ಪೋಸ್ಟ್‌ಗಳು

2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

119. ಅಜ್ಜಂಪುರದ ದೇವರಮನೆಗಳು-2

ಇಮೇಜ್
ಆತ್ಮೀಯ ಓದುಗರೇ, ಈ ಸಂಚಿಕೆಯಲ್ಲಿ ಅಪೂರ್ವ ಅವರು ಅಜ್ಜಂಪುರದ ಮತ್ತೊಂದು ದೇವರಮನೆಯನ್ನು ಪರಿಚಯಿಸಿದ್ದಾರೆ. ಈ ಹಿಂದೆಯೂ ಎರಡು ಪ್ರಕಟವಾಗಿವೆ. ಇವು ಹಿಂದಿನಿಂದಲೂ ಅಜ್ಜಂಪುರದಲ್ಲಿ ಇವೆಯಾದರೂ, ಇವುಗಳ ಬಗ್ಗೆ ಜನರ ಗಮನ ಅಷ್ಚಾಗಿ ಹರಿದಂತಿಲ್ಲ. ಏಕೆಂದರೆ ಇವು ಹಿಂದೆ ಇದ್ದ ಸಾಧಾರಣ ಮಣ್ಣಿನ ಮನೆಗಳ ಜೊತೆಗೇ ಇರುತ್ತಿದ್ದುದರಿಂದ, ಇವುಗಳನ್ನು ವಿಶೇಷವೆಂದು ತಿಳಿದವರು ಕಡಿಮೆ.  ಈ ವಂಶಾವಳಿಯ ಕಾರಣದಿಂದ ಅಜ್ಜಂಪುರದ ಕೆರೆಗೆ ಪರ್ವತರಾಯನ ಕೆರೆ ಎಂದು ಹೆಸರು ಬಂದಿತೆಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ ಒಂದು ತರ್ಕದ ಪ್ರಕಾರ, ವಿಜಯನಗರದ ಅರಸರು ನಾಡಿನ ಹಲವಾರು ದೇವಾಲಯಗಳನ್ನು, ಕೆರೆಗಳನ್ನು ಅಭಿವೃದ್ಧಿಪಡಿಸಿದ  ಉದಾಹರಣೆಗಳಿವೆ. ಇದೇ ವಂಶಕ್ಕೆ ಸೇರಿರಬಹುದಾದ ಸಾಮಂತರೋ, ನಾಯಕರಲ್ಲಿ ಓರ್ವನಾಗಿರಬಹುದಾದ ಪರ್ವತರಾಯನಿಂದಲೂ ಇದು ಉಗಮವಾಗಿರಬಹುದು. ಏಕೆಂದರೆ, ಬುಕ್ಕಾಂಬುಧಿಯ ಕೆರೆಗೆ ವಿಜಯನಗರದ ಸಂಸರ್ಗವಿದೆ. ಅಜ್ಜಂಪುರದ ದೇವಾಲಯಗಳ ನವೀಕರಣದಲ್ಲಿ ವಿಜಯನಗರದ ಪಾತ್ರವಿದೆ. ಏನಿದ್ದರೂ, ಇತಿಹಾಸಜ್ಞರು ಸಂಶೋಧಿಸಬೇಕಾಗಿರುವ  ಅಂಶವಿದೆಂದು ತಿಳಿಯಬಹುದು.   ಆದರೆ ಸಾಂಸ್ಕೃತಿಕ ಮಹತ್ವವುಳ್ಳ ಈ ದೇವರಮನೆಗಳು, ಆಯಾ ಕುಟುಂಬಗಳ, ವರ್ಗಗಳ ಪದ್ಧತಿಯನ್ನು ಜೀವಂತವಾಗಿಟ್ಟಿವೆ. ಸುಧಾರಿಸಿದ ಆರ್ಥಿಕ ಪರಿಸ್ಥಿತಿಯಿಂದಾಗಿ, ಸಮುದಾಯದ ಜನರು ತಮ್ಮ ಕುಲದೈವವನ್ನು ಮರೆಯದೇ, ಅವುಗಳಿದ್ದ ಸ್ಥಳಗಳನ್ನು ನವೀಕರಿಸಿ, ಸಮಾಜದ ಕಾರ್ಯಗಳಿಗೆ

118. ಮರುಕಳಿಸಿದ ನೆನಪುಗಳು

ಇಮೇಜ್
ಅಜ್ಜಂಪುರದ ಮಿತ್ರ, ಸಹಪಾಠಿ ದತ್ತರಾಜ ರ ಪುತ್ರಿ ಸೌಜನ್ಯಾ ಫೇಸ್ ಬುಕ್ ನಲ್ಲಿ ಬರೆಯುತ್ತಿರುವ ಕವಯಿತ್ರಿ. ಇತ್ತೀಚೆಗೆ ಅಜ್ಜಂಪುರದಲ್ಲಿ ಅವರ ಚಿಕ್ಕಪ್ಪ ಮಂಜುನಾಥ ಅಜ್ಜಂಪುರ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದಾಗ, ಊರಿನ ನೆನಪುಗಳು ಒತ್ತರಿಸಿಕೊಂಡು ಬಂದುದಕ್ಕೆ ಅವರು ಬರೆದ ಈ ಟಿಪ್ಪಣಿ ಅನೇಕ ಸ್ವಾರಸ್ಯಕರ ಅಂಶಗಳನ್ನು ಒಳಗೊಂಡಿದೆ ಎಂಬ ಕಾರಣಕ್ಕೆ ಇಲ್ಲಿ ಪ್ರಕಟಿಸಲಾಗಿದೆ. - ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ - - - - - - - - - - - - - - - - - - - - - - - - - - - ನಿಮ್ಮೂರು ಯಾವುದು? ಅಂತ ಯಾರಾದರೂ ಪ್ರಶ್ನಿಸಿದರೆ ಅರೆಕ್ಷಣ ಗಲಿಬಿಲಿಗೊಳ್ಳುತ್ತೇನೆ ನಾನು. ತಕ್ಷಣವೇ ಮರು ಪ್ರಶ್ನಿಸುತ್ತೇನೆ. ನಿಮ್ಮೂರು ಯಾವುದು? ಅಲ್ಲಿಂದ ನಾನು ಅವರ ಊರಿನ ಹತ್ತಿರದ ನಾನು ಕಂಡ ಊರನ್ನು ನನ್ನದಾಗಿಸಿಕೊಳ್ಳುತ್ತೇನೆ. ಕಾರಣ ಇಷ್ಟೇ ನಾನು ಒಂದು ಊರಲ್ಲಿ ಬೆಳೆದವಳಲ್ಲ.  ಅಜ್ಜಂಪುರದ ಕಿರಾಳಮ್ಮನಿಗೆ ನನ್ನ ಹೆಸರಲ್ಲಿ ಎಷ್ಟು ಅರ್ಚನೆಗಳಾಗಿವೆಯೋ ಅದರಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಎನ್ನುವಷ್ಟು ತರೀಕೆರೆಯ ಸಾಲುಮರದಮ್ಮನಿಗೂ ಮತ್ತು ಬೀರೂರಿನ ಅಂತರಘಟ್ಟಮ್ಮನಿಗೂ ನನ್ನ ಹೆಸರಿನಲ್ಲಿ ಅರ್ಚನೆಗಳಾಗಿವೆ. ಶಿವಮೊಗ್ಗದ ದಿನಗಳ ನೆನಪೂ ನನ್ನೊಳಗೆ ಹಸಿರಾಗಿವೆ. ಚಿಕ್ಕಪ್ಪನೊಂದಿಗೆ ಹೇಳುವುದಿದೆ, ನಿಮ್ಮಷ್ಟು ಅಜ್ಜಂಪುರನ ಹಚ್ಕೊಂಡಿಲ್ಲ ನಾನು. ಅದು ನನಗೆ ನಮಪ್ಪನೂರು ಅಷ್ಟೇ ಅಂತ.  ನಾನು ಬಾಯಲ್ಲಿ

117. ತಾಮ್ರ ಕವಚದ ಪ್ರಾಚೀನ ಶಿವಲಿಂಗ

ಇಮೇಜ್
ಈ ವರ್ಷದ ನವೆಂಬರ್ ತಿಂಗಳಲ್ಲಿ ಅಜ್ಜಂಪುರಕ್ಕೆ ಭೇಟಿ ನೀಡಿದಾಗ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯದ ಅರ್ಚಕ ಅನೂಪ ಮಿತ್ರ ಒಂದು ಶಿವಲಿಂಗವನ್ನು ತೋರಿಸಿದರು. ತಾಮ್ರದ ಕವಚವುಳ್ಳ ಈ ಲಿಂಗವು ಅಜ್ಜಂಪುರದಲ್ಲೇ ಯಾರದೋ ಮನೆಯಲ್ಲಿ ಪೂಜಿಸಲ್ಪಡುತ್ತಿತ್ತು ಎಂದು ತೋರುವಂತಿದೆ. ಈ ಹಿಂದೆಯೂ ನಾನು ಈ ದೇಗುಲದಲ್ಲಿ ರುದ್ರಾಭಿಷೇಕ ಪೂಜೆಗಳಲ್ಲಿ  ತೊಡಗಿಕೊಂಡಿದ್ದುಂಟು. ಆಗ ಈ ವಿಗ್ರಹವನ್ನು ನೋಡಿದ್ದೆನಾದರೂ, ಅದರ ಮೇಲೆ ಕೊಳೆ ಸೇರಿಕೊಂಡು ಕಲ್ಲಿನದೆಂದು ತೋರುವಂತಿತ್ತು. ಈಗ  ಶುಚಿಗೊಳಿಸಿದ ನಂತರ ಅದರ ಮೂಲ ರೂಪ ಕಾಣುತ್ತಿದೆ. ಇದೊಂದು ಪ್ರಾಚೀನ ರಚನೆಯೆಂದು ಇಲ್ಲಿ ನಮೂದಿಸಲಾಗಿದೆ. - ಶಂಕರ ಅಜ್ಜಂಪುರ

116. ಅಜ್ಜಂಪುರದ ದೇವರಮನೆಗಳು:

ಇಮೇಜ್
ಆತ್ಮೀಯ ಓದುಗರೇ, ಅಂತರಜಾಲದಲ್ಲಿ ಅಜ್ಜಂಪುರ - ಈ ಬ್ಲಾಗ್ ನ ಮುಂದುವರಿಕೆಯು ಊರಿನ ಬಗ್ಗೆ ಅಭಿಮಾನವುಳ್ಳ ಲೇಖಕರನ್ನು ಅವಲಂಬಿಸಿದೆ. ಈಗ ಅಜ್ಜಂಪುರವು ತಾಲೂಕು ಆದ ನಂತರ ಪಟ್ಟಣದ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಗತಿ ಕಾಣುತ್ತಿದೆ. ಸ್ಥಳೀಯರು ಮನಸ್ಸು ಮಾಡಿ ಇಲ್ಲಿನ ಬೆಳವಣಿಗೆಗಳನ್ನು ದಾಖಲಿಸುವಂತಾದರೆ, ಇನ್ನಷ್ಟು ಮಾಹಿತಿಗಳು ಸೇರಿಕೊಳ್ಳುತ್ತವೆ. ಅಜ್ಜಂಪುರದಲ್ಲೇ ವಾಸವಾಗಿರುವ ಮಿತ್ರ ಅಪೂರ್ವ, ಊರಿನಲ್ಲಿ ಏನೇ ಹೊಸದು ಕಾಣಿಸಿದರೂ, ಅದನ್ನು ದಾಖಲಿಸುತ್ತ, ಈ ಬ್ಲಾಗ್ ನ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಸಂಚಿಕೆಯಲ್ಲಿ ಅವರು ಪ್ರಸ್ತಾಪಿಸಿರುವ ವಿಷಯವು ಊರಿನಲ್ಲೇ ಅನೇಕರಿಗೆ ತಿಳಿದಿರದಿದ್ದರೆ ಆಶ್ಚರ್ಯವಿಲ್ಲ. ಅದು ಊರೊಟ್ಟಿನ ವಿಷಯವೇ ಆಗಿದ್ದರೂ, ಸಮುದಾಯಗಳ ಜನರು ತಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡು, ತನ್ಮೂಲಕ  ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತಿರುವರು. ಅಂಥ ಸಂಗತಿಗಳು ಊರಿನ ಸಾಂಸ್ಕೃತಿಕ ಮಹತ್ವವನ್ನು ಬಿಂಬಿಸುತ್ತವೆ. ಅವುಗಳನ್ನು ಯಾರಾದರೂ ಗಮನಿಸಿ ತಿಳಿಸಿದಾಗಷ್ಟೇ ಇತರರಿಗೂ ತಿಳಿದೀತು. ಆಯಾ ಸಮುದಾಯದವರೇ ಆ ಬಗ್ಗೆ ಪ್ರಚುರ ಪಡಿಸಬಹುದು. ದೇವರಮನೆ ಎಂಬ ವ್ಯವಸ್ಥೆಯು ಸಾಮುದಾಯಿಕವಾಗಿದ್ದು, ಅದು ಎಲ್ಲ ಊರುಗಳಲ್ಲೂ ಇರಬಹುದು. ಕಾಲ ಕಾಲಕ್ಕೆ ಬಂದ ಬದಲಾವಣೆಗಳನ್ನು ಅಳವಡಿಸಿಕೊಂಡು, ಪದ್ಧತಿಯನ್ನು ಜೀವಂತವಾಗಿ ಇಟ್ಟಿರುವ ಸಮುದಾಯಗಳ ಧಾರ್ಮಿಕ ಪ್ರಜ್ಞೆ ಮೆಚ್ಚುವಂಥದು. ಅಜ್ಜಂಪುರದಲ್ಲಿರುವ ಇಂಥ ಎರಡು ದೇವರಮನೆಗಳ ಬ

115 ಅಜ್ಜಂಪುರಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ : ಮಂಜುನಾಥ ಅಜ್ಜಂಪುರ

ಇಮೇಜ್
ಆತ್ಮೀಯರೇ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ರೀ ಸುಬ್ರಹ್ಮಣ್ಯ ಶೆಟ್ಟರು 1968ರಲ್ಲಿ ಅಜ್ಜಂಪುರದಲ್ಲಿ  ಪ್ರಶಸ್ತಿ ಪುರಸ್ಕೃತರು. ಇದೀಗ 53 ವರ್ಷಗಳ ನಂತರ ಬಾಲ್ಯಮಿತ್ರ ಮಂಜುನಾಥ ಅಜ್ಜಂಪುರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಇದು ಅಜ್ಜಂಪುರದ ಹಿರಿಮೆಯನ್ನು ಹೆಚ್ಚಿಸಿದೆ. ಅವರಿಗೆ ಅಭಿನಂದನೆಗಳು. ರಾಷ್ಟ್ರೀಯ ಚಿಂತನೆಯೇ ಪ್ರಧಾನವಾಗಿ, ದೇಶದ ಐತಿಹಾಸಿಕತೆಯ ಮಹತ್ವವನ್ನು ಬಿಂಬಿಸುವ ಬರಹಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುದ್ರಣ ಮಾಧ್ಯಮವಲ್ಲದೆ, ವಿದ್ಯುನ್ಮಾನ ಮಾಧ್ಯಮದಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿರುವದರಿಂದ, ಅವರ ಓದುಗರ ವ್ಯಾಪ್ತಿ ವಿಸ್ತಾರವಾಗಿದೆ.  ಮಂಜುನಾಥರ ಬಗ್ಗೆ ನನ್ನ ಇನ್ನೋರ್ವ ಲೇಖಕ ಮಿತ್ರ ಅಪೂರ್ವ ಅವರು ಅಭಿನಂದಿಸಿ ಬರೆದಿರುವ ಲೇಖನ ನಿಮ್ಮ ಓದಿಗೆಂದು ಇಲ್ಲಿದೆ. ಇವರ ಗೌರವ ಸಂಪಾದಕತ್ವದಲ್ಲಿ ವಾಯ್ಸ್ ಆಫ್ ಇಂಡಿಯಾ ಮಾಲಿಕೆಯು ಸಾದರಪಡಿಸುತ್ತಿರುವ ಪುಸ್ತಕ ಸರಣಿಯಲ್ಲಿ ಶ್ರೀ ಸೀತಾರಾಮ ಗೋಯೆಲ್ ರ ''ಹಿಂದೂ ಧರ್ಮ ದಿಗ್ಬಂಧನದಲ್ಲಿ" ಎಂಬ ಇಂಗ್ಲಿಷ್ ಬರಹವನ್ನು ನಾನು ಅನುವಾದ ಮಾಡುವಂತಾದುದು ನನಗೆ ಸ್ಮರಣಾರ್ಹ ಸಂಗತಿ. -೦-೦-೦-೦-೦-೦- ಕರ್ನಾಟಕ ರಾಜ್ಯ ಸರ್ಕಾರವು ನೀಡುವ ಸಾಹಿತ್ಯ ಕ್ಷೇತ್ರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಈ ಬಾರಿ ಅಂಕಣ ಬರಹಗಾರರಾದ ಮಂಜುನಾಥ ಅಜ್ಜಂಪುರ ಅವರಿಗೆ ಬಂದಿರುವುದು ಅತ್ಯಂತ ಸಂತಸದ ಸುದ್ದಿ. ನಮ್ಮೆಲ್ಲರ ಪ್ರೀತಿಯ ಗೆಳೆಯರು ಎಂಬುದು ‌ಕ್ಲೀಷೆಯ ಮಾತಾದೀತು.  ವೈ

113. ಆಸಂದಿ ನಾಡು: ಸಂಸ್ಕೃತಿ, ಪರಂಪರೆ, ಇತಿಹಾಸದ ಬೀಡು!

ಇಮೇಜ್
ನಾನು  ಅಜ್ಜಂಪುರದಲ್ಲಿ ಬಾಲ್ಯವನ್ನು ಕಳೆದೆನಾದರೂ ಸುತ್ತಮುತ್ತಲಿನ ಗ್ರಾಮಗಳನ್ನು ನೋಡಿರಲಿಲ್ಲ. ಅದಕ್ಕೆ ಸಂದರ್ಭಗಳಿರಲಿಲ್ಲ ಎನ್ನುವುದೇ ಸರಿಯಾದೀತು.  ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲೇ ನಾಲ್ಕು ದಶಕಗಳನ್ನು ಕಳೆದುದಾಯಿತು. ಹಾಗೆಂದು ಊರಿನ ಸಂಪರ್ಕವೇನೂ ತಪ್ಪಿರಲಿಲ್ಲ.  ನಿವೃತ್ತಿಯ ನಂತರ ಹಣ್ಣೆ, ಸೊಲ್ಲಾಪುರ, ಗಡಿಹಳ್ಳಿ, ಅಮೃತಾಪುರ, ಬಗ್ಗವಳ್ಳಿ, ಹಿರೇನಲ್ಲೂರು ಮುಂತಾದ ಗ್ರಾಮಗಳನ್ನು ನೋಡಿದೆ. ಅದೂ ನಾನು ಸಂಪಾದಿಸುತ್ತಿರುವ "ಹೊಯ್ಸಳ ವಾಸ್ತುಶಿಲ್ಪ ಅವಲೋ ಕನ"ದ ಸಲುವಾಗಿ. ಈಗ ಅಜ್ಜಂಪುರ ತಾಲೂಕಾಗಿದೆ. ಅದರ ವ್ಯಾಪ್ತಿಯಲ್ಲಿನ ದೇಗುಲಗಳನ್ನು ನನ್ನ "ಅಂತರಜಾಲದಲ್ಲಿ ಅಜ್ಜಂಪುರ" ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವೆ. ಇದು ಅಜ್ಜಂಪುರ ತಾಲೂಕಿನಲ್ಲಿರುವ ಪುಟ್ಟ ಗ್ರಾಮ. ಇದರ ಇತಿಹಾಸದ ರೋಚಕತೆಯನ್ನು ಊಹಿಸಬೇಕೆಂದರೆ, ಇಲ್ಲಿರುವ ದೇವಾಲಯಗಳ ಸಂಖ್ಯೆಯನ್ನು ನೋಡಿದರೆ ತಿಳಿಯುತ್ತದೆ. ರಾಜಕೀಯವಾಗಿ ಹೊಯ್ಸಳರ ಕಾಲದಿಂದ ಪ್ರಸಿದ್ಧಿಯಲ್ಲಿದ್ದ ಈ ಊರಿನ ಮಹತ್ವ ಕುಂದಿರಬಹುದು. ಆದರೆ ಐತಿಹಾಸಿಕವಾಗಿ ಶ್ರೀಮಂತ ಊರು ಹೌದು. ನನ್ನ ಈ ಯತ್ನಕ್ಕೆ ಬೆಂಬಲವಾಗಿ ಸೋದರಿ ಶ್ರೀಮತಿ ಮಂಜುಳಾ ಹುಲ್ಲಹಳ್ಳಿಯವರು ತಮ್ಮ ಲೇಖನಗಳನ್ನು ನೀಡಿ ಸಹಕರಿಸಿರುವರು. ಅವರಿಗೆ ಕೃತಜ್ಞತೆಗಳು. ಇಲ್ಲಿ ಪ್ರಕಟಿಸಿರುವ ಎಲ್ಲ ಚಿತ್ರಗಳನ್ನು ಆಸಂದಿಯಲ್ಲಿ ನೆಲೆಸಿ ಕನ್ನಡದ ಕಾರ್ಯಕ್ರಮಗಳಿಗೆ ಒತ್ತಾಸೆಯಾಗಿ ನಿಂತು ದುಡಿಯುತ್ತಿರುವ ಶ್ರೀ ಹನುಮಂತಾಚಾರ

112. ಸೊಲ್ಲಾಪುರದ ಸಿದ್ದರಾಮೇಶ್ವರರು: ಬೇಡಿದಾಗ ಮಳೆಬೀಜ ತಂದು ಹರಸುವ ಮಹಾನುಭಾವರು!

ಇಮೇಜ್
 ಸೊಲ್ಲಾಪುರದ ಸಿದ್ದರಾಮೇಶ್ವರರು: ಬೇಡಿದಾಗ ಮಳೆಬೀಜ ತಂದು ಹರಸುವ ಮಹಾನುಭಾವರು!    'ಯೋಗಿಗಳ ಯೋಗಿ, ಶಿವಯೋಗಿ, ಸಿದ್ಧರಾಮನೊಬ್ಬನೆ ನಿಜಯೋಗಿ' ಎಂದು ಸಮಕಾಲೀನ ಶರಣರಾದ ಸೊಡ್ಡಳ  ಬಾಚಾರಸರಿಂದ ಹೊಗಳಿಸಿಕೊಂಡಿರುವ ಸಿದ್ದರಾಮೇಶ್ವರರು ಕುಗ್ರಾಮವಾಗಿದ್ದ ಸೊನ್ನಲಿಗೆಯನ್ನು ಸೊಲ್ಲಾಪುರವೆಂಬ ಅಭಿನವಕೈಲಾಸವಾಗಿ ಕಟ್ಟಿದವರು. ಮಹಾನ್ ಕನಸುಗಾರ ಶಿಲ್ಪಿ ಇವರು. ಕೇವಲ ಕನಸು ಕಾಣುವುದಷ್ಟೇ ಅಲ್ಲ, ಅದನ್ನು ತಕ್ಷಣವೇ ಕಾರ್ಯರೂಪಕ್ಕೆ ತಂದು ಆದರ್ಶಗಳಿಗೆ ವಾಸ್ತವತೆಯ ಸ್ಪರ್ಷ ನೀಡಿದವರು. 'ಶಿವಯೋಗಿಯ ಶರೀರಂ ವೃಥಾ ಸಮೆಯಲಾಗದು, ಅನುಗೊಂಬನಿತು ಕಾಯಕವನು ನಡೆಸುತಿರಬೇಕು' ಎಂಬುದು ಇವರ ಸಾಧನೆಯ ನಿತ್ಯಮಂತ್ರ. ಇಂಥ ಪವಿತ್ರ ಸಂಕಲ್ಪದಿಂದಲೇ ಸಿದ್ದರಾಮೇಶ್ವರರು ಪರಮತೆಯ ಔನ್ನತ್ಯವನ್ನು ಸಾಧಿಸಿದರು. ಹನಿಮೊಸರನ್ನು  ಮಲ್ಲಯ್ಯನಿಗೆ ಸಮರ್ಪಿಸಲಾಗದ ಏಕೈಕ ಕಾರಣದಿಂದ ಶ್ರೀಶೈಲಪರ್ವತದಲ್ಲಿ ಆತ್ಮಾಹುತಿಯನ್ನು ಮಾಡಿಕೊಳ್ಳಹೊರಟ ಬಾಲಕನನ್ನು  ಕಪಿಲಸಿದ್ಧಮಲ್ಲಿಕಾರ್ಜುನ ತನ್ನ ಮಡಿಲಿಗೆ ಆತುಕೊಂಡು ಸಂರಕ್ಷಿಸಿಕೊಂಡ  ಕಥೆಯ ಹಿಂದಿರುವುದೂ ಸಿದ್ದರಾಮರ ದೃಢಸಂಕಲ್ಪ ಮನೋಭಾವವೇ.       ಈ ಮನೋದೃಢತೆಯೇ ಬಡ ಒಕ್ಕಲಿಗರ ಮನೆಯ ಮಗನಾದ ಧೂಳಿಮಾಕಾಳನನ್ನು ಆದರ್ಶ ಶಿವಯೋಗಿಯಾಗಿ ಬೆಳೆಸಿತು. ಕೆರೆಗಳನ್ನು ಕಟ್ಟಿಸುವ, ದೇವಾಲಯಗಳನ್ನು ನಿರ್ಮಿಸುವ, ಅಗ್ರಹಾರಗಳನ್ನು ರೂಪಿಸುವ ಸಮಾಜಮುಖಿ ಚಟುವಟಿಕೆಗಳು ಅವರ ಉಸಿರಾದವು. ಸೊನ್ನಲಿಗೆಯಲ್ಲಿ ಕಪಿಲಸಿದ್ಧ ಮಲ್ಲಿ

111. ಗೊ.ರು.ಚ ಕಾವ್ಯನಾಮದ ಶರಣತೇಜಸ್ವಿ: ನಮ್ಮ ಗೊಂಡೇದಹಳ್ಳಿಯ ಗೌರವ ತಪಸ್ವಿ!

ಇಮೇಜ್
ಆತ್ಮೀಯ ಓದುಗರೇ, 111ನೆಯ ಈ ಸಂಚಿಕೆಯಲ್ಲಿ ಹಿರಿಯರೂ, ವಿದ್ವಾಂಸರು, ಜಾನಪದ ತಜ್ಞರೂ ಆದ ಡಾ. ಗೊ.ರು. ಚನ್ನಬಸಪ್ಪನವರ ಬಗ್ಗೆ ವಿಸ್ತೃತ ಬರಹವನ್ನು ಪ್ರಕಟಿಸಲು ತುಂಬ ಸಂತೋಷವೆನಿಸುತ್ತದೆ. ಶತಾಯುಷದ ಸಮೀಪದಲ್ಲಿರುವ ಈ ಹಿರಿಯರು ತಮ್ಮ ಊರಿನ ಬಗ್ಗೆ, ಜನರು, ಸಂಸ್ಕೃತಿ, ಕಲೆಗಳ ಬಗ್ಗೆ ತಳೆದಿರುವ ಅಭಿಮಾನಗಳು ಅನ್ಯಾದೃಶವಾದುದು.  ಡಾ. ಮಂಜುಳಾ ಹುಲ್ಲಹಳ್ಳಿಯವರು ಶ್ರಮವಹಿಸಿ ಅನೇಕ ಮಾಹಿತಿಗಳನ್ನು ಸಂಗ್ರಹಿಸುರುವುದರಿಂದ ಗೊ.ರು.ಚ. ರ ಬಗ್ಗೆ ಆಕರ ಲೇಖನವಾಗುವಂತಿದೆ.  ಅಜ್ಜಂಪುರ ತಾಲೂಕಿಗೆ ಸೇರಿದ "ಗೊಂಡೇದಹಳ್ಳಿಯ ಗೌರವ ತಪಸ್ವಿ"ಯ ವಿವರಗಳನ್ನು ಓದಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಇದನ್ನು ಸಾಧ್ಯವಾಗಿಸಿದ ಡಾ. ಮಂಜುಳಾ ಅವರಿಗೆ ಕೃತಜ್ಞತೆಗಳು. ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ. ------------------------------------------------------------------------------------------------------ ಗೊ.ರು.ಚ ಕಾವ್ಯನಾಮದ ಶರಣತೇಜಸ್ವಿ: ನಮ್ಮ ಗೊಂಡೇದಹಳ್ಳಿಯ ಗೌರವ ತಪಸ್ವಿ!        ಗೊಂಡೇದಹಳ್ಳಿಯ ರುದ್ರಪ್ಪ ಚನ್ನಬಸಪ್ಪ ಅವರು ನಿಮಗೆ ಗೊತ್ತೇ? ಎಂದು ಚಿಕ್ಕಮಗಳೂರಿನವರನ್ನು ಕೇಳಿ ನೋಡಿ ಊಹೂ, ಯಾರಿಗೂ ಗೊತ್ತಿಲ್ಲ. ಗೊರುಚ ಎನ್ನಿ ಸಾಕು "ಓಹ್, ನಮ್ಮ ಗೊರುಚ" ಎಂದು ಕೇಳಿದವರೆಲ್ಲ ತಲೆಯಾಡಿಸುತ್ತಾರೆ!  ಅಜ್ಜಂಪುರ ತಾಲೂಕಿನ ಪುಟ್ಟಗ್ರಾಮ ಗೊಂಡೇದಹಳ್ಳಿಯ ಗಿರಿಗೌಡ ಸ್ವಾಭಿಮಾನಕ್ಕೇ

110. ವಿಶ್ವ ರಂಗಭೂಮಿ ದಿನಾಚರಣೆ : ಅಜ್ಜಂಪುರದ ಒಂದು ನೆನಪು

ಇಮೇಜ್
  ಆತ್ಮೀಯ ಓದುಗರೇ, ಇಲ್ಲಿ ಅಜ್ಜಂಪುರದ ಹಳೆಯ ನೆನಪೊಂದನ್ನು ಮಿತ್ರ ಅಪ್ಪಾಜಿ ಜಿ.ಬಿ. ಇವರು ಸುಂದರವಾಗಿ ದಾಖಲಿಸಿದ್ದಾರೆ. ಸೂಕ್ಷ್ಮಗ್ರಾಹಿಗಳಿಗೆ ಮಾತ್ರ ಸಾಧ್ಯವಾಗುವ ಇಂಥ ಅನೇಕ ಸ್ಮರಣೆಗಳನ್ನು ಅಪ್ಪಾಜಿ ಈ ಹಿಂದೆಯೂ ನೀಡಿರುವುದುಂಟು. ಡಾ. ಶಿವರಾಮ ಕಾರಂತರು ಅಜ್ಜಂಪುರಕ್ಕೆ ಬಂದಾಗ ಅವರು ಊರಿನ ಕಲಾ ಸೇವಾ ಸಂಘದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಯಥಾರ್ಥವಾಗಿ ನೀಡಲಾಗಿದೆ. ಅಜ್ಜಂಪುರದ ಕಲಾವಿದ ಶ್ರೀ ಸಿದ್ದಪ್ಪನವರ ಬಗ್ಗೆಯೂ ನೆನಪುಗಳಿವೆ. ಅವು ಹಾಗೇ ಹಾರಿಹೋಗದಿರಲೆಂದು ಇಲ್ಲಿ ದಾಖಲಿಸಿರುವೆ.  ಡಾ. ಶಿವರಾಮ ಕಾರಂತರು, ಕಲಾವಿದ ಜಿ.ಸಿ. ಸಿದ್ದಪ್ಪನವರು. ಇಂದು ವಿಶ್ವ ರಂಗಭೂಮಿ ದಿನಾಚರಣೆ : ಅಜ್ಜಂಪುರದ ಒಂದು ನೆನಪು ಪ್ರಖ್ಯಾತ ಕಾದಂಬರಿಕಾರ, ಪ್ರಖರ ಚಿಂತಕ ಕೋಟ ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ‌ ಬಂದ ಹೊಸತರಲ್ಲಿ ನಾಡಿನಾದ್ಯಂತ ಬಿದರೆಯಿಂದ ಕೊಡಗಿನ ತನಕ ಜನರು ಸನ್ಮಾನ ಸಮಾರಂಭ ಏರ್ಪಡಿಸಿ, ಸಂಭ್ರಮಿಸಿದರು. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ನಮ್ಮೂರು ಅಜ್ಜಂಪುರದಲ್ಲಿ ಕೂಡ ಆಗ ಕಾರಂತರಿಗೆ ಸನ್ಮಾನ ನಡೆಯಿತು. ಅಜ್ಜಂಪುರದ ಹವ್ಯಾಸಿ ರಂಗ ಸಂಸ್ಥೆ ಕಲಾ ಸೇವಾ ಸಂಘದ ರಂಗಮಂದಿರದಲ್ಲಿ ಸನ್ಮಾನ. ನಮ್ಮೂರಿನ ಸಂಘಟಕರು ಪ್ರಾಸ್ತಾವಿಕ ಭಾಷಣದಲ್ಲಿ ನಮ್ಮ ಸಂಸ್ಥೆಯ ಜಗಜ್ಯೋತಿ ಬಸವೇಶ್ವರ ನಾಟಕದ ನೂರು ಪ್ರದರ್ಶನಗಳು ನಡೆದಿವೆ ಇತ್ಯಾದಿ ಅಭಿಮಾನದ ಮಾತುಗಳನ್ನು ಹೇಳಿಕೊಂಡರು. ಮೊದಲಿಗೆ ಕಲಾ ಸೇವಾ ಸಂಘದ ಹೆಸರಿನ ಜಾಡನ್ನೇ ಹಿಡಿ