ರಾಯ ವ್ಯಕ್ತಪಡಿಸಿದರು. 'ಒಂದು ನಿಧಿಯ ಸುತ್ತ' ಕತೆಯಲ್ಲಿ ಜಾನಪದ, ಐತಿಹಾಸಿಕ ಹಿನ್ನೆಲೆಯಲ್ಲಿ ವರ್ತಮಾನದ ಪ್ರಸಂಗವು ಬಿಚ್ಚಿಕೊಳ್ಳುತ್ತದೆ. ಕತೆಯು ನಡೆಯುವ 'ಅಸಾವತಿ'ಯು ಗಂಗರ