ಪೋಸ್ಟ್‌ಗಳು

ಮೇ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

113. ಆಸಂದಿ ನಾಡು: ಸಂಸ್ಕೃತಿ, ಪರಂಪರೆ, ಇತಿಹಾಸದ ಬೀಡು!

ಇಮೇಜ್
ನಾನು  ಅಜ್ಜಂಪುರದಲ್ಲಿ ಬಾಲ್ಯವನ್ನು ಕಳೆದೆನಾದರೂ ಸುತ್ತಮುತ್ತಲಿನ ಗ್ರಾಮಗಳನ್ನು ನೋಡಿರಲಿಲ್ಲ. ಅದಕ್ಕೆ ಸಂದರ್ಭಗಳಿರಲಿಲ್ಲ ಎನ್ನುವುದೇ ಸರಿಯಾದೀತು.  ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲೇ ನಾಲ್ಕು ದಶಕಗಳನ್ನು ಕಳೆದುದಾಯಿತು. ಹಾಗೆಂದು ಊರಿನ ಸಂಪರ್ಕವೇನೂ ತಪ್ಪಿರಲಿಲ್ಲ.  ನಿವೃತ್ತಿಯ ನಂತರ ಹಣ್ಣೆ, ಸೊಲ್ಲಾಪುರ, ಗಡಿಹಳ್ಳಿ, ಅಮೃತಾಪುರ, ಬಗ್ಗವಳ್ಳಿ, ಹಿರೇನಲ್ಲೂರು ಮುಂತಾದ ಗ್ರಾಮಗಳನ್ನು ನೋಡಿದೆ. ಅದೂ ನಾನು ಸಂಪಾದಿಸುತ್ತಿರುವ "ಹೊಯ್ಸಳ ವಾಸ್ತುಶಿಲ್ಪ ಅವಲೋ ಕನ"ದ ಸಲುವಾಗಿ. ಈಗ ಅಜ್ಜಂಪುರ ತಾಲೂಕಾಗಿದೆ. ಅದರ ವ್ಯಾಪ್ತಿಯಲ್ಲಿನ ದೇಗುಲಗಳನ್ನು ನನ್ನ "ಅಂತರಜಾಲದಲ್ಲಿ ಅಜ್ಜಂಪುರ" ಬ್ಲಾಗ್ ನಲ್ಲಿ ಪ್ರಕಟಿಸುತ್ತಿರುವೆ. ಇದು ಅಜ್ಜಂಪುರ ತಾಲೂಕಿನಲ್ಲಿರುವ ಪುಟ್ಟ ಗ್ರಾಮ. ಇದರ ಇತಿಹಾಸದ ರೋಚಕತೆಯನ್ನು ಊಹಿಸಬೇಕೆಂದರೆ, ಇಲ್ಲಿರುವ ದೇವಾಲಯಗಳ ಸಂಖ್ಯೆಯನ್ನು ನೋಡಿದರೆ ತಿಳಿಯುತ್ತದೆ. ರಾಜಕೀಯವಾಗಿ ಹೊಯ್ಸಳರ ಕಾಲದಿಂದ ಪ್ರಸಿದ್ಧಿಯಲ್ಲಿದ್ದ ಈ ಊರಿನ ಮಹತ್ವ ಕುಂದಿರಬಹುದು. ಆದರೆ ಐತಿಹಾಸಿಕವಾಗಿ ಶ್ರೀಮಂತ ಊರು ಹೌದು. ನನ್ನ ಈ ಯತ್ನಕ್ಕೆ ಬೆಂಬಲವಾಗಿ ಸೋದರಿ ಶ್ರೀಮತಿ ಮಂಜುಳಾ ಹುಲ್ಲಹಳ್ಳಿಯವರು ತಮ್ಮ ಲೇಖನಗಳನ್ನು ನೀಡಿ ಸಹಕರಿಸಿರುವರು. ಅವರಿಗೆ ಕೃತಜ್ಞತೆಗಳು. ಇಲ್ಲಿ ಪ್ರಕಟಿಸಿರುವ ಎಲ್ಲ ಚಿತ್ರಗಳನ್ನು ಆಸಂದಿಯಲ್ಲಿ ನೆಲೆಸಿ ಕನ್ನಡದ ಕಾರ್ಯಕ್ರಮಗಳಿಗೆ ಒತ್ತಾಸೆಯಾಗಿ ನಿಂತು ದುಡಿಯುತ್ತಿರುವ ಶ್ರೀ ಹನುಮಂತಾಚಾರ