ಪೋಸ್ಟ್‌ಗಳು

ಅಕ್ಟೋಬರ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

19. ಕಲಾ ಸೇವಾ ಸಂಘ, ಅಜ್ಜಂಪುರ

ಇಮೇಜ್
ಕಲಾಮಾತೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತಾಳೆ. ಆದರೆ ಕೆಲವರನ್ನು ಮಾತ್ರ ಎತ್ತಿಕೊಳ್ಳುತ್ತಾಳೆ.   - ಅ.ನ.ಕೃ. ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಅಂದು ಅನಕೃ ಹೇಳಿದ್ದ ಈ ಮಾತು ಒಂದು ಊರಿನ ಮಟ್ಟಿಗೆ ನಿಜವಾಗಿದ್ದರ ಉದಾಹರಣೆಯು ಅಜ್ಜಂಪುರಕ್ಕೆ ಸರಿಯಾಗಿ ಹೊಂದಿ ಕೊಳ್ಳುತ್ತದೆ. ಏಕೆಂದರೆ ೧೯೩೫ರ ಹಿಂದಕ್ಕೆ ನಮ್ಮೂರಿನಲ್ಲಿ ರಂಗಚಟುವಟಿಕೆಗಳು ನಡೆದ ದಾಖಲೆಗಳಿಲ್ಲ. ಹೇಳಿಕೊಳ್ಳುವಂತಹ ಕಲಾಭಿರುಚಿಯ ವಾತಾವರಣ ವಾಗಲೀ, ಅದಕ್ಕೆ ಪೂರಕವಾದ ಅವಕಾಶಗಳಾಗಲೀ ಇಲ್ಲದಿದ್ದ ಕಾಲವದು. ಆಗ ಊರು ಈಗಿರುವುದಕ್ಕಿಂತ ಚಿಕ್ಕದಾಗಿದ್ದುದೂ ಸ್ವಾಭಾವಿಕ. ಇಂಥ ಹಿನ್ನೆಲೆಯಲ್ಲಿ ಅಜ್ಜಂಪುರದ ಕಲಾ ಸೇವಾ ಸಂಘದ ಆರಂಭದ ದಿನಗಳಿಂದ ಹಿಡಿದು ಇಂದಿನವರೆಗೆ ಪ್ರತ್ಯಕ್ಷಸಾಕ್ಷಿಯಾಗಿದ್ದು, ಅದರ ಉನ್ನತಿಗೆ ದುಡಿದ ಅಜ್ಜಂಪುರದ ಹಿರಿಯ ವರ್ತಕ, ಕಲಾಭಿಮಾನಿ ಶ್ರೀ ಸತ್ಯನಾರಾಯಣ ಶೆಟ್ಟರ ನಿರೂಪಣೆ ಇಲ್ಲಿದೆ. ೯೧ ವರ್ಷಗಳ ಹಿರಿಯರಾದ ಅವರ ನೆನಪಿನ ಬುತ್ತಿಯಲ್ಲಿ ಊರಿಗೆ ಸಂಬಂಧಿಸಿದ ಹಲವಾರು ಸಂಗತಿಗಳಿವೆ. ತಾವು ಕಂಡ ಜನರು, ಭಾಗವಹಿಸಿದ ಕಾರ್ಯಕ್ರಮಗಳು, ಅವರ ನೆನಪಿನಲ್ಲಿ ಸಂಗ್ರಹಿತವಾಗಿವೆ. ಉತ್ತಮ ನಿರೂಪಕರಾಗಿರುವ ಅವರ ಸಂದರ್ಶನದ ಭಾಗವನ್ನು ಅವರದೇ ನುಡಿಯಲ್ಲಿ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಅವರ ಧ್ವನಿಯನ್ನು ಮುದ್ರಣಮಾಡಿ ಒದಗಿಸಿದ ಗೆಳೆಯ ರಮಾನಂದರಿಗೆ  ಕೃತಜ್ಞತೆಗಳು.    ಚಿತ್ರ-ಲೇಖನ :   ಶಂಕರ ಅಜ್ಜಂಪುರ  ಹೀಗೊಂದು ಸವಾಲು ೧೯೩೫ರ ಸುಮ