ಪೋಸ್ಟ್‌ಗಳು

09. ವಿಶಿಷ್ಟ ವನಪಾಲಕ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ

ಇಮೇಜ್
ಹಿಂದಿನ ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದಂತೆ, ಈ ಸಂಚಿಕೆಯಲ್ಲಿ ನಿವೃತ್ತ ಅರಣ್ಯಮುಖ್ಯಾಧಿಕಾರಿ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿಗಳ ಪರಿಚಯ ಲೇಖನ ಇಲ್ಲಿದೆ . ಅವರ ಸಾಧನೆ , ಸಾಮಾಜಿಕ ಕಾಳಜಿಗಳನ್ನು ಬಿಂಬಿಸುವ ಹಲವಾರು ಅಂಶಗಳನ್ನು ನೀವು ಇಲ್ಲಿ ಗುರುತಿಸಬಹುದು . ಅವರ ಹಿರಿಯರು ಕಳೆದ ಶತಮಾನದ ಆದಿಭಾಗದಲ್ಲಿ ಅಜ್ಜಂಪುರದ ನಿವಾಸಿಗಳಾಗಿದ್ದವರು . ಕಾಲಾಂತರದಲ್ಲಿ ಈ ಕುಟುಂಬದ ಸದಸ್ಯರು ರಾಜ್ಯದ , ದೇಶದ ಹಾಗೂ ವಿಶ್ವದ ಅನೇಕ ಎಡೆಗಳಿಗೆ ತೆರಳಿ ಸಾಧನೆ ಮಾಡಿದರು . ಈ ಎಲ್ಲ ಹಂತಗಳಲ್ಲೂ ತಮ್ಮ ಹುಟ್ಟೂರಿನ ಬಗೆಗಿನ ಅಭಿಮಾನವನ್ನು ಅವರಾರೂ ಮರೆಯಲಿಲ್ಲವೆನ್ನುವುದು ವಿಶೇಷ . ಸರಳ , ಸಜ್ಜನಿಕೆಯ ಜತೆಜತೆಗೇ , ತಮಗನ್ನಿಸಿದುದನ್ನು ನಿರ್ಭಿಡೆಯಿಂದ ಹೇಳುವ , ಅರಣ್ಯ , ಪರಿಸರ ಮತ್ತು ಮಾನವೀಯತೆಗಳ ಬಗ್ಗೆ ಕಳಕಳಿಹೊಂದಿರುವ ೮೭ರ ಹರೆಯದ ಅಜ್ಜಂಪುರ ಕೃಷ್ಣಸ್ವಾಮಿಗಳು ಉತ್ತಮ ಅಭಿರುಚಿಯ ಪ್ರತೀಕ . ಅವರನ್ನು ಬೆಂಗಳೂರಿನ ಬಿ . ಟಿ . ಎಂ . ಲೇಔಟ್‌ನ ಅವರ ನಿವಾಸಕ್ಕೆ ಹೋಗಿ ಸಂದರ್ಶಿಸಿದೆ . ಅವರು ನೀಡಿರುವ ಅಪರೂಪದ ಛಾಯಾಚಿತ್ರಗಳು , ಲೇಖನಗಳು ಕಳೆದು ಹೋದ ಕಾಲದ ಸಿರಿಯನ್ನು ನೆನಪಿಸುತ್ತವೆ . " ಅನುಭವದ ಬೆಂಬಲ ಇರುವಷ್ಟು ದೂರಕ್ಕೆ ನನಗೆ ನೆನಪಾದುದನ್ನೆಲ್ಲ ನನ್ನ ಬರಹಗಳಲ್ಲಿ ದಾಖಲಿಸಿದ್ದೇನೆ . ಇವು ಯುವ ಪೀಳಿಗೆಗೆ ಮಾದರಿಯಾದೀತು ಎಂಬ ಆಶಯ ನನ್ನದು , ಅವರು ಅದನ್ನು ಸದುಪಯೋಗ ಮಾಡಿಕೊಂಡರೆ ನನ್ನ ಬರಹ ಸಾರ್ಥಕವಾದಂತೆ . ಈ ಬರಹಗಳಲ...

08. ಸಾಹಸಿ ಕನ್ನಡಿಗ - ಅಜ್ಜಂಪುರ ಸರ್ಕಸ್ ಸುಬ್ಬರಾವ್

ಇಮೇಜ್
    ಹಿರಿಯ   ಪತ್ರಕರ್ತ   ಗರುಡನಗಿರಿ   ನಾಗರಾಜರು   ಅಜ್ಜಂಪುರದವರೇನೂ   ಅಲ್ಲ .   ಆದರೆ   ಅವರು   ನಾಡು - ನುಡಿಯ   ಬಗ್ಗೆ   ತಳೆದ   ವಿಶಾಲ   ದೃಷ್ಟಿಕೋನ   ಎಲ್ಲರೂ   ಅನುಸರಿಸುವಂಥದು .   ಅವರೊಂದು   ಸಂದರ್ಶನದಲ್ಲಿ   ಹೇಳಿದ್ದರು   : "   ಕರ್ನಾಟಕದಲ್ಲಿ   27000   ಕ್ಕೂ   ಹೆಚ್ಚು   ಹಳ್ಳಿಗಳಿವೆ .   ನಾನು   ಕನಿಷ್ಠ   20000   ಹಳ್ಳಿಗಳನ್ನಾದರೂ   ಸುತ್ತಿರುವೆ .   ಅಲ್ಲಿನ   ವಿಶೇಷಗಳು ,   ಜನ ,   ಸಂಸ್ಕೃತಿಗಳ   ಬಗ್ಗೆ   ಅಧ್ಯಯನ   ಮಾಡುವ   ಅವಕಾಶಗಳನ್ನು   ಅರಸಿಹೋದೆ .   ಹೀಗಾಗಿ   ನಮ್ಮದೇ   ಪ್ರದೇಶಗಳ   ವೈವಿಧ್ಯ ,   ಪ್ರತಿಭೆಗಳು   ಕಣ್ಣಿಗೆ   ಕಾಣುವಂತಾಯಿತು .   ಇದು   ಪತ್ರಕರ್ತರಿಗೆ   ಅತ್ಯವಶ್ಯ .   ಕುಳಿತಲ್ಲೇ   ವರದಿ   ಸಿದ್ಧಪಡಿಸುವ   ಕ್ರಮ   ಸೂಕ್ತವಲ್ಲ ."   ಅವರ   ಅಧ್ಯಯನಶೀಲತೆಯಿಂದಾಗಿಯೇ   ಕನ್ನಡಿಗರು   ಮರೆತುಬಿಡಬಹುದಾಗಿದ್ದ   ಸರ್ಕಸ್   ಸುಬ್ಬರಾಯರ   ಸಾಹಸಗಾಥೆ   ...

07. ಇವರು ನಮ್ಮ ಹಿರಿಯರು

ಇಮೇಜ್
ನಾನು ಈ ಹಿಂದೆ ತಿಳಿಸಿದ್ದಂತೆ ಅಜ್ಜಂಪುರದಲ್ಲಿ ನಮ್ಮೊಡನಿದ್ದ ಕೆಲವು ಹಿರಿಯರ ಬಗ್ಗೆ ನನ್ನ ನೆನಪಿನಲ್ಲಿರುವ ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ. ಇವರಲ್ಲಿ ಅನೇಕರನ್ನು ನೀವು ನೋಡಿರಬಹುದು, ಒಡನಾಡಿರಬಹುದು. ಇಂಥ ನೆನಪುಗಳನ್ನು ಮೆಲುಕುಹಾಕಲು ಈ ಬಗೆಯ ಚಿತ್ರ - ವಿವರಗಳು ಸಹಾಯಕವಾಗುತ್ತವೆಯೆಂದು ಅನ್ನಿಸಿದ್ದರಿಂದ ಈ ಪ್ರಯತ್ನ. ನನ್ನ ಸಂಗ್ರಹದಲ್ಲಿರುವ ವ್ಯಕ್ತಿಗಳ ಚಿತ್ರಗಳಿಗೆ ಸಂಬಂಧಿಸಿದಂತೆ ಕೆಲವು ಸಾಲುಗಳನ್ನು ಬರೆದಿರುವೆ. ಇದನ್ನು ನೀವೂ ಮುಂದುವರೆಸಲಿ ಎಂಬುದು ನನ್ನ ಆಶಯ. ಇಲ್ಲಿರುವ ಹಿರಿಯರು ಯಾರೂ ದೊಡ್ಡ ಅಧಿಕಾರದ ಹುದ್ದೆಗಳಲ್ಲಿದ್ದ ಪ್ರಭಾವಶಾಲಿಗಳೇನಲ್ಲ. ಆದರೆ ತಾವು ನಡೆಸಿದ ಜೀವನಕ್ರಮದಿಂದ ನಮ್ಮಲ್ಲರಿಗೆ ಪ್ರೀತಿಪಾತ್ರರಾದವರು. ಸರಳ ಜೀವನ ನಡೆಸಿ ತಮ್ಮ ಪ್ರಭಾವವನ್ನು ನಮ್ಮ ತಲೆಮಾರಿನ ಮೇಲೆ ಉಳಿಸಿಹೋಗಿರುವಂಥವರು. ನಿಮ್ಮ ನೆನಪಿನ ಸಂಗ್ರಹದಲ್ಲೂ  ಅಜ್ಜಂಪುರದವರಾದ ಇಂಥ ಅನೇಕರು ಇರುತ್ತಾರೆ. ಅವರ ಬಗ್ಗೆ ಚಿತ್ರ ಸಹಿತ ನಿಮ್ಮ ನೆನಪುಗಳನ್ನು ದಾಖಲಿಸಲು ಇಲ್ಲೊಂದು ಅವಕಾಶವಿದೆ. ನಿಮಗೆ ಹಾಗೆ ಮಾಡಲು ಅವಕಾಶವಾಗದಿದ್ದಲ್ಲಿ, ಕೈಬರವಣಿಗೆಯಲ್ಲಿ ನಿಮ್ಮ ಬರಹ ಮತ್ತು ಚಿತ್ರದ ಪ್ರತಿಗಳನ್ನು ನನಗೆ ರವಾನಿಸಿ. ನಾನು ಅದನ್ನು ಪ್ರಕಟಿಸುವ ಕೆಲಸ ಮಾಡುತ್ತೇನೆ. ಶ್ರೀ ಬಿ. ಆರ್. ನರಸಿಂಹಮೂರ್ತಿ ಇವರು ಅಜ್ಜಂಪುರ ಸಮೀಪದ ಗ್ರಾಮ ಬಗ್ಗವಳ್ಳಿಯ ಶಾನುಭೋಗರಾಗಿದ್ದವರು. ಅಜ್ಜಂಪುರ ಬ್ರಾಹ್ಮಣ ಸಂಘದ ಸಂಸ್ಥಾಪಕ ...

06. ಶ್ರೀ ಶೆಟ್ರು ಸಿದ್ದಪ್ಪನವರು

ಇಮೇಜ್
ಇವರು ನಮ್ಮ ಹಿರಿಯರು ಮಾಲಿಕೆಯ ೫ ನೇ ಲೇಖನವಿದು. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ. ಇದೇ ಸೆಪ್ಟೆಂಬರ್ ನಲ್ಲಿ ಅಜ್ಜಂಪುರಕ್ಕೆ ಹೋಗುವ ಸಂದರ್ಭ ಒದಗಿತು. ಈ ಮೊದಲು ಬ್ಲಾಗ್‌ನಲ್ಲಿ ಸ್ಮರಿಸಬೇಕಿದ್ದ ಹೆಸರು ಶೆಟ್ರು ಸಿದ್ದಪ್ಪನವರದು. ಆದರೆ ಸಾಕಷ್ಟು ವಿವರಗಳು ದೊರೆಯದ ಕಾರಣ ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಇದೀಗ ಶೆಟ್ರು ಸಿದ್ದಪ್ಪನವರ ಮೊಮ್ಮಗ ಶ್ರೀ ಶಿವಶಂಕರ್ ರವರನ್ನು ಸಂದರ್ಶಿಸಿದೆ. ಇವರೊಂದಿಗೆ ವಿದ್ಯಾ ಇಲಾಖೆಯ ನಿವೃತ್ತ ಶಾಲಾ ಪರೀವೀಕ್ಷಕರಾದ ಶ್ರೀ ಶ್ರೀಕಂಠಯ್ಯನವರೂ, ಆಕಸ್ಮಿಕವಾಗಿ ಭೇಟಿಯಾದರು. ಇವರೀರ್ವರು ನೀಡಿದ ಮಾಹಿತಿ ನಿಮ್ಮ ಓದಿಗಾಗಿ ಇಲ್ಲಿದೆ.  - ಶಂಕರ ಅಜ್ಜಂಪುರ     ಶ್ರೀ ಶೆಟ್ರು ಸಿದ್ದಪ್ಪನವರು ಅವರು ಅಜಾತ ಶತ್ರು. ಅಜ್ಜಂಪುರದ ಸಮೀಪದ ಗ್ರಾಮ ಸೊಲ್ಲಾಪುರದಲ್ಲಿರುವ ಸಿದ್ಧರಾಮೇಶ್ವರನ ಪರಮಭಕ್ತರು. ಈ ಪ್ರದೇಶದ ಅತಿ ದೊಡ್ಡ ಕೃಷಿಕರು ಮತ್ತು ಕೃಷಿ ಉತ್ಪನ್ನಗಳ ವರ್ತಕರು. ಅವರ ನಿವಾಸ ಅಜ್ಜಂಪುರದ ರೇಲ್ವೇ ನಿಲ್ದಾಣದ ಎದುರಿಗೆ ಇದೆ. ಉತ್ತರ ಕರ್ನಾಟಕ ದೊಡ್ಡ ವಾಡೆಯನ್ನು ನೆನಪಿಸುವಂತಹ ವಾಸ್ತುಹೊಂದಿರುವ ಆ ಕಟ್ಟಡ ಅಜ್ಜಂಪುರದ ಪ್ರಮುಖ ಗುರುತು. ಕೃಷಿ, ವ್ಯಾಪಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶೆಟ್ರು ಸಿದ್ದಪ್ಪನವರು ಎತ್ತರದ ಆಳು. ಗಿರಿಜಾ ಮೀಸೆ. ಕತ್ತು ಮುಚ್ಚುವ ಕಪ್ಪು ನೀಳ ಕೋಟು, ಕಚ್ಚೆಪಂಚೆ, ತಲೆಯಮೇಲೆ ದೊಡ್ಡದಾದ ಬಿಳಿಯ ಸರಿಗೆಯ ರುಮಾಲು, ಹಣೆಯ...