88. ಅಜ್ಜಂಪುರದಲ್ಲಿ ಕೃಷಿ ಸ್ಥಿತ್ಯಂತರಗಳು – ಒಂದು ಸ್ಥೂಲ ನೋಟ
ಊರಿನ ಬೆಳವಣಿಗೆಯಲ್ಲಿ ಬೇಸಾಯದ ಪಾತ್ರವೂ ಪ್ರಮುಖವಾದುದೇ. ಈ ವಿಷಯವನ್ನು ಕುರಿತಂತೆ, ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಅಜ್ಜಂಪುರದಲ್ಲೇ ನೆಲೆಸಿರುವ ಮಿತ್ರ ಅಪೂರ್ವ ಅಜ್ಜಂಪುರ ಅವರು ಜುಲೈ ತಿಂಗಳ ಈ ಸಂಚಿಕೆಯನ್ನು ಸಿದ್ಧಪಡಿಸಿರುವವರು ಮಿತ್ರ ಅಪೂರ್ವ ಅಜ್ಜಂಪುರ. ಅವರ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ತಮ್ಮ ವೃತ್ತಿಜೀವನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅನೇಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿ, ರೈತರಿಗೆ ಸರ್ಕಾರ ನೀಡಿದ ಸವಲತ್ತುಗಳನ್ನು ಒದಗಿಸುವುದರ ಜತೆಗೇ, ಕೃಷಿಯ ಏರಿಳಿತಗಳನ್ನು, ಬದಲಾವಣೆಗಳನ್ನು ಕಂಡವರು. ನಾನು ಆಗೀಗ ಅಜ್ಜಂಪುರಕ್ಕೆ ಹೋದಾಗ ಅವರೊಂದಿಗೆ ಸುತ್ತಮುತ್ತಣ ಗ್ರಾಮಗಳಿಗೆ ಹೋಗುವುದುಂಟು. ಅಲ್ಲೆಲ್ಲ ಅವರನ್ನು ಆತ್ಮೀಯತೆಯಿಂದ ಮಾತನಾಡಿಸುವ ಜನರ ಅಭಿಮಾನವನ್ನು ಕಂಡಿದ್ದೇನೆ. ರೈತರೊಂದಿಗಿನ ಘನಿಷ್ಠ ಸಂಪರ್ಕದಿಂದಾಗಿ ರೈತರು ಅವರನ್ನು ಮೆಚ್ಚಿರುವುದು ವ್ಯಕ್ತವಾಗುತ್ತದೆ.
ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ - 99866 72483
ಈ-ಮೈಲ್ - shankarajjampura@gmail.com
--------------------------------------------------------------------------------------------------------------------------
ಅಜ್ಜಂಪುರದಲ್ಲಿ ಕೃಷಿ ಸ್ಥಿತ್ಯಂತರಗಳು – ಒಂದು ಸ್ಥೂಲ ನೋಟ
- ಅಪೂರ್ವ ಅಜ್ಜಂಪುರ
ಹಲುವೆ ಉಳುಮೆ ಜೀವನಸಂಗಾತಿಯೊಂದಿಗೆ |
ಹರಡಿ ನಿಂತ ಕಡಲೆ ಬೆಳೆ |
ಎಪ್ಪತ್ತರ ದಶಕದಲ್ಲಿ ಈರುಳ್ಳಿ ಬೆಳೆದೆ
ಅಜ್ಜಂಪುರದ ರೈತರ ಕಣ್ಣೀರು ಎಂಬ ರಾಜ್ಯಮಟ್ಟದ ಸುದ್ದಿಯಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.
ಈರುಳ್ಳಿ ಫಸಲು ಸಮೃದ್ಧವಾಗಿ ಬಂದಿತ್ತು. ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಪಾತಾಳಕ್ಕೆ ಇಳಿದಿತ್ತು.
ಮತ್ತೇ ಹಾಗೆಯೇ ಮೇಲೇರಿ ರೈತರಿಗೆ ಖುಷಿ ತಂದಿತ್ತು. ಇದು ಆಗಿದ್ದು 1975-76ರ
ತುರ್ತುಪರಿಸ್ಥಿತಿಯ ಹೇರಿಕೆಯ ಕಾಲದಲ್ಲಿ. ಮಸಾಲೆ ದೋಸೆಯಲ್ಲಿ ಈರುಳ್ಳಿ ಕಾಣೆಯಾಗಿತ್ತು.
ಹೋಟೆಲುಗಳಲ್ಲಿ ಈರುಳ್ಳಿ ದೋಸೆಯನ್ನು ತಿಂಡಿಗಳ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಈರುಳ್ಳಿ ಬೆಳೆ ಬಹುಪಾಲು ಅದೃಷ್ಟಲಕ್ಣ್ಮಿಯಾಗಿ ನಮ್ಮ ರೈತರಿಗೆ ಒಲಿದಿದ್ದು ಅವರ ಆರ್ಥಿಕ ಸ್ಥಿತಿ-ಗತಿ
ಸುಧಾರಿಸಲು ಕಾರಣವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.
ಅಜ್ಜಂಪುರ ಧನಿಯಾ ಎಂದು ಸುಪ್ರಸಿದ್ಧವಾದ
ಕೊತ್ತಂಬರಿ ಬೆಳೆ ಗತಕಾಲದ ವೈಭವದ ನೆನಪಾಗಿದೆ. ಈ ಬೆಳೆಯ ಕೃಷಿ ನಾಮಾವಶೇಷವಾಗಿತ್ತು.
ಮೆಣಸಿನಕಾಯಿ ಬೆಳೆಯುವುದನ್ನು ರೈತರು ಇಂದಿಗೂ ಕೈಬಿಟ್ಟಿಲ್ಲ. ಜೋಳ, ರಾಗಿ, ಕಡಲೆಕಾಯಿ ಬೆಳೆಗಳ
ಕೃಷಿ ಅತ್ಯಂತ ವಿರಳವಾಗಿದೆ. ಕೆಂಪುಗೋಡಿನಲ್ಲಿ ಮೆಕ್ಕೆ ಜೋಳದ ಕೃಷಿ ಕಾಲಿಟ್ಟಿದೆ. ಹಿಂಗಾರಿನಲ್ಲಿ
ಜೋಳ ಕಡಲೆಗಳ ಬೆಳೆಗಳನ್ನು ಈ ಭಾಗದ ರೈತರು ಪ್ರಧಾನ ಬೆಳೆಯಾಗಿ ರೂಢಿಸಿಕೊಂಡಿದ್ದಾರೆ. ಅಲ್ಲಲ್ಲಿ
ಕಾಣುತ್ತಿದ್ದ ಕುಸುಬೆ, ಗೋಧಿಗಳ ವಿಳಾಸವೇ ಇಲ್ಲ. ಅವರೆಕಾಯಿ ಬೆಳೆಯನ್ನು ರಾಗಿಬೆಳೆಯಲ್ಲಿ
ಅಕ್ಕಡಿಯಾಗಿ ಬೆಳೆಯತ್ತಿದ್ದ ದಿನಗಳಿದ್ದವು. ಈಗ ಅದು ಕೂಡ ವಿರಳವಾಗಿದೆ. ಅವರೆಕಾಯಿಯ ಪರಿಮಳ
ಅಷ್ಟಾಗಿ ಘಮಘಮಿಸುತ್ತಿಲ್ಲ.
ಗಾತ್ರವಾರು ಈರುಳ್ಳಿ ವಿಂಗಡಣೆಯ ಕಾರ್ಯ |
ಈ ರೀತಿಯ ಕೃಷಿ ಪದ್ಧತಿಯ ಸ್ಥಿತ್ಯಂತರ ಅಜ್ಜಂಪುರಕ್ಕೆ ಮಾತ್ರ ಸೀಮಿತವೇನಲ್ಲ. ಎರೆನಾಡಿನ ಯಾವುದೇ ಭಾಗಕ್ಕೆ ಹೋದರೂ ಈ ಸ್ಥಿತ್ಯಂತರದ ಕಥೆಯನ್ನು ಕೇಳಬಹುದು. ಮುಂಗಾರಿನಲ್ಲಿ ಈರುಳ್ಳಿ ಬೆಳೆಯು ನಮ್ಮ ಭಾಗದ ರೈತರ ಆರ್ಥಿಕ ಜೀವನಾಡಿಯಾಗಿದೆ.
ಟ್ರಾಕ್ಟರ್ ನಿಂದ ಈರುಳ್ಳಿ ಬಿತ್ತನೆಗೆ ಸಿದ್ಧತೆ |
ಈರುಳ್ಳಿ ಸಂಗ್ರಹ |
ನಾಡಿನ ಎಲ್ಲ ರೈತರಂತೆಯೇ ಈ ಭಾಗದ ರೈತರೂ ಹೊಸ
ಬಗೆಯ ಕೃಷಿಗೆ ಹೊಂದಿಕೊಂಡಿದ್ದಾರೆ. ಮೊದಲಿಗಿಂತ ಬದಲಾದ ಕೃಷಿಯಿಂದಾಗಿ ಜನರ ಜೀವನ ಮಟ್ಟವೂ
ಸುಧಾರಿಸಿದೆ. ಆದರೆ ನಮ್ಮದು ಸಂಪೂರ್ಣ ಮಳೆಯಾಶ್ರಿತ ಕೃಷಿ. ಜೂನ್ ನಿಂದ ಅಕ್ಟೋಬರ್ ವರೆಗಿನ
150ದಿನಗಳ ಅವಧಿಯಲ್ಲಿ, ವರುಣನ ಕೃಪೆಯಲ್ಲಿ ರೈತನ ಜೀವನ ನಿಂತಿದೆ. ವ್ಯವಸಾಯವೊಂದು ಮಳೆಯೊಂದಿಗಿನ
ಜೂಜಾಟದಂತೆ ಎಂದರೆ ಅತಿಶಯೋಕ್ತಿಯಲ್ಲ. ಅದರಲ್ಲೂ ಮುಂಗಾರು ಮಳೆ ಕೈಹಿಡಿಯದಿದ್ದರೆ ರೈತರು
ಕಂಗಾಲಾಗುತ್ತಾರೆ.
ಸಣ್ಣ ರೈತರು ಹೈನುಗಾರಿಕೆ ರೂಢಿಸಿಕೊಂಡು ಜೀವನೋಪಾಯಕ್ಕೆ ದಾರಿ
ಮಾಡಿಕೊಂಡಿರುತ್ತಾರೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಹಸು, ಎಮ್ಮೆಗಳನ್ನು ಪಾಲನೆಮಾಡುವುದು
ಸಣ್ಣ ರೈತರ ಪಾಲಿಗೆ ವರದಾನವಾಗಿದೆ. ಒಂದು ಕಾಲದಲ್ಲಿ ಹೇಳುತ್ತಿದ್ದಂತೆ “ಬೇಸಾಯ, ನೀ ಸಾಯ, ಮನೆ
ಮಂದಿಯೆಲ್ಲ ಸಾಯ” ಎಂಬಂಥ ನಾಣ್ಣುಡಿಯಾಗಿ ಉಳಿದಿಲ್ಲ ಇಂದಿನ ಕೃಷಿಜೀವನ. ಸುಧಾರಣೆ, ಪ್ರಗತಿ, ಸಾಕಷ್ಟು ಆಗಿದೆ. ರೈತ
ವೃತ್ತಿಯಲ್ಲಿ, ಜೀವನಮಟ್ಟದಲ್ಲಿ. ಈ ಮಾತಿಗೆ ಅಜ್ಜಂಪುರ ಭಾಗದ ಕೃಷಿ ಚಿತ್ರಣವೂ ಹೊರತಾಗಿಲ್ಲ.
ರಾಸಾಯನಿಕ ಗೊಬ್ಬರ ಚೆಲ್ಲುತ್ತಿರುವ ರೈತ |
-0-0-0-0-0-0-0-0-0-0-0-0-0-0-0-0-0-0-0-0-
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ