ಪೋಸ್ಟ್‌ಗಳು

ಆಗಸ್ಟ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

77. ಕ್ವಿಟ್ ಇಂಡಿಯಾ ಚಳವಳಿ - ಕಮ್ಮತಿಗೆ ಚನ್ನಬಸಪ್ಪನವರ ನೆನಪುಗಳು

ಇಮೇಜ್
ಇವರು ನಮ್ಮ ಊರಿನ ಹಿರಿಯರು. ಕಮ್ಮತಿಗೆ ಚನ್ನಬಸಪ್ಪ. ವೃತ್ತಿಯಿಂದ ಕಿರಾಣಿ ವ್ಯಾಪಾರದಾರರಾಗಿದ್ದರೂ, ಸಾಹಿತ್ಯ, ವಿಚಾರವಾದ, ಧಾರ್ಮಿಕ ನಿಷ್ಠೆ, ವೈಜ್ಞಾನಿಕ ವಿಚಾರಧಾರೆ ಮುಂತಾಗಿ ಅವರ ಆಸಕ್ತಿಗಳು ಹಲವು ಕಡೆ ಹಂಚಿಹೋಗಿದ್ದವು. ಹೆಚ್ಚಿನ ವಿದ್ಯಾಭ್ಯಾಸವಿಲ್ಲದಿದ್ದರೂ, ವೈಚಾರಿಕವಾಗಿ ಚಿಂತಿಸಿ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ನಮೂದಿಸುತ್ತಿದ್ದ ಚನ್ನಬಸಪ್ಪ ಕೇವಲ ತಮ್ಮ ಸಮುದಾಯದಲ್ಲಿ ಮಾತ್ರ ಪ್ರಸಿದ್ಧರಾಗಿರದೇ, ಇಡೀ ಊರಿನ ಗಮನ ಸೆಳೆದವರು. ಈ ಹಿಂದೆ ಪ್ರಕಟಿಸಿರುವ ಗೌ.ರು. ಓಂಕಾರಯ್ಯನವರ ನೆನಪುಗಳಂತೆಯೇ, ಅಜ್ಜಂಪುರದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಅಜ್ಜಂಪುರದಲ್ಲಿ ನಡೆದ ಚಟುವಟಿಕೆಗಳ ಸಂಗ್ರಹಯೋಗ್ಯ   ಲೇಖನದ ಮುದ್ರಿತ ಅವತರಣಿಕೆಯನ್ನು ಮಿತ್ರ ಅಪೂರ್ವ ಬಸು ಹುಡುಕಿ ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳು.  ಶಂಕರ ಅಜ್ಜಂಪುರ ಸಂಪಾದಕ ದೂರವಾಣಿ - 99866 72483 ಇ-ಮೇಲ್ - shankarajp@gmail.com ---------------------------------------------------------------------------------------------------------------------------------------- --------------------------- ಕಮ್ಮತಿಗೆ ಚನ್ನಬಸಪ್ಪ ಅಜ್ಜಂಪುರದಲ್ಲಿ ವರ್ತಕರಾಗಿದ್ದವರು. ಅವರು ಜನಿಸಿದ್ದು 12-01-1917ರಲ್ಲಿ.  ಈ ವರ್ಷದವರೆಗೆ ಬದುಕಿದ್ದಿದ್ದರೆ ನೂರು ತುಂಬುತ್ತಿತ್ತ

76. ಭಾರತ ಬಿಟ್ಟು ತೊಲಗಿ - ಗೌ.ರು. ಓಂಕಾರಯ್ಯನವರ ನೆನಪುಗಳು

ಇಮೇಜ್
ಆತ್ಮೀಯ ಓದುಗರೇ, ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಕಳೆದ ಆರು ವರ್ಷಗಳ ಈ ಬ್ಲಾಗಿನ ಸಂಚಿಕೆಗಳಲ್ಲಿ ಮಧ್ಯಂತರ ಲೇಖನವನ್ನು ಪ್ರಕಟಿಸಿಲ್ಲ ಎನ್ನಬಹುದು. ಆದರೆ ಈ ವರ್ಷ, ಹಿರಿಯರೂ, ವಿದ್ಯಾಭಿಮಾನಿ ಶಿಕ್ಷಕರು, ಲೇಖಕರು, ಪುಸ್ತಕಗಳ ಪ್ರಕಾಶಕರು ಮುಂತಾಗಿ ಹಲವು ವಿಶೇಷಣಗಳಿಗೆ ನಿಜವಾಗಿ ಅರ್ಹರಾಗಿರುವ ನಮ್ಮ ತಲೆಮಾರಿನ ಗುರುಗಳಾದ ಶ್ರೀ ಗೌ.ರು. ಓಂಕಾರಯ್ಯ ನವರ ಲೇಖನ ನಿಮಗಾಗಿ ಇಲ್ಲಿದೆ. ಅವರು ಪ್ರಕಟಿಸಿರುವ ಎರಡು ಪುಸ್ತಕಗಳ ಚಿತ್ರಗಳಿವೆ. ವಿಶೇಷವೆಂದರೆ ಇವುಗಳಲ್ಲಿ ಒಂದಕ್ಕೆ ಅಜ್ಜಂಪುರದಲ್ಲಿದ್ದ ಗೀತಾ ಪ್ರಿಂಟರ್ಸ್ ಮಾಲೀಕರು ಹಾಗೂ ಸಾಹಿತ್ಯಾಭಿಮಾನಿ ಶ್ರೀ ಎ.ಪಿ. ನಾಗರಾಜಶೆಟ್ಟರು ಬರೆದಿರುವ ಹಿನ್ನುಡಿಯೂ ಇದೆ. ಹಾಗಾಗಿ ಇದು ಸ್ವಾತಂತ್ರ್ಯೋತ್ಸವದ ವಿಶೇಷ ಸಂಚಿಕೆ. ಸದಾ ಹಸನ್ಮುಖ, ವಿದ್ಯಾರ್ಥಿಗಳನ್ನು ಕಂಡರೆ ಅಪರಿಮಿತ ಪ್ರೀತಿ, ದಯಾಗುಣಗಳ ಸಾಕಾರವಾಗಿರುವ ಈ ಗುರುಗಳು ಇಂದಿಗೂ ಬದಲಾಗದೇ ಹಾಗೆಯೇ ಇದ್ದಾರೆ. ಅರ್ಧ ಶತಮಾನಗಳ ನಂತರ ಮಿತ್ರ ಅಪೂರ್ವ ಬಸು ಅವರ ಮೂಲಕ ಫೋನ್ ನಲ್ಲಿ ಅವರ ಸಂಪರ್ಕ ಸಾಧ್ಯವಾದುದಕ್ಕೆ, ನನಗೆ ಅತೀವ ಸಂತೋಷವಿದೆ.  ಇತ್ತೀಚೆಗೆ ಪ್ರಧಾನಿ ಮೋದಿ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ತಮ್ಮ ನೆನಪುಗಳನ್ನು ದಾಖಲಿಸಲು ನೀಡಿದ ಕರೆಗೆ ಸಕ್ರಿಯರಾಗಿ ಸ್ಪಂದಿಸಿರುವ ಗೌ.ರು. ಓಂಕಾರಯ್ಯನವರ ಅಮಿತ ಉತ್ಸಾಹವನ್ನು ಎಲ್ಲರೂ ಮೆಚ್ಚುತ್ತಾರೆ. ಅವರು ಈ ಸಂದರ್ಭಕ್ಕೆಂದು ಬರೆದ ಲೇಖನವನ್ನು ಅವರ

75. ಸ್ವಾತಂತ್ರ್ಯ ಹೋರಾಟದಲ್ಲಿ ಅಜ್ಜಂಪುರದ ಪಾತ್ರ

ಇಮೇಜ್
ಆತ್ಮೀಯರೇ, ಎಲ್ಲರಿಗೂ 69ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ದೇಶದ ಎಲ್ಲ ಊರುಗಳಂತೆಯೇ ನಮ್ಮೂರು ಅಜ್ಜಂಪುರದಲ್ಲೂ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಹಲವಾರು ಚಟುವಟಿಕೆಗಳು ನಡೆದವು. ಅಜ್ಜಂಪುರದಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದಿತ್ತು ಎನ್ನುವುದು ಎಷ್ಟು ಜನರಿಗೆ ತಿಳಿದಿದೆ. ಈ ಸಂದರ್ಭದಲ್ಲಿ ಅದರಲ್ಲಿ ಭಾಗವಹಿಸಿ, ನಡೆದ ಘಟನೆಗಳನ್ನು ಈ ಸಂಚಿಕೆಯಲ್ಲಿ ದಾಖಲಿಸಲಾಗಿದೆ.   ಊರು ಈಗಿನಷ್ಟೂ ಇರದ ಆ ದಿನಗಳಲ್ಲಿ, ಇದ್ದಷ್ಟು ಕೆಲವೇ ಜನರು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಮ್ಮಿಂದಾದ ಕಾರ್ಯಗಳನ್ನು ನಿರ್ವಹಿಸಿದರು. ಅಂಥ ಹಿರಿಯರಲ್ಲಿ ಕೆಲವರು ಇಂದಿಗೂ ನಮ್ಮ ನಡುವೆ ಇದ್ದಾರೆನ್ನುವುದೇ ಸಂತಸದ ಸಂಗತಿ.  ಆ ದಿನಗಳ ನೆನಪನ್ನು ಲೇಖನದ ರೂಪದಲ್ಲಿ ದಾಖಲಿಸಿದವರು ಅಜ್ಜಂಪುರದ ಪುರಸಭಾಧ್ಯಕ್ಷರೂ, ಚಲನಚಿತ್ರಮಂದಿರದ ಮಾಲಕರಾಗಿದ್ದ ಉದ್ಯಮಿ ಶ್ರೀ ಟಿ. ಕೃಷ್ಣೋಜಿ ರಾವ್ ಚವ್ಹಾಣ್. ಅವರು ತರೀಕೆರೆಯ ಜನಪ್ರಿಯ ದೈನಿಕ ಅಂಚೆವಾರ್ತೆಗೆ ಬರೆದ ಲೇಖನವು ಮೂರು ದಶಕಗಳ   ನಂತರ ನಮ್ಮ-ನಿಮ್ಮ ಕೈಸೇರಲು ಕಾರಣರಾದವರು ಶ್ರೀಮತಿ ರೋಹಿಣಿ ಶರ್ಮಾ. ಆಗ ಬರೆದ ಲೇಖನವನ್ನೇ ಈಗ ಇತಿಹಾಸವೆನ್ನುತ್ತೇವೆ. ಸ್ವಾತಂತ್ರ್ಯಕ್ಕಾಗಿ ಇವರೊಡನೆ ಇದ್ದು ಭಾಗವಹಿಸಿದ, ಸುಬ್ರಹ್ಮಣ್ಯ ಶೆಟ್ಟರ ಬೆಂಬಲಕ್ಕೆ ಸದಾ ಕಾಲವೂ ಇರುತ್ತಿದ್ದ ಸೀತಾರಾಮಭಟ್ಟರನ್ನು ಕೃಷ್ಣೋಜಿರಾಯರು  ಅದು ಯಾವ ಕಾರಣಕ್ಕಾ