ಪೋಸ್ಟ್‌ಗಳು

ಪೂರ್ಣ ಬೆಳಗುವ ಮುನ್ನ ಆರಿತೇ ಜ್ಯೋತಿ !

ಇಮೇಜ್
ಆತ್ಮೀಯ ಓದುಗರೇ ,  "ಎಲ್ಲರಿಗೂ ಜಯ ನಾಮ ಸಂವತ್ಸರದ ಶುಭಾಶಯಗಳು" ಅಜ್ಜಂಪುರದ ಪುರಪ್ರಮುಖರಲ್ಲಿ ಓರ್ವರಾದ  ಶ್ರೀ ಸುಬ್ರಹ್ಮಣ್ಯ ಶೆಟ್ಟರ ಪುತ್ರ ಶ್ರೀ ರಾಜಗೋಪಾಲ ಗುಪ್ತ ಇತ್ತೀಚೆಗೆ ಎಂದರೆ   ದಿನಾಂಕ   19-12-2013 ರಂದು ತಮ್ಮ 66 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಅಜ್ಜಂಪುರದ ಸಾಮಾಜಿಕ ವಲಯದಲ್ಲಿ   ತಮ್ಮ ತಂದೆಯವರ ಹೆಸರಿನ ಬಲಕ್ಕಿಂತ ಹೆಚ್ಚಾಗಿ , ತಮ್ಮ ಸೌಮ್ಯ ಸ್ವಭಾವ ಮತ್ತು ತೋರುತ್ತಿದ್ದ ಸಾಮಾಜಿಕ   ಕಾಳಜಿಗಳಿಂದಾಗಿ ಗಮನಾರ್ಹ ವ್ಯಕ್ತಿಯಾಗಿದ್ದರು. ಅವರನ್ನು ಸಮೀಪದಿಂದ ನೋಡಿಬಲ್ಲ , ಒಡನಾಡಿಯಾಗಿದ್ದ ಗೆಳೆಯ ಶ್ರೀ   ಅಜ್ಜಂಪುರ ಮಂಜುನಾಥ ಹಾಗೂ ಅಜ್ಜಂಪುರದ ಪವಿತ್ರ ಪ್ರಿಂಟರ್ಸ್ ಮಾಲಕ  ಮತ್ತು  ಪತ್ರಕರ್ತರಾದ ಶ್ರೀ ಎನ್. ವೆಂಕಟೇಶ್ ಇವರೀರ್ವರೂ ತಮ್ಮ ಪದಶ್ರದ್ಧಾಂಜಲಿಯನ್ನು ಈ ಲೇಖನಗಳಲ್ಲಿ ದಾಖಲಿಸಿದ್ದಾರೆ.   - ಶಂಕರ ಅಜ್ಜಂಪುರ ನಮ್ಮೆಲ್ಲರ ಪ್ರೀತಿಯ ಅಣ್ಣ ರಾಜಗೋಪಾಲ ಇನ್ನಿಲ್ಲ ,   ಎನ್ನುವುದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗೆ ನೋಡಿದರೆ ,   ಅವನ ಜೀವನವೇ ಒಂದು ಸವಾಲು. ತುಂಬ ಪ್ರತಿಭಾವಂತರಾದ -ಕ್ರಿಯಾಶೀಲರಾದ - ಚೈತನ್ಯಶೀಲರಾದ ,   ತಂದೆ-ತಾಯಿಯ ಏಕೈಕ ಪುತ್ರ ಎನ್ನುವುದು ಸಹ ಸವಾಲೇ. ಉದ್ಯಮಶೀಲತೆಯ - ಚಟುವಟಿಕೆಯ - ಕಲಾಪೋಷಕರಾದ - ರಾಜಕಾರಣಿಯೂ ಆದ ಸುಬ್ರಹ್ಮಣ್ಯ ಶೆಟ್ಟರ ...

ರಾಷ್ಟ್ರಪತಿ ಸ್ವರ್ಣಪದಕ ಪುರಸ್ಕೃತ - ಗೃಹ ರಕ್ಷಕ ದಳದ ಕಂಪೆನಿ ಕಮಾಂಡೆಂಟ್ ಹ. ಪುಟ್ಟಸ್ವಾಮಿ

ಇಮೇಜ್
ಅಜ್ಜಂಪುರದ ಸಾಧಕರ ಪರಿಚಯ ಈ ಬ್ಲಾಗ್ ನಲ್ಲಿ ಸತತವಾಗಿ ನಡೆಯುತ್ತಿದೆಯಷ್ಟೆ . ಅದಕ್ಕೆ ಇನ್ನೊಂದು ಗರಿಯಾಗಿ ರಾಷ್ಟ್ರಪತಿ ಸ್ವರ್ಣಪದಕ ಪುರಸ್ಕೃತ - ಗೃಹ ರಕ್ಷಕ ದಳದ ಕಂಪೆನಿ ಕಮಾಂಡೆಂಟ್ ಹ . ಪುಟ್ಟಸ್ವಾಮಿಯವರ ಸಾಧನೆ ಸ್ಮರಣಾರ್ಹ . ಹೀಗಾಗಿ ಅವರನ್ನು ಕುರಿತ ಪರಿಚಯ ಲೇಖನವನ್ನು ಆಸ್ಥೆಯಿಂದ ಸಿದ್ಧಪಡಿಸಿ ನನಗೆ ತಲುಪಿಸಿದವರು ಗೆಳೆಯ ಅಜ್ಜಂಪುರ ಮಲ್ಲಿಕಾರ್ಜುನ್ . ಅವರಂತೆಯೇ ಇತರರೂ ಕೂಡ ತಮ್ಮ ಸಂಪರ್ಕದಲ್ಲಿ ಬರುವ ಅಜ್ಜಂಪುರದ ಸಾಧಕರನ್ನು ಹೀಗೆಯೇ ಪರಿಚಯಿಸಲು ಈ ಬ್ಲಾಗ್ ಮುಕ್ತವಾಗಿದೆ . - ಶಂಕರ ಅಜ್ಜಂಪುರ ಅಜ್ಜಂಪುರವು ಸಾಂಸ್ಕೃತಿಕ , ಶೈಕ್ಷಣಿಕ , ಧಾರ್ಮಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ , ಕರ್ನಾಟಕದ ನಕ್ಷೆಯಲ್ಲಿ ಗುರುತಿಸಿಕೊಂಡಿದೆ . ಎಲ್ಲ ಊರುಗಳಂತೆ ಅಜ್ಜಂಪುರದಲ್ಲಿಯೂ ಗೃಹ ರಕ್ಷಕ ದಳ ಕಾರ್ಯನಿರ್ವಹಿಸಲು ಆರಂಭಿಸಿತು . ಈ ಸೇವೆಯ ಪರಿಚಯವಿರದ ಜನರೇ ಅಧಿಕವಾಗಿದ್ದ ಊರಿನಲ್ಲಿ , ಅದನ್ನು ತೀವ್ರವಾಗಿ ತೆಗೆದುಕೊಂಡು , ರಾಷ್ಟ್ರಪತಿಗಳ ಪದಕ ಪಡೆಯುವ ಮಟ್ಟಿಗಿನ ಸಾಧನೆಯನ್ನು ತೋರಿದವರು ಹ . ಪುಟ್ಟಸ್ವಾಮಿ . ಅಜ್ಜಂಪುರದ ಈ ಘಟಕವು ರಾಜ್ಯದಲ್ಲೇ ಶಿಸ್ತುಬದ್ಧ ಘಟಕವೆಂದು ಹೆಸರು ಪಡೆಯಲು ಶ್ರಮಿಸಿದ ಶಿಸ್ತಿನ ಸಿಪಾಯಿ ಹ . ಪುಟ್ಟಸ್ವಾಮಿಯವರ ಸೇವೆ ಮತ್ತು ...