ಪೋಸ್ಟ್‌ಗಳು

ಒಂದೇ ಸೂರಿನಡಿ ಮೂರು ತಲೆಮಾರಿನ ರಂಗ ಕಲಾವಿದರು

ಇಮೇಜ್
ಸಂಚಿಕೆ-64 ಆತ್ಮೀಯ ಓದುಗರೇ, ಅಮೆರಿಕಕ್ಕೆ ಇದು ನನ್ನ ಎರಡನೆಯ ಭೇಟಿ. ಇಲ್ಲಿ ಬಂದ ನಂತರವೂ ನನ್ನ ಈ ಬ್ಲಾಗ್ ಸಂಪಾದನೆಯ ಕೆಲಸ ನಿರುಮ್ಮಳವಾಗಿ ನಡೆಯುತ್ತಿದೆಯೆಂದರೆ, ಅದಕ್ಕೆ ಕಾರಣ ನನ್ನಂತೆಯೇ ಯೋಚಿಸಿ, ಕೆಲಸ ಮಾಡಬಲ್ಲ ಮಿತ್ರರ ತಂಡ. ನಾನು "ಅಮೆರಿಕದಲ್ಲಿ ಅಜ್ಜಂಪುರ" ಎಂಬ ಲೇಖನಮಾಲೆಯನ್ನು ಆರಂಭಿಸಿದೆನಾದರೂ, ಅದರಲ್ಲಿ ಅಜ್ಜಂಪುರದ ಬಗ್ಗೆ ಬರೆದದ್ದು ಕಡಿಮೆಯೇ ಎನ್ನಬೇಕು. ಆದರೆ ಅಮೆರಿಕದಲ್ಲಿ ಕುಳಿತು ಅಜ್ಜಂಪುರಕ್ಕೆ ಸಂಬಂಧಿಸಿದ ವ್ಯಕ್ತಿ, ವಿಷಯಗಳ ಮಾಹಿತಿಗಳನ್ನು ಪ್ರಕಟಿಸಲು ಈಗ ಸಾಧ್ಯವಾಗಿರುವುದು ನನ್ನ ಪ್ರೀತಿಯ ಮಿತ್ರ ಅಪೂರ್ವ ಬಸು ಅವರ ಸಹಕಾರದಿಂದ. ಅಜ್ಜಂಪುರ ಕೃಷಿಕರ ಊರಾಗಿರುವಂತೆ ಕಲಾವಿದರ ನೆಲೆಯೂ ಹೌದು. ಕಲಾ ಸೇವಾ ಸಂಘದ ಕಾರ್ಯ ಚಟುವಟಿಕೆಗಳನ್ನು ಕುರಿತಂತೆ ವಿಸ್ತಾರವಾದ ಲೇಖನಗಳು ಈಗಾಗಲೇ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಪೌರಾಣಿಕ ನಾಟಕಗಳಿಂದ ಆರಂಭಿಸಿ, ಆಧುನಿಕ ರಂಗಭೂಮಿಯ ಎಲ್ಲ ಪ್ರಯೋಗಗಳೂ ಅಜ್ಜಂಪುರದಲ್ಲಿ ನಡೆಯುತ್ತವೆ. ಈ  ಸಂಚಿಕೆಯಲ್ಲಿ ಅಜ್ಜಂಪುರದ ಹೆಮ್ಮೆಯ ಕಲಾವಿದ ಶ್ರೀ ಶಿವಾಜಿರಾವ್ ಮತ್ತು ಅವರ ಮಗ ಮೋಹನರಾವ್ ಹಾಗೂ ಅವರ ಮೊಮ್ಮಗ ಉಲ್ಲಾಸ್ ಜಾಧವ್ ಇವರನ್ನು ಕುರಿತಂತೆ ವಿಸ್ತೃತ ಲೇಖನವನ್ನು ಅಪೂರ್ವ ಬಸು, ಉತ್ತಮ ಚಿತ್ರ ಸಂಗ್ರಹದೊಂದಿಗೆ ನಿಮ್ಮ ಓದಿಗೆಂದು ಇಲ್ಲಿ ಒದಗಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಈ ಚಿತ್ರಮಾಲಿಕೆಯಲ್ಲಿ ಅಜ್ಜಂಪುರದ ಅನೇಕ ಹಿರಿಯರು ಭದ್ರಾ ನದಿಯಲ್ಲಿ ಜಳಕ ಮಾಡ...

ನಮ್ಮ ಪ್ರೀತಿಯ ಲಚ್ಚು ಮಾಸ್ತರರು

ಇಮೇಜ್
ನಾನೀಗ ಅಮೆರಿಕದ ಕೊಲಂಬಸ್ ನಲ್ಲಿ ಇರುವಾಗ ನನ್ನ ಪ್ರೀತಿಯ ಹಿರಿಯ ಮಿತ್ರರಾದ ಲಚ್ಚು ಮಾಸ್ತರರು ನಿಧನರಾದ ವಿಷಯ ತಿಳಿಯಿತು. ಅಜ್ಜಂಪುರಕ್ಕೆ ಭೇಟಿ ನೀಡಿದಾಗಲೆಲ್ಲ  ಅವರನ್ನು ಸಂದರ್ಶಿಸದೇ ಬರುತ್ತಿರಲಿಲ್ಲ. ಆದರೆ ಇಲ್ಲಿಗೆ ಬರುವ ಮುನ್ನ ಈ ಬಾರಿ ಜೂನ್ ನಲ್ಲಿ ಅಜ್ಜಂಪುರಕ್ಕೆ ತೆರಳಿದಾಗ ಅವರನ್ನು ಭೇಟಿಮಾಡಲು ಸಾಧ್ಯವಾಗಿರಲಿಲ್ಲ. ಪ್ರತಿ ಭೇಟಿಯಲ್ಲೂ ಹೊಸ ಸಂಗತಿಗಳ ಬಗ್ಗೆ ಆಸ್ಥೆಯಿಂದ ಕೇಳಿ ತಿಳಿದುಕೊಳ್ಳುತ್ತಿದ್ದ ಅವರ ಆಸಕ್ತಿ ಮತ್ತು ಜೀವನೋತ್ಸಾಹಗಳನ್ನು ಮರೆಯಲಾಗದು. ಅವರ ಒಡನಾಟದಲ್ಲಿ ನಾನು ಕಂಡಂತೆ ಅವರನ್ನು ಇಲ್ಲಿ ಚಿತ್ರಿಸಿದ್ದೇನೆ. ಶಂಕರ ಅಜ್ಜಂಪುರ ಈ-ಮೇಲ್ : shankarajp@gmail.com ----------------------------------------------------------------------------------------------------------------------------------- ಬಂಕನಕಟ್ಟೆ ಜೋಡೀದಾರ್ ಲಕ್ಷ್ಮೀಪತಯ್ಯ ಲಕ್ಷ್ಮೀನರಸಿಂಹಯ್ಯ. ಇದು ಅವರ ಪೂರ್ಣ ಹೆಸರು. ಆದರೆ ಅವರು ಕುಟುಂಬ ವಲಯದಲ್ಲಿ “ ಲಚ್ಚು ” ಹಾಗೂ ವೃತ್ತಿ ಜೀವನದಲ್ಲಿ “ ಲಚ್ಚು ಮಾಸ್ತರ ” ರೆಂದೇ ಗುರುತಿಸಲ್ಪಟ್ಟವರು. ಅವರದು ಒಂದು ಕಾಲಕ್ಕೆ ಶ್ರೀಮಂತ ಕುಟುಂಬ. ಅವರ ಹಿರಿಯರು ತುಂಬ ಆಢ್ಯತೆಯಿಂದ ಬಾಳಿ ಬದುಕಿದವರು. ಕಾಲಾಂತರದಲ್ಲಿ ಆ ಶ್ರೀಮಂತಿಕೆಯೇನೂ ಉಳಿಯಲಿಲ್ಲವಾದರೂ, ಲಚ್ಚು ಮಾಸ್ತರರ ಜೀವನದ ಶ್ರೀಮಂತಿಕೆ ಅವರು ಬದುಕಿದ ಪರಿಯಲ್ಲಿ ಅಡಗಿತ್ತು. ...

ಮರೆಯಾದ ಗ್ರಾಮೀಣ ಕಸುಬು - ಹಲ್ಲೆ ಹೊಡೆಯುವವರು ಹೋದರೆಲ್ಲಿ ?

ಇಮೇಜ್
ಆತ್ಮೀಯ ಓದುಗರೇ, ಬಾಲ್ಯದ ನೆನಪುಗಳು ಯಾವಾಗಲೂ ಗಾಢ ಮತ್ತು ತೀವ್ರ. ಅದು ನೆನಪಿನ ಸಂಗ್ರಹದಿಂದ ಸುಲಭವಾಗಿ ಮಸಳಿಹೋಗದು. ನನ್ನ ಬಾಲ್ಯದಲ್ಲಿ ಎತ್ತುಗಳ ಕಾಲಿಗೆ ಹಲ್ಲೆ ಹೊಡೆಯುವ ಕೆಲಸವನ್ನು ಗಂಟೆಗಟ್ಟಲೆ ನೋಡುತ್ತ ನಿಲ್ಲುತ್ತಿದ್ದೆ. ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಈ ಕಸುಬು ಕೊನೆಯುಸಿರು ಎಳೆಯುತ್ತಿರುವ ಈ ದಿನಗಳಲ್ಲಿ  ಸ್ಮರಣೆಗೆ ಬಂದಿತು.  ನನ್ನ ಸಮಕಾಲೀನರು, ಹಿರಿಯರಿಗೆ ಇದೊಂದು ನೆನಪು ಮಾತ್ರವಾದರೆ, ಹಿಂದೆ ಹೀಗಿತ್ತು ಎಂಬ ಮಾಹಿತಿಯಾದರೂ ಕಿರಿಯರಿಗೆ ದೊರಕಲಿ ಎಂಬ ಉದ್ದೇಶದ ಈ ಬರಹ ನಿಮಗೆ ಇಷ್ಟವಾಯಿತೇ, ಬರೆದು ತಿಳಿಸಿ.  ವಂದನೆಗಳೊಡನೆ,   ಶಂಕರ ಅಜ್ಜಂಪುರ ಇ-ಮೇಲ್ - shankarajp@gmail.com --------------------------------------------------------------------------------------------------------------------------------------------------------------------------------------------- ಹಲ್ಲೆ ಅಥವಾ ಲಾಳ - ಎತ್ತುಗಳ ಪಾದರಕ್ಷೆ ಅಜ್ಜಂಪುರದಲ್ಲಿ ಮುಸಲ್ಮಾನರ ವಸತಿ ಪ್ರದೇಶವು ಹಿಂದೆ ಬ್ರಾಹ್ಮಣರು ಹೆಚ್ಚಾಗಿ ಇರುತ್ತಿದ್ದ ಪ್ರದೇಶಕ್ಕೆ ಹೊಂದಿಕೊಂಡಂತಿದೆ. ಪ್ರಗತಿಯ ದೃಷ್ಟಿಯಿಂದ ಹೇಳುವುದಾದರೆ, ಮುಸಲ್ಮಾನರದೇ ಹೆಚ್ಚು ಎನ್ನಬಹುದು. ಇದನ್ನೇನೂ ಅಸೂಯೆಯಿಂದ ಹೇಳುತ್ತಿಲ್ಲ. ತಮ್ಮ ಶ್ರಮ ಜೀವನ ಮತ್ತು ಸರಕಾರಗಳ ಬೆಂಬಲದ ಫಲವಾ...

ಪರೇವು – ಉತ್ಸವಗಳ ಪರ್ವಕಾಲ

ಇಮೇಜ್
ಆತ್ಮೀಯ ಓದುಗರೇ, ಈ ಸಂಚಿಕೆಯನ್ನು ಅಮೆರಿಕದಿಂದ ಪ್ರಕಟಿಸುತ್ತಿದ್ದೇನೆ.  ಪ್ರತಿ ತಿಂಗಳು ಒಂದನೇ ದಿನಾಂಕದಂದು ಅಜ್ಜಂಪುರವನ್ನು ಕುರಿತಂತೆ ಒಂದು ಲೇಖನವನ್ನು ಪ್ರಕಟಿಸುವುದು ಕಳೆದ ಐದು ವರ್ಷಗಳ ಪರಿಪಾಠ. ನಾನು ಇಲ್ಲಿಗೆ ಬಂದು ಕೆಲವೇ ದಿನಗಳಾಗಿವೆ. ಇಲ್ಲಿ ನನ್ನೂರನ್ನು ಕುರಿತಂತೆ ಬರವಣಿಗೆಯ ಸಾಮಗ್ರಿ ಇಲ್ಲಿ ಲಭ್ಯವಾಗುವುದು ಕಷ್ಟವೇ ಸರಿ. ಹಾಗಾಗಿ ಈ ಸಂಚಿಕೆ ಎರಡು ವಾರಗಳಷ್ಟು ತಡವಾಗಿ ಪ್ರಕಟವಾಗುತ್ತಿದೆ. ಇದರಿಂದ ವ್ಯತ್ಯಾಸವೇನೂ ಆಗದು.  ಆದರೆ  ಸಾಧ್ಯವಾದ ಮಟ್ಟಿಗೂ ನಾನು ಸಂಕಲ್ಪಿಸಿದಂತೆ ಮಾಡಿಕೊಂಡು ಬಂದಿರುವೆನೆಂಬ ಸಮಾಧಾನ ನನ್ನದು. ನನ್ನಂತೆಯೇ ಈ ವಿಷಯದಲ್ಲಿ ಆಸಕ್ತಿ ತಳೆದು, ನನ್ನೊಂದಿಗೆ ಸಹಕರಿಸುತ್ತಿರುವ ಅಜ್ಜಂಪುರದ ಗೆಳೆಯರು ತಮ್ಮ ಬರಹಗಳ ಮೂಲಕ ಸಹಕಾರ ನೀಡುತ್ತಿದ್ದಾರೆ. ಅವರಲ್ಲಿ ಅಜ್ಜಂಪುರದಲ್ಲೇ ನೆಲೆಸಿರುವ ಅಪೂರ್ವ ಬಸು ಅವರನ್ನು ನಾನು ತುಂಬ ಆಶ್ರಯಿಸಿದ್ದೇನೆ. ನನಗೆ ಲೇಖನ ಸಿದ್ಧಪಡಿಸುವುದು ಸಾಧ್ಯವಾಗದ ಸಂದರ್ಭಗಳಲ್ಲಿ  ನನ್ನ ಕೋರಿಕೆಯನ್ನು ಮನ್ನಿಸಿ, ಸಾಮಯಿಕ ಸುದ್ದಿಗಳನ್ನು, ವರದಿಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಅವರಿಗೆ ವಂದನೆಗಳನ್ನು ತಿಳಿಸುವುದು  ಔಪಚಾರಿಕ ಮಾತ್ರ.  1960ರ ದಶಕದಲ್ಲಿ ನಡೆದ ಪರೇವಿನ ಚಿತ್ರ ನನ್ನ ಮನಃಪಟಲದಲ್ಲಿ ಮಾಸದಂತೆ ಉಳಿದಿದೆ. ಇದನ್ನು ಕುರಿತು ದಾಖಲಿಸಬೇಕೆಂಬ ಹಂಬಲ ತುಂಬ ದಿನಗಳಿಂದ ನನಗೆ ಇತ್ತು.  ಅದೀಗ ಪೂರೈಸ...

ಚವುಡಮ್ಮನ ಗುಡಿ

ಇಮೇಜ್
ಚಿತ್ರದಲ್ಲಿ ಕಾಣುತ್ತಿರುವ ಈ ಚಿಕ್ಕ ದೇವಾಲಯಕ್ಕೆ ಚವುಡಮ್ಮನ ಗುಡಿ ಎಂದು ಹೆಸರು. ದೇವಾಲಯ ಮತ್ತು ಗುಡಿ ಇವೆರಡರ ನಡುವೆ  ಗಾತ್ರ, ವಿಸ್ತಾರ, ಅನುಕೂಲತೆಗಳು ಮುಂತಾದ ವ್ಯತ್ಯಾಸಗಳು ಇರುತ್ತವಾದ್ದರಿಂದ ತೀರ ಸರಳ ರಚನೆಯಾದ ಇದನ್ನು ಗುಡಿ ಎಂದೇ ಕರೆಯುವುದು ವಾಡಿಕೆ. ಅದೇ ರೀತಿ ಕೋಟೆಯಲ್ಲಿರುವ ಹನುಮಂತ ಮತ್ತು ಈಶ್ವರ ದೇವಾಲಯಗಳು ಶಿಷ್ಟರದೆಂದೂ, ಚವುಡಮ್ಮನು ಅಶಿಷ್ಟರ ದೇವಿಯೆಂದೂ ಈಗಿನ ಸಾಹಿತ್ಯಕರು ವಿಶ್ಲೇಷಿಸುತ್ತಾರೆ. ಆದರೆ ಶಿಷ್ಟರಲ್ಲದವರ ದೇವಿಯೂ ಇದೇ ಕೋಟೆಯಲ್ಲಿ ಪೂಜೆಗೊಳ್ಳುತ್ತಿದೆ. ಇದನ್ನೇನು ವಿಶೇಷವೆಂದು ಹೇಳಬೇಕಾದ ಅವಶ್ಯಕತೆಯಿಲ್ಲವಾದರೂ, ದೇವ-ದೇವರ ನಡುವೆಯೇ ಕಂದ ಕ ಸೃಷ್ಟಿಸಿ, ಭಾವನೆಗಳ ವಿರೂಪ ಮಾಡುವಂಥ ಚಾಲತಿಯಲ್ಲಿರುವ ಸಾಹಿತ್ಯಕ ಪ್ರವೃತ್ತಿಯನ್ನಿಷ್ಟು ನೆನೆದು ಹೇಳಬೇಕಾಯಿತು. ಅಂಥ ಹೊಂದಾಣಿಕೆ, ಸಹಿಷ್ಣುತೆಗಳು ಎಂದಿನಿಂದಲೂ ನಡೆದುಬಂದಿವೆ. ಇದರಲ್ಲಿ  ಕಲ್ಲುಗುಂಡಿನಂಥ ನಾಲ್ಕಾರು ರಚನೆಗಳಿವೆ. ಇವು ಅಜ್ಜಂಪುರದ ಕೋಟೆಯಲ್ಲಿ ಬಹಳ ಹಿಂದಿನಿಂದಲೂ ಪೂಜೆಗೊಳ್ಳುತ್ತಿವೆ. ಹಿಂದೆ ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಜಾನುವಾರುಗಳು ಇರುತ್ತಿದ್ದವು. ಹಸುಗಳು ಕರುಹಾಕಿದಾಗ ಅವುಗಳ ಮೊದಲ ದಿನದ ಹಾಲನ್ನು ಚೌಡಮ್ಮನಿಗೆ ಅರ್ಪಿಸಿ ನಂತರ ಅದನ್ನು ಗಿಣ್ಣು ಮಾಡುವ ಸಂಪ್ರದಾಯವಿತ್ತು. ಅದೇ ರೀತಿ ನಾಲ್ಕಾರು ದಿನಗಳ ನಂತರ ಆ ಹಸುವಿನ ಹಾಲಿನಿಂದ ಮೊಸರು ತಯಾರಿಸಿ, ಅದರಿಂದ ಮೊಸರನ್ನ ಮಾಡಿ, ಚೌಡಮ್ಮನನ್ನು ಪೂಜಿಸ...

ಅಜ್ಜಂಪುರದ ಅಧಿದೇವತೆ ಕಿರಾಳಮ್ಮ – ಐತಿಹ್ಯ ಮತ್ತು ಆಚರಣೆಗಳ ಪಕ್ಷಿನೋಟ

ಇಮೇಜ್
ಆತ್ಮೀಯ ಓದುಗರೇ, ಕಳೆದ ಶುಕ್ರವಾರ ದಿನಾಂಕ 22-04-2016ರಂದು ಅಜ್ಜಂಪುರದ ಕಿರಾಳಮ್ಮನ ಜಾತ್ರೆ, ರಥೋತ್ಸವಗಳು ಸಂಪನ್ನಗೊಂಡವು. ನಮ್ಮ ಗ್ರಾಮದೇವತೆಯ ಉತ್ಸವದ ಹಿನ್ನೆಲೆ, ಆಚರಣೆಗಳು ಮತ್ತು ಅದಕ್ಕಿರುವ ಪರಂಪರಾಗತ ಅಂಶಗಳನ್ನು ಗೆಳೆಯ ಅಪೂರ್ವ (ಅಪ್ಪಾಜಿ ಜಿ.ಬಿ.) ಇವರು ಈ ಲೇಖನದಲ್ಲಿ ದಾಖಲಿಸಿದ್ದಾರೆ. ಗ್ರಾಮದೇವತೆಯ ಪರಂಪರೆಯೆನ್ನುವುದು ಪ್ರಾಚೀನವಾದುದು. ಅಂಥ ವಿಷಯದಲ್ಲಿ ತಮಿಳು ಪರಂಪರೆಯ ಸ್ವಾಮೀಜಿಯೋರ್ವರು ತಮ್ಮ ಪ್ರತಿಷ್ಠೆಯನ್ನೋ, ನಂಬಿಕೆಯನ್ನೋ ಊರ ಜನರ ಮೇಲೆ ಹೇರಲು ಹೊರಟು ಅದು ವಿಫಲವಾದ ಪ್ರಸಂಗ ಹೇಗೆ ಪರ್ಯವಸಾನವಾಯಿತೆಂಬುದರ ವಿವರಗಳನ್ನು ಕಾಣಬಹುದು. ಅದೇ ಹೊತ್ತಿಗೆ ನಾಯಕರೆನಿಸಿಕೊಂಡವರು ತಮ್ಮ ಊರ ದೇವತೆಯ ಬಗ್ಗೆ ತಳೆದ ನಿರಭಿಮಾನದಿಂದಾಗಿ ಪೇಚಿಗೆ ಸಿಲುಕಿದ ಘಟನೆಯೂ ನಡೆಯಿತು. ಇದಕ್ಕೆ ಪೂರಕವಾಗಿ, ಈ ಬ್ಲಾಗ್ ನ ಹಿಂದಿನ ಸಂಚಿಕೆಯೊಂದರಲ್ಲಿ ಪ್ರಕಟವಾಗಿರುವ ಶ್ರೀ ಶೆಟ್ಟರ ಸಿದ್ಧಪ್ಪನವರ ಪತ್ರವನ್ನೂ ನೆನಪಿಸಿಕೊಳ್ಳಬಹುದು. ಅಲ್ಲಿ ಅವರ ಹಠ ಮತ್ತು ಸ್ವಾಭಿಮಾನಗಳು ಪ್ರಕಟವಾಗಿವೆಯಾದರೆ, ಈ ಪ್ರಸಂಗದಲ್ಲಿ ಪರಂಪರೆಯನ್ನು ಕೆದಕಲು ಹೋಗಿದ್ದಕ್ಕೆ ಉಂಟಾದ ಪರಿಣಾಮಗಳು ಗೋಚರಿಸುತ್ತವೆ. ಇವೆಲ್ಲ ಚಿಕ್ಕ ಸಂಗತಿಗಳೇ ಇರಬಹುದು. ಆದರೆ ಒಂದು ಊರಿನ ದೈವದ ವಿಷಯದಲ್ಲಿ ತಳೆಯುವ ಸಾರ್ವಜನಿಕ ನಿಲುವುಗಳು, ಜನರ ಹಿತಾಸಕ್ತಿಗೆ ಪೂರಕವಾಗಿರುವುದು ಅತ್ಯವಶ್ಯ ಎನ್ನುವುದನ್ನಂತೂ ಈ ಘಟನಾವಳಿಗಳು ತಿಳಿಸುತ್ತವೆ. ಜಾತ್ರೆಯ ದೃಶ್ಯಗಳು, ಸಿಡಿ...