ಪೋಸ್ಟ್‌ಗಳು

ನವೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

09. ವಿಶಿಷ್ಟ ವನಪಾಲಕ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ

ಇಮೇಜ್
ಹಿಂದಿನ ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದಂತೆ, ಈ ಸಂಚಿಕೆಯಲ್ಲಿ ನಿವೃತ್ತ ಅರಣ್ಯಮುಖ್ಯಾಧಿಕಾರಿ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿಗಳ ಪರಿಚಯ ಲೇಖನ ಇಲ್ಲಿದೆ . ಅವರ ಸಾಧನೆ , ಸಾಮಾಜಿಕ ಕಾಳಜಿಗಳನ್ನು ಬಿಂಬಿಸುವ ಹಲವಾರು ಅಂಶಗಳನ್ನು ನೀವು ಇಲ್ಲಿ ಗುರುತಿಸಬಹುದು . ಅವರ ಹಿರಿಯರು ಕಳೆದ ಶತಮಾನದ ಆದಿಭಾಗದಲ್ಲಿ ಅಜ್ಜಂಪುರದ ನಿವಾಸಿಗಳಾಗಿದ್ದವರು . ಕಾಲಾಂತರದಲ್ಲಿ ಈ ಕುಟುಂಬದ ಸದಸ್ಯರು ರಾಜ್ಯದ , ದೇಶದ ಹಾಗೂ ವಿಶ್ವದ ಅನೇಕ ಎಡೆಗಳಿಗೆ ತೆರಳಿ ಸಾಧನೆ ಮಾಡಿದರು . ಈ ಎಲ್ಲ ಹಂತಗಳಲ್ಲೂ ತಮ್ಮ ಹುಟ್ಟೂರಿನ ಬಗೆಗಿನ ಅಭಿಮಾನವನ್ನು ಅವರಾರೂ ಮರೆಯಲಿಲ್ಲವೆನ್ನುವುದು ವಿಶೇಷ . ಸರಳ , ಸಜ್ಜನಿಕೆಯ ಜತೆಜತೆಗೇ , ತಮಗನ್ನಿಸಿದುದನ್ನು ನಿರ್ಭಿಡೆಯಿಂದ ಹೇಳುವ , ಅರಣ್ಯ , ಪರಿಸರ ಮತ್ತು ಮಾನವೀಯತೆಗಳ ಬಗ್ಗೆ ಕಳಕಳಿಹೊಂದಿರುವ ೮೭ರ ಹರೆಯದ ಅಜ್ಜಂಪುರ ಕೃಷ್ಣಸ್ವಾಮಿಗಳು ಉತ್ತಮ ಅಭಿರುಚಿಯ ಪ್ರತೀಕ . ಅವರನ್ನು ಬೆಂಗಳೂರಿನ ಬಿ . ಟಿ . ಎಂ . ಲೇಔಟ್‌ನ ಅವರ ನಿವಾಸಕ್ಕೆ ಹೋಗಿ ಸಂದರ್ಶಿಸಿದೆ . ಅವರು ನೀಡಿರುವ ಅಪರೂಪದ ಛಾಯಾಚಿತ್ರಗಳು , ಲೇಖನಗಳು ಕಳೆದು ಹೋದ ಕಾಲದ ಸಿರಿಯನ್ನು ನೆನಪಿಸುತ್ತವೆ . " ಅನುಭವದ ಬೆಂಬಲ ಇರುವಷ್ಟು ದೂರಕ್ಕೆ ನನಗೆ ನೆನಪಾದುದನ್ನೆಲ್ಲ ನನ್ನ ಬರಹಗಳಲ್ಲಿ ದಾಖಲಿಸಿದ್ದೇನೆ . ಇವು ಯುವ ಪೀಳಿಗೆಗೆ ಮಾದರಿಯಾದೀತು ಎಂಬ ಆಶಯ ನನ್ನದು , ಅವರು ಅದನ್ನು ಸದುಪಯೋಗ ಮಾಡಿಕೊಂಡರೆ ನನ್ನ ಬರಹ ಸಾರ್ಥಕವಾದಂತೆ . ಈ ಬರಹಗಳಲ

08. ಸಾಹಸಿ ಕನ್ನಡಿಗ - ಅಜ್ಜಂಪುರ ಸರ್ಕಸ್ ಸುಬ್ಬರಾವ್

ಇಮೇಜ್
    ಹಿರಿಯ   ಪತ್ರಕರ್ತ   ಗರುಡನಗಿರಿ   ನಾಗರಾಜರು   ಅಜ್ಜಂಪುರದವರೇನೂ   ಅಲ್ಲ .   ಆದರೆ   ಅವರು   ನಾಡು - ನುಡಿಯ   ಬಗ್ಗೆ   ತಳೆದ   ವಿಶಾಲ   ದೃಷ್ಟಿಕೋನ   ಎಲ್ಲರೂ   ಅನುಸರಿಸುವಂಥದು .   ಅವರೊಂದು   ಸಂದರ್ಶನದಲ್ಲಿ   ಹೇಳಿದ್ದರು   : "   ಕರ್ನಾಟಕದಲ್ಲಿ   27000   ಕ್ಕೂ   ಹೆಚ್ಚು   ಹಳ್ಳಿಗಳಿವೆ .   ನಾನು   ಕನಿಷ್ಠ   20000   ಹಳ್ಳಿಗಳನ್ನಾದರೂ   ಸುತ್ತಿರುವೆ .   ಅಲ್ಲಿನ   ವಿಶೇಷಗಳು ,   ಜನ ,   ಸಂಸ್ಕೃತಿಗಳ   ಬಗ್ಗೆ   ಅಧ್ಯಯನ   ಮಾಡುವ   ಅವಕಾಶಗಳನ್ನು   ಅರಸಿಹೋದೆ .   ಹೀಗಾಗಿ   ನಮ್ಮದೇ   ಪ್ರದೇಶಗಳ   ವೈವಿಧ್ಯ ,   ಪ್ರತಿಭೆಗಳು   ಕಣ್ಣಿಗೆ   ಕಾಣುವಂತಾಯಿತು .   ಇದು   ಪತ್ರಕರ್ತರಿಗೆ   ಅತ್ಯವಶ್ಯ .   ಕುಳಿತಲ್ಲೇ   ವರದಿ   ಸಿದ್ಧಪಡಿಸುವ   ಕ್ರಮ   ಸೂಕ್ತವಲ್ಲ ."   ಅವರ   ಅಧ್ಯಯನಶೀಲತೆಯಿಂದಾಗಿಯೇ   ಕನ್ನಡಿಗರು   ಮರೆತುಬಿಡಬಹುದಾಗಿದ್ದ   ಸರ್ಕಸ್   ಸುಬ್ಬರಾಯರ   ಸಾಹಸಗಾಥೆ   ನಿಮ್ಮ   ಮುಂದೆ   ಬರುವಂತಾಗಿದೆ .  ಪ್ರಸ್ತುತ   ಲೇಖನ   ಅವರ   ಲೇಖನಗಳ   ಸಂಗ್ರಹ   "   ಗರುಡದೃಷ್ಟಿ " ಯಿಂದ   ಆಯ್ದುದು .   ಇದೇ   ಸಂಗ್ರಹದಲ್ಲಿ   ಈ   ಕಾಲದವರಾರೂ   ನಂಬದಂತಹ   ಜೀವನ   ನಡೆಸಿಹೋದ   ಅನೇಕ   ಹಿರಿಯರ   ವ್ಯಕ್ತಿಚಿತ್ರಗಳಿವೆ .   ಅತ್ಯಂತ   ಸಣ್ಣದಾಗಿ   ಯೋಚಿಸುವವರಿಂದ   ಹಿಡಿದು ,   ತಾವು   ನಂಬಿದ   ಸಿದ್ಧಾಂತ