ಋಜುತ್ವ - ಕಠಿಣ ಪರಿಶ್ರಮಗಳ ಸಂಕೇತ ಎ.ಪಿ.ನಾಗರಾಜ ಶೆಟ್ಟರು.



ಅಜ್ಜಂಪುರದಲ್ಲಿ ಮುದ್ರಣ ಕ್ಷೇತ್ರದ ಮೊದಲಿಗರು ಶ್ರೀ ಎ.ಪಿ. ನಾಗರಾಜಶೆಟ್ಟರು. ಸದಾ ಖಾದಿಧಾರಿಯಾಗಿರುತ್ತಿದ್ದ ಅವರು ಎಂದಿಗೂ ರಾಜಕೀಯದ ಪ್ರವೇಶವನ್ನೇ ಮಾಡಲಿಲ್ಲ. ಖಾದಿ ಅವರಿಗೆ ಸ್ವಾವಲಂಬನೆಯ ಸಂಕೇತ ಮಾತ್ರವಾಗಿತ್ತು. ಉದ್ಯಮ, ಕಲೆ, ಪತ್ರಕರ್ತ, ಸಾಹಿತ್ಯಾಭಿಮಾನಿ, ಸಂಘಟಕ ಮುಂತಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀ ನಾಗರಾಜಶೆಟ್ಟರು ಉದ್ಯೋಗನಿಮಿತ್ತವಾಗಿ ಸಮೀಪದ ನರಸಿಂಹರಾಜಪುರದಲ್ಲೂ ಕೆಲಕಾಲ ವಾಸವಿದ್ದರು. ಅಲ್ಲಿನ ಕರ್ನಾಟಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾತ್ರವಹಿಸಿದರು. ಅವರು ಯುವಕರಾಗಿದ್ದಾಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ಜೀವನವಿಡೀ ಪಾಲಿಸಿಕೊಂಡು ಬಂದ ಈ ಹಿರಿಯ ಚೇತನದ ಬಗ್ಗೆ, ಅಜ್ಜಂಪುರದ ಗೆಳೆಯ ಚಿಂತಕ, ಲೇಖಕ ಅಪೂರ್ವ ಅವರ ಸ್ಮರಣೆ ಇಲ್ಲಿದೆ, ನಿಮಗಾಗಿ. 
-ಶಂಕರ ಅಜ್ಜಂಪುರ





ನಾಗರಾಜ ಶೆಟ್ಟರ ಮಂಡಿಮುದ್ರಣಾಲಯಗಳು ನಮ್ಮ ಮನೆಯೆದುರಿಗೇ ಇದ್ದುದರಿಂದ ನಾನು ಅವರನ್ನು ತುಂಬ ಶೈಶವದಿಂದಲೇ ಬಲ್ಲೆ. ಅವರ ಮಗ ಮಂಜುನಾಥ ಅಜ್ಜಂಪುರ - ನನ್ನ ಆಪ್ತಸ್ನೇಹಿತನಾಗುವುದಕ್ಕೆ ತುಂಬ ಮುಂಚೆಯೇನನಗೆ ಅವರ ವ್ಯವಸ್ಥಿತ ಜೀವನಶೈಲಿಯ ಪರಿಚಯವಾಗಿತ್ತು.

ಅವರ ತಂದೆ ಫಣಿಯಪ್ಪ ಶೆಟ್ಟರು ಜವಳಿ ವ್ಯಾಪಾರಿಯಾಗಿಅಡಿಕೆ ಚೇಣಿ ಇತ್ಯಾದಿ ಮಾಡಿದಂತಹವರು. ನೂರು ವರ್ಷಗಳ ಹಿಂದೆಯೇ ಮದ್ರಾಸಿನಿಂದ ರಾಮಾಯಣ - ಮಹಾಭಾರತ - ಭಾಗವತಗಳ ಕನ್ನಡ ಗ್ರಂಥಗಳನ್ನು ತರಿಸಿ ಪಾರಾಯಣ ಮಾಡಿಸಿಉತ್ಸವ ನಡೆಸುತ್ತಿದ್ದ ವಿಶಿಷ್ಟ ವ್ಯಕ್ತಿ. ತಂದೆ ಫಣಿಯಪ್ಪ ಶೆಟ್ಟರ ಅಕಾಲಿಕ ನಿಧನದಿಂದಅವರ ಏಕಮಾತ್ರ ಪುತ್ರ ನಾಗರಾಜ ಶೆಟ್ಟರು ಬಡತನ-ಕಷ್ಟಗಳ ಸರಮಾಲೆ ಯನ್ನೇ ಎದುರಿಸಬೇಕಾಯಿತು. ತಂದೆಯ ಭೌತಿಕ ಸಂಪತ್ತು ಬಾರದಿದ್ದರೇನಂತೆಸಾಂಸ್ಕೃತಿಕ ವ್ಯಕ್ತಿತ್ವವನ್ನು ಅವರು ಮೈಗೂಡಿಸಿಕೊಂಡರು. ಹಣಆಸ್ತಿಪಾಸ್ತಿಗಿಂತ ಕಲೆ-ಸಾಹಿತ್ಯ-ಸಂಸ್ಕೃತಿಗಳು ಮುಂದೆ ನಾಗರಾಜ ಶೆಟ್ಟರ (1913-2000) ಜೀವನದ ಆದ್ಯತೆ ಪಡೆದವು.

ನಾಗರಾಜ ಶೆಟ್ಟರ ಪುಸ್ತಕ ಪ್ರೀತಿ ವಿಸ್ಮಯ ಹುಟ್ಟಿಸುವಂತಹುದು. 1936ರಲ್ಲಿ ಶಿವರಾಮ ಕಾರಂತರು 'ಬಾಲ ಪ್ರಪಂಚ'ದ ಮೂರು ಸಂಪುಟಗಳನ್ನು ಕನ್ನಡದಲ್ಲಿ ಹೊರತಂದರು. ಅಂದಿನ ಭಾರತದಲ್ಲಿಯೇ ಕಾರಂತರ ಈ ವಿಶ್ವಕೋಶ ಯೋಜನೆಯು ಅದ್ವಿತೀಯ ಸಾಹಸವೆನಿಸಿತ್ತು. ಬಡತನ-ತೊಂದರೆಗಳ ನಡುವೆಯೂ ನಾಗರಾಜ ಶೆಟ್ಟರು ಆ ಸಂಪುಟಗಳನ್ನು ತರಿಸಿದರು ಮತ್ತು ಅವು ಇಂದಿಗೂ ದಾಖಲೆಯ ಸಂಗತಿಗಳಾಗಿವೆ. ಅಂದಿನ ಕಾಲದಲ್ಲಿ ಆ ಸಂಪುಟಗಳ ಬೆಲೆ ಮೂವತ್ತು ರೂಪಾಯಿ. ಇಂದಿನ ಮೌಲ್ಯದಲ್ಲಿ ಅದೆಷ್ಟು ಸಾವಿರಗಳಾಗುತ್ತದೆಯೋ! ಈ 'ಬಾಲಪ್ರಪಂಚಸಂಪುಟಗಳನ್ನು ಶೆಟ್ಟರು ಸಾಲ ಮಾಡಿ ತರಿಸಿದರಂತೆ ಮತ್ತು ಆ ಸಾಲ ತೀರಿಸಲು ಮೂರು ವರ್ಷಗಳೇ ಬೇಕಾದುವಂತೆ. ಆಗ ಶೆಟ್ಟರಿಗೆ ಬರಿಯ ಇಪ್ಪತ್ಮೂರು ವರ್ಷ ಎನ್ನುವುದೂ ವಿಶೇಷವೇ. ಅಂತಹ ಪುಸ್ತಕ ಪ್ರೀತಿಜ್ಞಾನದಾಹ ನಾಗರಾಜ ಶೆಟ್ಟರದು.

ಗುಬ್ಬಿ ವೀರಣ್ಣನವರೆಂದರೆ ದಕ್ಷಿಣಭಾರತದಲ್ಲಿಯೇ ಕಂಪನಿ ನಾಟಕಗಳ ಇತಿಹಾಸವನ್ನು ಪುನರ್ಲೇಖಿಸಿದವರು. ಅವರ ನಾಟಕಗಳುಅವರ ಶಿಸ್ತುಅವರ ಉದ್ಯಮಶೀಲತೆಗಳು ನಾಗರಾಜ ಶೆಟ್ಟರನ್ನೂ ಪ್ರಭಾವಿಸಿದವು. ಮುಂದೆ ಅಜ್ಜಂಪುರದಲ್ಲಿ ಕಲಾ ಸೇವಾ ಸಂಘವು ಹುಟ್ಟಿ ಬೆಳೆಯಲು ಈ ಅಂಶಗಳೇ ಕಾರಣವಾದವು. ಕಲಾ ಸೇವಾ ಸಂಘದ ಅಧ್ಯಕ್ಷರಾಗಿಕಾರ್ಯದರ್ಶಿಗಳಾಗಿ ಬೇರೆ ಬೇರೆ ಹಿರಿಯರು ಕೆಲಸ ಮಾಡಿದರೂಹಿಂದೆ ನಿಂತು ಸಂಸ್ಥೆಯ ನಿರ್ವಹಣೆ-ಬೆಳವಣಿಗೆಗಳಿಗೆ ಕಾರಣರಾದವರು ನಾಗರಾಜ ಶೆಟ್ಟರೇ. ಅವರೇ ನಿರ್ದೇಶಕರಾಗಿ ಅದೆಷ್ಟೋ ನಾಟಕಗಳ ಯಶಸ್ಸಿಗೆ ಮುನ್ನುಡಿ ಬರೆದರು. ಹವ್ಯಾಸಿ ಕಲಾವಿದರ ನಾಟಕ-ನೃತ್ಯ-ಸಂಗೀತಗಳ ಅಖಿಲ ಕರ್ನಾಟಕ  ಮಟ್ಟದ ಪರ್ಯಾಯ ಪಾರಿತೋಷಕಬಹುಮಾನಗಳ ಸ್ಪರ್ಧೆಯು ನಾಗರಾಜ ಶೆಟ್ಟರ ಕನಸಿನ ಕೂಸು. ಸ್ವಾಮಿ ಶಂಕರಾನಂದರಸುಬ್ರಹ್ಮಣ್ಯ ಶೆಟ್ಟರ ಆಶೀರ್ವಾದ - ಬೆಂಬಲಗಳಿಂದ ಈ ಸ್ಪರ್ಧೆಗಳು ತುಂಬ ಹೆಸರು ಮಾಡಿದವು. ಇಂತಹ ಸ್ಪರ್ಧೆಗಳ ಯೋಜನೆವ್ಯವಸ್ಥೆಗಳು ಕಠಿಣ ಪರಿಶ್ರಮವನ್ನು ಬೇಡುತ್ತವೆ. ಅಜ್ಜಂಪುರದಂತಹ ಪುಟ್ಟಗ್ರಾಮದಲ್ಲಿ ಕಲಾವಿದರುಸಂಗೀತಕಾರರು ಉಳಿಯಲು - ಊಟ ಮಾಡಲು ವ್ಯವಸ್ಥೆ ಮಾಡುವುದು ಕಷ್ಟ ಸಾಧ್ಯ. ಒಂದು ತಂಡವನ್ನು ಸಿದ್ಧಪಡಿಸಿಇವೆಲ್ಲವನ್ನು ಕಾರ್ಯಸಾಧ್ಯ ಮಾಡಿದ ಶ್ರೇಯಸ್ಸು ನಾಗರಾಜ ಶೆಟ್ಟರದು.

ಕಲಾ ಸೇವಾ ಸಂಘದ ಈ ಸ್ಪರ್ಧೆಗಳ ಮೌಲ್ಯಮಾಪನಕ್ಕಾಗಿ ಒಂದು ಪದ್ಧತಿಯನ್ನೇ ಶೆಟ್ಟರು ರೂಪಿಸಿದರು. ಅಭಿನಯರಂಗಸಜ್ಜಿಕೆನಿರ್ದೇಶನಪ್ರಸಾಧನಗಳಿಗೆ ಅಂಕಗಳನ್ನು ನೀಡುವ ಮತ್ತು ಪ್ರತ್ಯೇಕವಾಗಿ ಮೂರು ಜನ ತೀರ್ಪುಗಾರರು ಮೌಲ್ಯಮಾಪನ ಮಾಡುವ ಪದ್ಧತಿ ತಂದರು. ನಂತರ ಒಟ್ಟಾರೆಯಾಗಿ ಈ ಅಂಕಗಳ ಆಧಾರದ ಮೇಲೆ ಪಾರಿತೋಷಕ ಬಹುಮಾನಗಳನ್ನು ಅರ್ಹತೆಯ ಮೇಲೆಯೇ ಪ್ರಕಟಿಸುತ್ತಿದ್ದರು. ಬೆಂಗಳೂರಿನಿಂದ ಬಂದ ನಾಟಕಕರ್ತರುಅಧಿಕಾರಿಗಳು ಈ ಪದ್ಧತಿ ನೋಡಿ ಮೆಚ್ಚಿದುದಿದೆ. ನಲವತ್ತರ - ಐವತ್ತರ ದಶಕಗಳಲ್ಲಿ ಅಜ್ಜಂಪುರದ ಹೆಸರು ಕರ್ನಾಟಕ ರಾಜ್ಯದಾದ್ಯಂತ ಪರಿಚಯವಾಗಲುಈ ಕಲಾ ಸೇವಾ ಸಂಘಶಿವಾನಂದಾಶ್ರಮಗಳೇ ಕಾರಣವಾದವು. ಆಗ ಸಾಹಿತ್ಯ ಅಕಾಡೆಮಿನಾಟಕ ಅಕಾಡೆಮಿಗಳೇ ಹುಟ್ಟಿರಲಿಲ್ಲ. ರವೀಂದ್ರ ಕಲಾಕ್ಷೇತ್ರವೇ  ನಿರ್ಮಾಣ ವಾಗಿರಲಿಲ್ಲ. ಹೆಗ್ಗೋಡಿನ ಹೆಸರೇ ಯಾರೂ ಕೇಳಿರಲಿಲ್ಲ. ಸೂಕ್ತ ಸಹಕಾರಅವಕಾಶಸರ್ಕಾರದ ನೆರವು ದೊರೆತಿದ್ದರೆ ಹೀಗೆ ಕಲಾ ಸೇವಾ ಸಂಘವು ಇತಿಹಾಸದ ಪುಟಗಳಿಗೆ ಸೇರುತ್ತಿರಲಿಲ್ಲಎಂದು ನಾಗರಾಜ ಶೆಟ್ಟರು ಮುಂದೊಮ್ಮೆ ವಿಷಾದಿಸಿದ್ದೂ ಉಂಟು.


ಶ್ರೀ ಎ.ಪಿ. ನಾಗರಾಜಶೆಟ್ಟರು  ಡಿಸೆಂಬರ್ 1958ರಲ್ಲಿ ಕರ್ನಾಟಕದ 
ಒಂದು ವಿಶೇಷ ರೈಲಿನಲ್ಲಿ ನೂರಾರು ಜನ ರೈತರು - ಗ್ರಾಮಸ್ಥರೊಂದಿಗೆ 
ಅಖಿಲ ಭಾರತ ಯಾತ್ರಾಪ್ರವಾಸ ಮಾಡಿ 
ಅಂದಿನ ಪ್ರಧಾನಮಂತ್ರಿ  - ಭಾರತದ ಕಣ್ಮಣಿ ಪಂಡಿತ್ ಜವಾಹರಲಾಲ್ ನೆಹರೂ 
ಅವರನ್ನು ಕಂಡು ಪುಷ್ಪಗುಚ್ಛ ನೀಡಿ ಅಭಿನಂದಿಸಿದ್ದರು. 
ಮೂವತ್ತರ ದಶಕದಲ್ಲಿ ಸರ್ಕಾರಿ ಸೇವೆಗೆ ಸೇರಿ ಮುನಿಸಿಪಲ್ ಕ್ಲರ್ಕ್, ಹೆಡ್ ಕ್ಲರ್ಕ್ ಆಗಿ ಇಪ್ಪತ್ತು ವರ್ಷ ಸೇವೆ ಸಲ್ಲಿಸಿ ಸ್ವಯಂ-ನಿವೃತ್ತಿ ಪಡೆದ ಶೆಟ್ಟರು, 1944-1948ರ ಅವಧಿಯಲ್ಲಿ ನರಸಿಂಹರಾಜಪುರದಲ್ಲಿ ಸಲ್ಲಿಸಿದ ಸೇವಾವಧಿಯು ತಮ್ಮ ಜೀವಮಾನದ ಅತ್ಯುತ್ತಮ ಅವಧಿಎನ್ನುತ್ತಿದ್ದರು. ಅಲ್ಲಿನ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ತುಂಬ ತುಂಬ ಕಾರ್ಯಕ್ರಮಗಳನ್ನು ನಡೆಸಿದರು. ಶಿವರಾಮ ಕಾರಂತರುಅ.ನ.ಕೃ.ನಾಡಿಗೇರ ಕೃಷ್ಣರಾಯರುಎಸ್.ಕೆ. ಕರೀಮ್ ಖಾನ್ ಮುಂತಾದ ಹಿರಿಯರನ್ನು ಕರೆಸಿದ್ದರು. 1947ರ ಸ್ವಾತಂತ್ರ್ಯದೇಶವಿಭಜನೆಮುಸ್ಲಿಮರ ಗಲಭೆಗಳುಇತ್ಯಾದಿಗಳನ್ನು ನಿನ್ನೆ-ಮೊನ್ನೆ ನಡೆದಂತೆ ವಿವರಿಸುತ್ತಿದ್ದರು. ಅವರ ಅಚ್ಚುಕಟ್ಟುಶಿಸ್ತುಗಳಂತೆಯೇ ಅವರ ಸ್ಮರಣಶಕ್ತಿನಿರೂಪಣಾ ಕೌಶಲ್ಯಗಳೂ ಅದ್ಭುತವೇ. ನರಸಿಂಹರಾಜಪುರದಲ್ಲಿ ಅವರು ಎಷ್ಟು ಹೆಸರು ಮಾಡಿದ್ದರುಎಂತಹ ಸೇವೆ ಸಲ್ಲಿಸಿದ್ದರೆಂದರೆ; 1948ರಲ್ಲಿ ಗಾಂಧೀಜಿಯವರ ಹತ್ಯೆಯಾದಾಗಅವರ ಚಿತಾಭಸ್ಮವನ್ನು ಭದ್ರಾ ನದಿಗೆ ಸಮರ್ಪಿಸುವ ಸಂದರ್ಭದಲ್ಲಿಆ ಚಿತಾಭಸ್ಮದ ಕರಂಡಕವನ್ನು ಒಯ್ಯುವ ಗೌರವ ಯಾರಿಗೆ ಸಲ್ಲಬೇಕುಎಂಬ ಪ್ರಶ್ನೆಯು ಉದ್ಭವಿಸಿದಾಗ ಆ ಊರಿನ ಹಿರಿಯರು ನಾಗರಾಜ ಶೆಟ್ಟರಿಗೇ ಈ ಗೌರವಎಂದು ನಿರ್ಧರಿಸಿದರು. ಇವೆಲ್ಲ ತುಂಬ ವಿಶೇಷ ಸಂಗತಿಗಳಾಗಿವೆ.

ಐವತ್ತರ ದಶಕದಲ್ಲಿ ಕನ್ನಡ ಸಾಹಿತ್ಯದ ದಿಗ್ಗಜರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರುತಮ್ಮ ಗ್ರಾಮವಾದ ಗೊರೂರಿನಲ್ಲಿ ಪ್ರಿಂಟಿಂಗ್ ಪ್ರೆಸ್ ಒಂದನ್ನು ಸ್ಥಾಪಿಸಿದ್ದರು. ಕೆಲಸಗಾರರ ಅಭಾವ ಮತ್ತಿತರ ತೊಂದರೆಗಳಿಂದ ಬೇಸರಗೊಂಡ ಅವರು ಈ ಮುದ್ರಣ ಯಂತ್ರ ಮತ್ತಿತರ ಸಾಮಗ್ರಿಗಳನ್ನು ಮಾರಾಟ ಮಾಡಲು ನಿರ್ಧರಿಸಿಪತ್ರಿಕೆಗಳಲ್ಲಿ ಜಾಹೀರಾತನ್ನು ನೀಡಿದ್ದರು. ಅದನ್ನು ನೋಡಿ ಶೆಟ್ಟರು ಅವರಲ್ಲಿಗೇ ಹೋಗಿ ಆ ಜರ್ಮನ್ ನಿರ್ಮಿತ ಮುದ್ರಣ ಯಂತ್ರವನ್ನು ಖರೀದಿಸಿ, 1959ರಲ್ಲಿ ಗೀತಾ ಪ್ರಿಂಟರ್ಸ್ ಪ್ರಾರಂಭಿಸಿದರು. ಆ ಯಂತ್ರಪೇಪರ್ ಕಟ್ಟಿಂಗ್ ಮಶಿನ್ಅಚ್ಚಿನ ಮೊಳೆಗಳು ತುಂಬ ಚಿಕ್ಕವರಾದ ನಮ್ಮಲ್ಲಿ ಕುತೂಹಲ ಮೂಡಿಸಿದ್ದವು. 

ನವ ಅಜ್ಜಂಪುರ ನಿರ್ಮಾತೃಕನಸುಗಾರಉದ್ಯಮಿಅಪರೂಪದ ರಾಜಕಾರಣಿ ಎಂದೇ ಖ್ಯಾತಿ ಪಡೆದ ಎಸ್. ಸುಬ್ರಹ್ಮಣ್ಯ ಶೆಟ್ಟರ ಸಾಧನೆಯ ಹಿಂದಿನ ಶಕ್ತಿಯೇ ನಾಗರಾಜ ಶೆಟ್ಟರು. ಅವರ ಆಪ್ತ ಕಾರ್ಯ  ದರ್ಶಿಯಂತೆಸಲಹೆಗಾರರಂತೆ ನಾಗರಾಜ ಶೆಟ್ಟರು ಅನೇಕ ದಶಕಗಳ ಸಾಲ ನಿಸ್ವಾರ್ಥ ಸೇವೆ ಸಲ್ಲಿಸಿದರು. ಅಷ್ಟೇ ಅಲ್ಲಅವರ ಪತ್ರವ್ಯವಹಾರಭಾಷಣದ ಸಿದ್ಧತೆಗಳಿಗೂ ನೆರವಾಗುತ್ತಿದ್ದರು.

ಮಹಾತ್ಮ ಗಾಂಧೀಜಿಯವರ ಜನ್ಮ ಶತಾಬ್ದ (1968-1969), ಸುಬ್ರಹ್ಮಣ್ಯ ಶೆಟ್ಟರ ಷಷ್ಟ್ಯಬ್ದ (1969-70) ಮುಂತಾದ ಸಂದರ್ಭಗಳಲ್ಲಿ ನಾಗರಾಜ ಶೆಟ್ಟರ ಕಠಿಣ ಪರಿಶ್ರಮಅಭಿನಂದನ ಗ್ರಂಥವೊಂದನ್ನು ಹೊರತಂದಿದ್ದುಅದರ ಸಂಪಾದಕರಾಗಿ ಸೇವೆ ಸಲ್ಲಿಸಿದ್ದುಉಳಿದ ವ್ಯವಸ್ಥೆಗಳನ್ನು ನಿಭಾಯಿಸಿದ್ದುಎಲ್ಲವೂ ನನಗೆ  ಆ ಕಾಲದಲ್ಲಿ ಅಚ್ಚರಿಗೆ ಕಾರಣವಾಗಿದ್ದವು.

ಪ್ರವಾಸಯಾತ್ರೆಗಳೆಂದರೆ ನಾಗರಾಜ ಶೆಟ್ಟರಿಗೆ ತುಂಬ ಇಷ್ಟ. ಅವುಗಳ ಕಥನವನ್ನು-ವಿವರಗಳನ್ನು ಅವರ ಬಾಯಿಂದಲೇ ಕೇಳಬೇಕುಹಾಗಿರುತ್ತಿತ್ತು. ರಾಷ್ಟ್ರಪತಿಲೋಕಸಭಾಧ್ಯಕ್ಷರುಕಲಾವಿದರು ಹೀಗೆ ಅನೇಕರ ಹಸ್ತಾಕ್ಷರಗಳನ್ನು ಶೆಟ್ಟರು ಸಂಗ್ರಹಿಸಿದ್ದರು. ಯಾವ ವಸ್ತುಯಾವ ದಾಖಲೆಯನ್ನು ಕೇಳಿದರೂನಾಗರಾಜ ಶೆಟ್ಟರು ಕಣ್ಮುಚ್ಚಿಕೊಂಡು ಸಹ ತೆಗೆದುಕೊಡುತ್ತಾರೆ ಎಂಬ ಮಾತು ನಮ್ಮೂರಿನಲ್ಲಿ ಜನಜನಿತ ವಾಗಿತ್ತು. ಅದಕ್ಕೆ ನಾನು ಸಹ ಸಾಕ್ಷಿ.

ನಮ್ಮ ಚಿಕ್ಕಮಗಳೂರು ಜಿಲ್ಲೆಯ ಸೀನಿಯರ್ ಪತ್ರಕರ್ತರಲ್ಲೊಬ್ಬರೆಂದರೆನಾಗರಾಜ ಶೆಟ್ಟರು. ಮೂವತ್ತರ ದಶಕದಲ್ಲಿಯೇ, 'ವಿಶ್ವ ಕರ್ನಾಟಕ', 'ತಾಯಿನಾಡುಪತ್ರಿಕೆಗಳಿಗೆ ಸುದ್ದಿ ಕಳುಹಿಸುತ್ತಿದ್ದರುವರದಿ ಬರೆಯುತ್ತಿದ್ದರು. ನಾಗರಾಜಶೆಟ್ಟರು ತರಿಸುತ್ತಿದ್ದಓದುತ್ತಿದ್ದ ಪತ್ರಿಕೆಗಳ-ನಿಯತಕಾಲಿಕಗಳಪುಸ್ತಕಗಳ ಪಟ್ಟಿ ಬಹಳ ದೊಡ್ಡದು. ಈಗಲೂ ಅವರ ಅಮೂಲ್ಯ ಗ್ರಂಥಾಲಯವನ್ನು ನೋಡಿದರೆಅವರು ಸಂಗ್ರಹಿಸಿದ್ದ ಮಾಹಿತಿ ನೋಡಿದರೆ ಅಚ್ಚರಿಯಾಗುತ್ತದೆ.

1970-1980-1990ರ ದಶಕಗಳಲ್ಲಿ ನವ್ಯ-ದಲಿತ-ಬಂಡಾಯಹೀಗೆ ಹೊಸ ವಿಚಾರಗಳ ಅಲೆ ಬಂದಾಗ ನಮ್ಮೊಂದಿಗೆ ಶೆಟ್ಟರು ಸಕ್ರಿಯವಾಗಿ ಸಂವಾದ-ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹೊಸ ಪರಿಕಲ್ಪನೆಗಳಿಗೆವೈಜ್ಞಾನಿಕ ಸಂಗತಿಗಳಿಗೆ ಶೆಟ್ಟರು ಮುಕ್ತ ಮನಸ್ಸಿನಿಂದ ಸ್ಪಂದಿಸುತ್ತಿದ್ದರು. ನಾವೆಲ್ಲ ಅವರ ಕಣ್ಣೆದುರಿಗೇ ಹುಟ್ಟಿ ಬೆಳೆದವರಾದರೂಒಂದು ವಯಸ್ಸು ದಾಟಿದ ಮೇಲೆಬಹುವಚನದಲ್ಲಿ - ಗೌರವ ಪೂರ್ಣವಾಗಿ ಮಾತನಾಡಿಸುತ್ತಿದ್ದರು. 

ಮನಸ್ಸು ಮಾಡಿದ್ದರೆನ್ಯಾಯವಾದ ಮಾರ್ಗದಲ್ಲಿಯೇ ತುಂಬ ಆಸ್ತಿ-ಪಾಸ್ತಿ ಜಮೀನು ಮಾಡಬಹುದಿತ್ತು. ಆದರೆನಾಗರಾಜ ಶೆಟ್ಟರು ಭೌತಿಕ ಆಸ್ತಿಗೆ ಗಮನ ಕೊಡದೆಕಲೆ-ಸಾಹಿತ್ಯ-ಸಂಸ್ಕೃತಿ-ಶಿಸ್ತು-ಅಧ್ಯಾತ್ಮ-ಪರಿಶ್ರಮಗಳಿಗೆ ಆದ್ಯತೆ ನೀಡಿದ್ದರುಎಂಬುದು ಅವರ ಬಗೆಗಿನ ನನ್ನ ಗೌರವವನ್ನು ಹೆಚ್ಚಿಸಿದೆ.
                                                          














         
 - ಅಪೂರ್ವ, ಅಜ್ಜಂಪುರ
ದೂರವಾಣಿ : 94810 75410 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಅಜ್ಜಂಪುರ ಸೀತಾರಾಂ