ಪೋಸ್ಟ್‌ಗಳು

ಡಿಸೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

119. ಅಜ್ಜಂಪುರದ ದೇವರಮನೆಗಳು-2

ಇಮೇಜ್
ಆತ್ಮೀಯ ಓದುಗರೇ, ಈ ಸಂಚಿಕೆಯಲ್ಲಿ ಅಪೂರ್ವ ಅವರು ಅಜ್ಜಂಪುರದ ಮತ್ತೊಂದು ದೇವರಮನೆಯನ್ನು ಪರಿಚಯಿಸಿದ್ದಾರೆ. ಈ ಹಿಂದೆಯೂ ಎರಡು ಪ್ರಕಟವಾಗಿವೆ. ಇವು ಹಿಂದಿನಿಂದಲೂ ಅಜ್ಜಂಪುರದಲ್ಲಿ ಇವೆಯಾದರೂ, ಇವುಗಳ ಬಗ್ಗೆ ಜನರ ಗಮನ ಅಷ್ಚಾಗಿ ಹರಿದಂತಿಲ್ಲ. ಏಕೆಂದರೆ ಇವು ಹಿಂದೆ ಇದ್ದ ಸಾಧಾರಣ ಮಣ್ಣಿನ ಮನೆಗಳ ಜೊತೆಗೇ ಇರುತ್ತಿದ್ದುದರಿಂದ, ಇವುಗಳನ್ನು ವಿಶೇಷವೆಂದು ತಿಳಿದವರು ಕಡಿಮೆ.  ಈ ವಂಶಾವಳಿಯ ಕಾರಣದಿಂದ ಅಜ್ಜಂಪುರದ ಕೆರೆಗೆ ಪರ್ವತರಾಯನ ಕೆರೆ ಎಂದು ಹೆಸರು ಬಂದಿತೆಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ ಒಂದು ತರ್ಕದ ಪ್ರಕಾರ, ವಿಜಯನಗರದ ಅರಸರು ನಾಡಿನ ಹಲವಾರು ದೇವಾಲಯಗಳನ್ನು, ಕೆರೆಗಳನ್ನು ಅಭಿವೃದ್ಧಿಪಡಿಸಿದ  ಉದಾಹರಣೆಗಳಿವೆ. ಇದೇ ವಂಶಕ್ಕೆ ಸೇರಿರಬಹುದಾದ ಸಾಮಂತರೋ, ನಾಯಕರಲ್ಲಿ ಓರ್ವನಾಗಿರಬಹುದಾದ ಪರ್ವತರಾಯನಿಂದಲೂ ಇದು ಉಗಮವಾಗಿರಬಹುದು. ಏಕೆಂದರೆ, ಬುಕ್ಕಾಂಬುಧಿಯ ಕೆರೆಗೆ ವಿಜಯನಗರದ ಸಂಸರ್ಗವಿದೆ. ಅಜ್ಜಂಪುರದ ದೇವಾಲಯಗಳ ನವೀಕರಣದಲ್ಲಿ ವಿಜಯನಗರದ ಪಾತ್ರವಿದೆ. ಏನಿದ್ದರೂ, ಇತಿಹಾಸಜ್ಞರು ಸಂಶೋಧಿಸಬೇಕಾಗಿರುವ  ಅಂಶವಿದೆಂದು ತಿಳಿಯಬಹುದು.   ಆದರೆ ಸಾಂಸ್ಕೃತಿಕ ಮಹತ್ವವುಳ್ಳ ಈ ದೇವರಮನೆಗಳು, ಆಯಾ ಕುಟುಂಬಗಳ, ವರ್ಗಗಳ ಪದ್ಧತಿಯನ್ನು ಜೀವಂತವಾಗಿಟ್ಟಿವೆ. ಸುಧಾರಿಸಿದ ಆರ್ಥಿಕ ಪರಿಸ್ಥಿತಿಯಿಂದಾಗಿ, ಸಮುದಾಯದ ಜನರು ತಮ್ಮ ಕುಲದೈವವನ್ನು ಮರೆಯದೇ, ಅವುಗಳಿದ್ದ ಸ್ಥಳಗಳನ್ನು ನವೀಕರಿಸಿ, ಸಮಾಜದ ಕಾರ್ಯಗಳಿಗೆ

118. ಮರುಕಳಿಸಿದ ನೆನಪುಗಳು

ಇಮೇಜ್
ಅಜ್ಜಂಪುರದ ಮಿತ್ರ, ಸಹಪಾಠಿ ದತ್ತರಾಜ ರ ಪುತ್ರಿ ಸೌಜನ್ಯಾ ಫೇಸ್ ಬುಕ್ ನಲ್ಲಿ ಬರೆಯುತ್ತಿರುವ ಕವಯಿತ್ರಿ. ಇತ್ತೀಚೆಗೆ ಅಜ್ಜಂಪುರದಲ್ಲಿ ಅವರ ಚಿಕ್ಕಪ್ಪ ಮಂಜುನಾಥ ಅಜ್ಜಂಪುರ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದಾಗ, ಊರಿನ ನೆನಪುಗಳು ಒತ್ತರಿಸಿಕೊಂಡು ಬಂದುದಕ್ಕೆ ಅವರು ಬರೆದ ಈ ಟಿಪ್ಪಣಿ ಅನೇಕ ಸ್ವಾರಸ್ಯಕರ ಅಂಶಗಳನ್ನು ಒಳಗೊಂಡಿದೆ ಎಂಬ ಕಾರಣಕ್ಕೆ ಇಲ್ಲಿ ಪ್ರಕಟಿಸಲಾಗಿದೆ. - ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ - - - - - - - - - - - - - - - - - - - - - - - - - - - ನಿಮ್ಮೂರು ಯಾವುದು? ಅಂತ ಯಾರಾದರೂ ಪ್ರಶ್ನಿಸಿದರೆ ಅರೆಕ್ಷಣ ಗಲಿಬಿಲಿಗೊಳ್ಳುತ್ತೇನೆ ನಾನು. ತಕ್ಷಣವೇ ಮರು ಪ್ರಶ್ನಿಸುತ್ತೇನೆ. ನಿಮ್ಮೂರು ಯಾವುದು? ಅಲ್ಲಿಂದ ನಾನು ಅವರ ಊರಿನ ಹತ್ತಿರದ ನಾನು ಕಂಡ ಊರನ್ನು ನನ್ನದಾಗಿಸಿಕೊಳ್ಳುತ್ತೇನೆ. ಕಾರಣ ಇಷ್ಟೇ ನಾನು ಒಂದು ಊರಲ್ಲಿ ಬೆಳೆದವಳಲ್ಲ.  ಅಜ್ಜಂಪುರದ ಕಿರಾಳಮ್ಮನಿಗೆ ನನ್ನ ಹೆಸರಲ್ಲಿ ಎಷ್ಟು ಅರ್ಚನೆಗಳಾಗಿವೆಯೋ ಅದರಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಎನ್ನುವಷ್ಟು ತರೀಕೆರೆಯ ಸಾಲುಮರದಮ್ಮನಿಗೂ ಮತ್ತು ಬೀರೂರಿನ ಅಂತರಘಟ್ಟಮ್ಮನಿಗೂ ನನ್ನ ಹೆಸರಿನಲ್ಲಿ ಅರ್ಚನೆಗಳಾಗಿವೆ. ಶಿವಮೊಗ್ಗದ ದಿನಗಳ ನೆನಪೂ ನನ್ನೊಳಗೆ ಹಸಿರಾಗಿವೆ. ಚಿಕ್ಕಪ್ಪನೊಂದಿಗೆ ಹೇಳುವುದಿದೆ, ನಿಮ್ಮಷ್ಟು ಅಜ್ಜಂಪುರನ ಹಚ್ಕೊಂಡಿಲ್ಲ ನಾನು. ಅದು ನನಗೆ ನಮಪ್ಪನೂರು ಅಷ್ಟೇ ಅಂತ.  ನಾನು ಬಾಯಲ್ಲಿ