ಪೋಸ್ಟ್‌ಗಳು

ನವೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

117. ತಾಮ್ರ ಕವಚದ ಪ್ರಾಚೀನ ಶಿವಲಿಂಗ

ಇಮೇಜ್
ಈ ವರ್ಷದ ನವೆಂಬರ್ ತಿಂಗಳಲ್ಲಿ ಅಜ್ಜಂಪುರಕ್ಕೆ ಭೇಟಿ ನೀಡಿದಾಗ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯದ ಅರ್ಚಕ ಅನೂಪ ಮಿತ್ರ ಒಂದು ಶಿವಲಿಂಗವನ್ನು ತೋರಿಸಿದರು. ತಾಮ್ರದ ಕವಚವುಳ್ಳ ಈ ಲಿಂಗವು ಅಜ್ಜಂಪುರದಲ್ಲೇ ಯಾರದೋ ಮನೆಯಲ್ಲಿ ಪೂಜಿಸಲ್ಪಡುತ್ತಿತ್ತು ಎಂದು ತೋರುವಂತಿದೆ. ಈ ಹಿಂದೆಯೂ ನಾನು ಈ ದೇಗುಲದಲ್ಲಿ ರುದ್ರಾಭಿಷೇಕ ಪೂಜೆಗಳಲ್ಲಿ  ತೊಡಗಿಕೊಂಡಿದ್ದುಂಟು. ಆಗ ಈ ವಿಗ್ರಹವನ್ನು ನೋಡಿದ್ದೆನಾದರೂ, ಅದರ ಮೇಲೆ ಕೊಳೆ ಸೇರಿಕೊಂಡು ಕಲ್ಲಿನದೆಂದು ತೋರುವಂತಿತ್ತು. ಈಗ  ಶುಚಿಗೊಳಿಸಿದ ನಂತರ ಅದರ ಮೂಲ ರೂಪ ಕಾಣುತ್ತಿದೆ. ಇದೊಂದು ಪ್ರಾಚೀನ ರಚನೆಯೆಂದು ಇಲ್ಲಿ ನಮೂದಿಸಲಾಗಿದೆ. - ಶಂಕರ ಅಜ್ಜಂಪುರ

116. ಅಜ್ಜಂಪುರದ ದೇವರಮನೆಗಳು:

ಇಮೇಜ್
ಆತ್ಮೀಯ ಓದುಗರೇ, ಅಂತರಜಾಲದಲ್ಲಿ ಅಜ್ಜಂಪುರ - ಈ ಬ್ಲಾಗ್ ನ ಮುಂದುವರಿಕೆಯು ಊರಿನ ಬಗ್ಗೆ ಅಭಿಮಾನವುಳ್ಳ ಲೇಖಕರನ್ನು ಅವಲಂಬಿಸಿದೆ. ಈಗ ಅಜ್ಜಂಪುರವು ತಾಲೂಕು ಆದ ನಂತರ ಪಟ್ಟಣದ ಬೆಳವಣಿಗೆಯಲ್ಲಿ ಸಾಕಷ್ಟು ಪ್ರಗತಿ ಕಾಣುತ್ತಿದೆ. ಸ್ಥಳೀಯರು ಮನಸ್ಸು ಮಾಡಿ ಇಲ್ಲಿನ ಬೆಳವಣಿಗೆಗಳನ್ನು ದಾಖಲಿಸುವಂತಾದರೆ, ಇನ್ನಷ್ಟು ಮಾಹಿತಿಗಳು ಸೇರಿಕೊಳ್ಳುತ್ತವೆ. ಅಜ್ಜಂಪುರದಲ್ಲೇ ವಾಸವಾಗಿರುವ ಮಿತ್ರ ಅಪೂರ್ವ, ಊರಿನಲ್ಲಿ ಏನೇ ಹೊಸದು ಕಾಣಿಸಿದರೂ, ಅದನ್ನು ದಾಖಲಿಸುತ್ತ, ಈ ಬ್ಲಾಗ್ ನ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಸಂಚಿಕೆಯಲ್ಲಿ ಅವರು ಪ್ರಸ್ತಾಪಿಸಿರುವ ವಿಷಯವು ಊರಿನಲ್ಲೇ ಅನೇಕರಿಗೆ ತಿಳಿದಿರದಿದ್ದರೆ ಆಶ್ಚರ್ಯವಿಲ್ಲ. ಅದು ಊರೊಟ್ಟಿನ ವಿಷಯವೇ ಆಗಿದ್ದರೂ, ಸಮುದಾಯಗಳ ಜನರು ತಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡು, ತನ್ಮೂಲಕ  ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತಿರುವರು. ಅಂಥ ಸಂಗತಿಗಳು ಊರಿನ ಸಾಂಸ್ಕೃತಿಕ ಮಹತ್ವವನ್ನು ಬಿಂಬಿಸುತ್ತವೆ. ಅವುಗಳನ್ನು ಯಾರಾದರೂ ಗಮನಿಸಿ ತಿಳಿಸಿದಾಗಷ್ಟೇ ಇತರರಿಗೂ ತಿಳಿದೀತು. ಆಯಾ ಸಮುದಾಯದವರೇ ಆ ಬಗ್ಗೆ ಪ್ರಚುರ ಪಡಿಸಬಹುದು. ದೇವರಮನೆ ಎಂಬ ವ್ಯವಸ್ಥೆಯು ಸಾಮುದಾಯಿಕವಾಗಿದ್ದು, ಅದು ಎಲ್ಲ ಊರುಗಳಲ್ಲೂ ಇರಬಹುದು. ಕಾಲ ಕಾಲಕ್ಕೆ ಬಂದ ಬದಲಾವಣೆಗಳನ್ನು ಅಳವಡಿಸಿಕೊಂಡು, ಪದ್ಧತಿಯನ್ನು ಜೀವಂತವಾಗಿ ಇಟ್ಟಿರುವ ಸಮುದಾಯಗಳ ಧಾರ್ಮಿಕ ಪ್ರಜ್ಞೆ ಮೆಚ್ಚುವಂಥದು. ಅಜ್ಜಂಪುರದಲ್ಲಿರುವ ಇಂಥ ಎರಡು ದೇವರಮನೆಗಳ ಬ

115 ಅಜ್ಜಂಪುರಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ : ಮಂಜುನಾಥ ಅಜ್ಜಂಪುರ

ಇಮೇಜ್
ಆತ್ಮೀಯರೇ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ರೀ ಸುಬ್ರಹ್ಮಣ್ಯ ಶೆಟ್ಟರು 1968ರಲ್ಲಿ ಅಜ್ಜಂಪುರದಲ್ಲಿ  ಪ್ರಶಸ್ತಿ ಪುರಸ್ಕೃತರು. ಇದೀಗ 53 ವರ್ಷಗಳ ನಂತರ ಬಾಲ್ಯಮಿತ್ರ ಮಂಜುನಾಥ ಅಜ್ಜಂಪುರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಇದು ಅಜ್ಜಂಪುರದ ಹಿರಿಮೆಯನ್ನು ಹೆಚ್ಚಿಸಿದೆ. ಅವರಿಗೆ ಅಭಿನಂದನೆಗಳು. ರಾಷ್ಟ್ರೀಯ ಚಿಂತನೆಯೇ ಪ್ರಧಾನವಾಗಿ, ದೇಶದ ಐತಿಹಾಸಿಕತೆಯ ಮಹತ್ವವನ್ನು ಬಿಂಬಿಸುವ ಬರಹಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮುದ್ರಣ ಮಾಧ್ಯಮವಲ್ಲದೆ, ವಿದ್ಯುನ್ಮಾನ ಮಾಧ್ಯಮದಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿರುವದರಿಂದ, ಅವರ ಓದುಗರ ವ್ಯಾಪ್ತಿ ವಿಸ್ತಾರವಾಗಿದೆ.  ಮಂಜುನಾಥರ ಬಗ್ಗೆ ನನ್ನ ಇನ್ನೋರ್ವ ಲೇಖಕ ಮಿತ್ರ ಅಪೂರ್ವ ಅವರು ಅಭಿನಂದಿಸಿ ಬರೆದಿರುವ ಲೇಖನ ನಿಮ್ಮ ಓದಿಗೆಂದು ಇಲ್ಲಿದೆ. ಇವರ ಗೌರವ ಸಂಪಾದಕತ್ವದಲ್ಲಿ ವಾಯ್ಸ್ ಆಫ್ ಇಂಡಿಯಾ ಮಾಲಿಕೆಯು ಸಾದರಪಡಿಸುತ್ತಿರುವ ಪುಸ್ತಕ ಸರಣಿಯಲ್ಲಿ ಶ್ರೀ ಸೀತಾರಾಮ ಗೋಯೆಲ್ ರ ''ಹಿಂದೂ ಧರ್ಮ ದಿಗ್ಬಂಧನದಲ್ಲಿ" ಎಂಬ ಇಂಗ್ಲಿಷ್ ಬರಹವನ್ನು ನಾನು ಅನುವಾದ ಮಾಡುವಂತಾದುದು ನನಗೆ ಸ್ಮರಣಾರ್ಹ ಸಂಗತಿ. -೦-೦-೦-೦-೦-೦- ಕರ್ನಾಟಕ ರಾಜ್ಯ ಸರ್ಕಾರವು ನೀಡುವ ಸಾಹಿತ್ಯ ಕ್ಷೇತ್ರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಈ ಬಾರಿ ಅಂಕಣ ಬರಹಗಾರರಾದ ಮಂಜುನಾಥ ಅಜ್ಜಂಪುರ ಅವರಿಗೆ ಬಂದಿರುವುದು ಅತ್ಯಂತ ಸಂತಸದ ಸುದ್ದಿ. ನಮ್ಮೆಲ್ಲರ ಪ್ರೀತಿಯ ಗೆಳೆಯರು ಎಂಬುದು ‌ಕ್ಲೀಷೆಯ ಮಾತಾದೀತು.  ವೈ