ಪೋಸ್ಟ್‌ಗಳು

ಅಜ್ಜಂಪುರದ ಟಿ.ಬಿ. ರಸ್ತೆಯಲ್ಲಿರುವ ಈಶ್ವರನ ಗುಡಿ - ಅಪೂರ್ವ ಅಜ್ಜಂಪುರ

ಇಮೇಜ್
ಪ್ರತಿ‌ ವರ್ಷ ಮಹಾಶಿವರಾತ್ರಿ‌ ಬಂದಿತು ಅಂದರೆ ಶಿವಾಲಯ, ಈಶ್ವರನ ದೇವಸ್ಥಾನಗಳಿಗೆ ಆಸ್ತಿಕರು ಭೇಟಿ ಕೊಡುವುದು ಸಾಮಾನ್ಯ. ಅಜ್ಜಂಪುರದಲ್ಲಿ‌ ಕೋಟೆ ಸೋಮೇಶ್ವರ ದೇವಸ್ಥಾನಕ್ಕೆ ಅಂದು‌ ರಾತ್ರಿ ಭಕ್ತಸಾಗರವು ಹರಿದು ಬರುವುದು‌ ದೃಶ್ಯವು ಪ್ರತಿ ವರ್ಷವೂ ಸಾಮಾನ್ಯ.  ಎರೆಹೊಸೂರು‌ ರಸ್ತೆಯ ಪಶ್ಚಿಮಕ್ಕೆ ಇರುವ ಮತ್ತೊಂದು ರಸ್ತೆಯಲ್ಲಿ ‌ಮಲ್ಲೇದೇವರು ಎಂಬ ಜಂಗಮ ಪುರೋಹಿತರ ತೋಟವಿದೆ. ಅಲ್ಲಿ ಒಂದು ಈಶ್ವರ ದೇವಾಲಯ ಇದೆ.  ಅಲ್ಲಿಗೂ ಶಿವರಾತ್ರಿಯಂದು‌ ಊರಿನ ಜನರು ಹೋಗುತ್ತಾರೆ.  ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ‌ನಗರೇಶ್ವರನ ಹೆಸರಲ್ಲಿ‌ ಈಶ್ವರ ಲಿಂಗವಿದೆ.‌ ಇದಲ್ಲದೆ ಪೇಟೆಯ ಬಸವಣ್ಣ ದೇವಾಲಯದಲ್ಲಿ ನಂದಿಯ ಜೊತೆಗೆ ಇರುವ ಉಮಾಮಹೇಶ್ವರರ ಉತ್ಸವಮೂರ್ತಿ ಇದೆ. ಎಲೆಮರೆಯ ಕಾಯಿಯಂತೆ ಇರುವ, ಅಷ್ಟು ಬೆಳಕಿಗೆ ಬಾರದ ಇನ್ನೂ ಒಂದು ಈಶ್ವರನ ಗುಡಿ ಟಿ.ಬಿ.ರಸ್ತೆಯಲ್ಲಿ ಇದೆ. ಪ್ರತಿ ವರ್ಷ ಮಹಾಶಿವರಾತ್ರಿಯ ದಿನದಂದು  ಈ ಗುಡಿಗೆ ಗೊತ್ತಿರುವ ಕೆಲವೇ ಭಕ್ತರು ಭೇಟಿ ನೀಡುತ್ತಾರೆ. ಈ ಗುಡಿಯ ಬಗ್ಗೆ ಮಾಹಿತಿಯನ್ನು ಪ್ರಥಮ ಬಾರಿಗೆ ನಮ್ಮ ಬ್ಲಾಗಿನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟಾಫೀಸ್ ರಸ್ತೆ ಮತ್ತು ಟಿ.ಬಿ.ರಸ್ತೆಗಳು ಕತ್ತರಿಸುವ      ಒಂದು ಮೂಲೆಗೆ ಇರುವ  ವಿಶಾಲವಾದ ಜಾಗದಲ್ಲಿ ಎನ್.ಟಿ.ಜಿ.ಎಂ.ಎಸ್. ಶಾಲೆ ಇದ್ದದ್ದು ಹಳೆಯ ತಲೆಮಾರಿನವರಿಗೆ ಗೊತ್ತಿರುವ ಸಂಗತಿ. ನ್ಯೂ ಟೈಪ್ ಗರ್ಲ್ಸ್ ಮಿ...
ಇಮೇಜ್
ಗೆಳೆಯ ಅಪೂರ್ವ ಅಜ್ಜಂಪುರ ಅವರು ಈ ಬ್ಲಾಗ್ ನ ಆರಂಭದಿಂದಲೂ ಲೇಖನಗಳನ್ನು ಬರೆದು ಸಹಕರಿಸಿದ್ದಾರೆ. ಇತ್ತೀಚೆಗೆ ಅವರು ಅಜ್ಜಂಪುರ ಬದಲಾದ ಪರಿಯನ್ನು ದಾಖಲಿಸಿದ ಬರಹವು ಫೇಸ್ ಬುಕ್ ನಲ್ಲಿ ಚಿತ್ರಗಳ ಸಹಿತ ಪ್ರಕಟವಾಗಿದೆ. ಅದು ಇಲ್ಲಿಯೂ ದಾಖಲಾಗಲಿ ಎಂದು ಪ್ರಕಟಿಸಲಾಗಿದೆ.  - ಶಂಕರ ಅಜ್ಜಂಪುರ ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ಅಜ್ಜಂಪುರ ಗತವೈಭವ ಮತ್ತು ವರ್ತಮಾನ ಅಪೂರ್ವ ಅಜ್ಜಂಪುರ ಗತವೈಭವ ! ಭಗವದ್ಗೀತೆಯನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದ್ದ ಸ್ವಾಮಿ ಶಂಕರಾನಂದರು (ಶಿವಾನಂದಾಶ್ರಮದ ಸ್ಥಾಪಕರು), ಅಜ್ಜಂಪುರ ಸೀತಾರಾಮ್ ( 'ಕ್ಲಾಸಿಕ್' ಸಣ್ಣಕತೆ 'ನಾನು ಕೊಂದ ಹುಡುಗಿ'ಯ ಕತೆಗಾರ ಆನಂದ), ಖ್ಯಾತ ಪರಿಸರ ತಜ್ಞ, ಲೇಖಕ ಅಜ್ಜಂಪುರ ಕೃಷ್ಣಸ್ವಾಮಿ( ರಾಜ್ಯ ಅರಣ್ಯ ಇಲಾಖೆಯ ಅತ್ಯುನ್ನತ ಅಧಿಕಾರಿಯಾಗಿದ್ದರು), ಅಜ್ಜಂಪುರ ಜಿ.ಸೂರಿ(ಖ್ಯಾತ ಕಾದಂಬರಿಕಾರ,ತೆಲುಗು ಕಾದಂಬರಿಗಳ ಅನುವಾದಕ), ಸ್ವಾತಂತ್ರ್ಯ ಹೋರಾಟಗಾರ ಎಸ್.ಸುಬ್ರಹ್ಮಣ್ಯ ಶೆಟ್ಟಿ, ಖ್ಯಾತ ದಾನಿಗಳಾದ ಶೆಟ್ರು ಸಿದ್ದಪ್ಪ ಮತ್ತು ಜೋಗಿ ತಿಮ್ಮಯ್ಯ ಇವರಿಂದಲೂ ಅಜ್ಜಂಪುರವು  ನಾಡಿನ ಜನರಿಗೆ ಸುಪರಿಚಿತ. ಮೈಸೂರು ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರು ಅಜ್ಜಂಪುರಕ್ಕೆ ಭೇಟಿ ನೀಡಿದ್ದು ಕೂಡ ಒಂದು ಐತಿಹಾಸಿಕ ಸಂಗತಿ. ಆ ಸಂದರ್ಭದಲ್ಲಿ ಪುರ ಪ್ರಮುಖರು ಸಾಂಪ್ರದಾಯಿಕ ದಿರಿಸಿನೊಂದಿಗೆ ಇರುವ ಚಿತ್ರ ಹಿಂದಿನ ಸಂಚಿಕೆಗಳಲ್ಲಿ...
 ನನ್ನೂರು ಅಜ್ಜಂಪುರದ ಅತ್ಯಂತ ಹಿರಿಯ ಚುನಾಯಿತ ಪ್ರತಿನಿಧಿ ಶ್ರೀ ಗೋಪಾಲಪ್ಪ ಒಬ್ಬರು ಇವರ ಪರಿಚಯ ಈಗಿನ ಬಹುತೇಕ ಜನರಿಗೆ ತಿಳಿದೇ ಇಲ್ಲ ಅಜ್ಜಂಪುರ ಪುರಸಭೆಯ ಇತಿಹಾಸದಲ್ಲಿ ಪ್ರಸ್ತುತ ಇರುವ ಅತಿ ಹಿರಿಯ ಚುನಾಯಿತ ಪ್ರತಿನಿಧಿ ಎಂದರೆ ಶ್ರೀ ಗೋಪಾಲಪ್ಪ ಇವರ ಕಿರು ಪರಿಚಯ ಈ  ಬರಹದ ಉದ್ದೇಶ  ರಾಜಕಾರಣಕ್ಕೆ ವಿದ್ಯಾವಂತರು ತೊಡಗಿಸಿಕೊಳ್ಳದ  ಕಾಲ ಒಂದಿತ್ತು ದಿವಂಗತ ಶೆಟ್ರು ಸಿದ್ದಪ್ಪನವರ ನಂತರ ಪುರಸಭೆಯ ಅಧ್ಯಕ್ಷರಾದ ಶ್ರೀಕರಿಸಿದ್ದಪ್ಪ  ಇವರು ಬಿ. ಎ., ಎಲ್. ಎಲ್. ಬಿ., ಪದವೀಧರರಾಗಿದ್ದರೆ ನಂತರ ಪದವೀಧರ ಚುನಾಯಿತ  ಪ್ರತಿನಿಧಿಯನ್ನು ನೋಡಲು ಸುಮಾರು 40 ವರ್ಷಗಳ ಕಾಯ ಬೇಕಾಯಿತು 1993 ರಲ್ಲಿ ಚುನಾಯಿತರಾದ ಬಿಕಾಂ ಪದವೀಧರರಾದ ಎಸಿ ಚಂದ್ರಪ್ಪ ನಂತರದ ಅಧ್ಯಕ್ಷರಾದರೆ ಈ ನಡುವೆ ಡಿಪ್ಲೋಮಾ ಎಂಜಿನಿಯರಿಂಗ್ ಪದವೀಧರರಾದ ಗೋಪಾಲಪ್ಪನವರು 1967 ರಲ್ಲಿ ಚುನಾಯಿತರಾಗಿ 69 ರಲ್ಲಿ ಪುರಸಭೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ನನ್ನ ತಂದೆಯ ಬಾಲ್ಯ ಸ್ನೇಹಿತರಾಗಿದ್ದು ಪ್ರಸ್ತುತ ಇವರಿಗೆ 85 ವರ್ಷ ವಯಸ್ಸಾಗಿದ್ದು ಇತ್ತೀಚೆಗೆ ಅವರನ್ನು ಭೇಟಿ ಮಾಡಿದಾಗ ತಮ್ಮ ಕಾಲದ ರಾಜಕೀಯ ದಿನಗಳನ್ನು ನನ್ನೊಂದಿಗೆ ಹಂಚಿಕೊಂಡರು.  ಡಿಪ್ಲೋಮೋ ಅಂತಿಮ ವರ್ಷದ ಪರೀಕ್ಷೆಯನ್ನು ಮುಗಿಸಿ ಊರಿಗೆ ಬಂದಾಗ ಊರಿನಲ್ಲಿ ಪುರಸಭೆ ಚುನಾವಣೆ ಹೊಸ್ತಿಲಿನಲ್ಲಿದ್ದು ಸ್ನೇಹಿತರು ಮತ್ತು ಬಂಧುಗಳು ಒತ್ತಾಯಕ್ಕೆ ಮಣಿದು ಚುನಾವಣೆಗೆ ನಿಂ...

128) ಅಪರೂಪದ ವೈದ್ಯ ಡಾ. ನಾಗರಾಜ್

ಇಮೇಜ್
ಐದು ದಶಕಗಳ ಸಾರ್ಥಕ ಸೇವೆ                                     - ಅಪೂರ್ವ ಅಜ್ಜಂಪುರ ಅಜ್ಜಂಪುರದ ಜಿ.ಎಂ. ಬಸಪ್ಪನವರ ಕಿರಾಣಿ ಅಂಗಡಿ ಬೆಂಚಿನ ಮೇಲೆ ಬ್ರಿಟಿಷ್‌   ಜೇಮ್ಸ್ ಬಾಂಡ್ ಸಿನೆಮಾ ಖ್ಯಾತಿಯ ಶಾನ್ ಕಾನರಿಯಂತೆ(Sean Connery) ದಟ್ಟ ಹಾಗೂ ದಪ್ಪವಾದ ಕಪ್ಪು‌ಹುಬ್ಬಿನ ಒಬ್ಬ ವ್ಯಕ್ತಿ ಕುಳಿತಿದ್ದರು. ಬಿಳಿವರ್ಣದ ಅವರಿಗೆ ಅವರ ವಿಶಿಷ್ಟ ಹುಬ್ಬುಗಳು ಎರಡು ಕಮಾನುಗಳ ಆಕಾರದಲ್ಲಿ ದೃಷ್ಟಿಬೊಟ್ಟುಗಳಂತೆ ಎದ್ದು ಕಾಣಿಸುತ್ತಿದ್ದವು.  ಪೂರ್ಣ ಮುಖ‌ಕ್ಷೌರ ಮಾಡಿಕೊಂಡಿದ್ದ ಆ ವ್ಯಕ್ತಿ ಅಚ್ಚ  ಬಿಳಿ ಬಣ್ಣದ ತುಂಡು ತೋಳಿನ ಅಂಗಿ  ಮತ್ತು ಕಡು ಛಾಯೆಯ ಪ್ಯಾಂಟ್ ಧರಿಸಿದ್ದರು .  ಒಂದು ಮಳಿಗೆಯನ್ನು ತಮ್ಮ  ಕ್ಲಿನಿಕ್ಕಿಗಾಗಿ ಬಾಡಿಗೆ ಪಡೆಯಲು ಬಸಪ್ಪನವರ ಬಳಿ ಬಂದಿದ್ದರು. ಅವರ ಜೊತೆ ದಾವಣಗೆರೆಯಿಂದ ಒಬ್ಬ ವ್ಯಕ್ತಿ (ಶೆಟ್ರು ಸಿದ್ದಪ್ಪನವರ ಸಂಬಂಧಿಯಂತೆ) ಬಂದಿದ್ದರು.  ಬೆಂಚಿನ ಮೇಲೆ ಕುಳಿತಿದ್ದ ವ್ಯಕ್ತಿಯೇ ಬಿ.ಎಸ್. ನಾಗರಾಜ್. ಅವರು ದಾವಣಗೆರೆಯಲ್ಲಿ ಎಂ.ಬಿ.ಬಿ. ಎಸ್. ಮಾಡಿ ಕೆಲವೇ ವರ್ಷಗಳಾಗಿದ್ದವು. ಶೆಟ್ಟರ ಸಂಬಂಧಿಯಾದ ವ್ಯಕ್ತಿಯು ನಿಮ್ಮ ಮಳಿಗೆಯನ್ನು ನಾಗರಾಜ್ ಡಾಕ್ಟರಿಗೆ ಬಾಡಿಗೆ ಕೊಡಿ ಎಂದು ಶಿಫಾರಸು ಮಾಡಿದರು.  ಈ ಹಿಂದೆ ಅದೇ ಮಳಿಗೆಯಲ್ಲಿ ...

128) ಸರಳ ವ್ಯಕ್ತಿತ್ವದ ಅಜ್ಜಂಪುರದ ಜನಪ್ರಿಯ ವೈದ್ಯ ಡಾ| ಬಿ.ಎಸ್.ನಾಗರಾಜ್

 ವೈದ್ಯ ವೃತ್ತಿಯನ್ನು ಸೇವೆ ಎಂದು ಪರಿಗಣಿಸಿ ದುಡಿದು ಹೆಸರು ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸಿದ ಅನೇಕ ವೈದ್ಯ ಮಹನೀಯರು ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದವರೇ ಆಗಿದ್ದಾರೆ. ಅದಕ್ಕೆ ವೈದ್ಯಕೀಯ ವೃತ್ತಿಗೆ ಅಂದು ಇದ್ದ ಗೌರವ ಮತ್ತು ಘನತೆಗಳೇ ಕಾರಣ.  ಗ್ರಾಮೀಣ ಪ್ರದೇಶಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ದುಡಿದ ವೈದ್ಯರು, ಖಾಸಗಿ ವಲಯದ ವೈದ್ಯರು ಕೂಡ ಕೇವಲ ಎಂ ಬಿ ಬಿ ಎಸ್ ಮಾಡಿ ಜನರ ಆರೋಗ್ಯವನ್ನು ಕಾಪಾಡಿದವರು. ಅಂಥ ವೈದ್ಯರು ಜನರ ಸ್ಮರಣೆಯಲ್ಲಿ ಎಂದಿಗೂ ಇರುತ್ತಾರೆ. ಹಾಗೆ ನನ್ನ ಊರು ಅಜ್ಜಂಪುರದಲ್ಲಿ ನಾನು ನೆನಪಿಸಿಕೊಳ್ಳುವ ಇಬ್ಬರು ವೈದ್ಯರೆಂದರೆ ಹಿಂದೆ ಇದ್ದ ಹೋಮಿಯೋಪತಿ ವೈದ್ಯ ಡಾಕ್ಟರ್ ಕರೀಮ್ ಖಾನ್ ಮತ್ತು ಸುಮಾರು ಅರ್ಧ ದಶಕಗಳ ಕಾಲ ವೈದ್ಯಕೀಯ ಸೇವೆಯನ್ನು ನೀಡಿದ ಡಾ. ಬಿ. ಎಸ್. ನಾಗರಾಜ್.  ಡಾ. ಬಿ.ಎಸ್. ನಾಗರಾಜ್ ಅಲ್ಪ ಕಾಲದ ಅಸ್ವಸ್ಥತೆಯ ನಂತರ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕೋಟೆಯಲ್ಲಿ ವಾಸವಾಗಿದ್ದ ಈ ವೈದ್ಯರು ನಮ್ಮ ಕುಟುಂಬ ಮಾತ್ರವಲ್ಲದೆ ಊರಿನ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು.  ಕಪ್ಪು ಪ್ಯಾಂಟು ಬಿಳಿಯ ಬುಷ್ ಶರ್ಟಿನಲ್ಲಿ ಇರುತ್ತಿದ್ದ ಎತ್ತರದ ನಿಲುವಿನ ಡಾ. ನಾಗರಾಜ್ ಎಂದೂ ಆಡಂಬರಕ್ಕಾಗಲೀ, ದುಬಾರಿ ವೆಚ್ಚದ ಚಿಕಿತ್ಸೆಗಳಿಗಾಗಲೀ ಗಮನ ನೀಡಿದವರಲ್ಲ.  ಅವರು ಅಜ್ಜಂಪುರಕ್ಕೆ ಬಂದ ದಿನಗಳಲ್ಲಿ ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯನವರು ನೀಡಿದ ಸಹಕಾರದ ಬಗ್ಗೆ ವಿಶೇ...

127) ಹಿಮ್ಸ್ ನಿರ್ದೇಶಕರಾಗಿ ಡಾ| ಬಿ ರಾಜಣ್ಣ

ಇಮೇಜ್
ಮಿತ್ರರಾದ ಶ್ರೀ ಮಲ್ಲಿಕಾರ್ಜುನ ಅಜ್ಜಂಪುರ ಇವರು ಅಜ್ಜಂಪುರದ ಮತ್ತೊಂದು ಪ್ರತಿಭೆಯನ್ನು ಗುರುತಿಸಿ ಫೇಸ್ಬುಕ್ಕಿನಲ್ಲಿ ಲೇಖನ ಪ್ರಕಟಿಸಿದ್ದರು. ಅದನ್ನು ಇಲ್ಲಿಯೂ ಹಂಚಲಾಗಿದೆ. ಹೀಗೆ ನಿಮಗೆ ತಿಳಿದಿರುವ ಅಜ್ಜಂಪುರದ ಹೊಸ ಇಲ್ಲವೇ ಹಳೆಯ ಸಾಧಕರ ಬಗ್ಗೆ ಚಿತ್ರ ಸಹಿತ ಒಂದು ಚಿಕ್ಕ ಪರಿಚಯ ಕಳಿಸಿಕೊಡಿ. ಅದನ್ನು ಪ್ರಕಟಿಸಬಹುದು. ಶಂಕರ ಅಜ್ಜಂಪುರ ಸಂಪಾದಕ ಅಂತರಜಾಲದಲ್ಲಿ ಅಜ್ಜಂಪುರ         - ೦-೦-೦-೦-೦-೦-೦-೦- ಅಭಿನಂದನೆಗಳು  ಡಾಕ್ಟರ್ ರಾಜಣ್ಣ ! - ಮಲ್ಲಿಕಾರ್ಜುನ ಅಜ್ಜಂಪುರ ನನ್ನೂರಿನ  ಅಜ್ಜಂಪುರದಲ್ಲಿ ಪ್ರಾಥಮಿಕ ಶಾಲೆಯನ್ನು ಅಭ್ಯಾಸ ಮಾಡಿದ ಬಾಲ್ಯದ ಮಿತ್ರ ರಾಜಣ್ಣ ಹಾಸನದ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾಗಿ ಪದಗ್ರಹಣ ಮಾಡಿರುತ್ತಾರೆ. ಇದು ನಮ್ಮೂರಿಗೆ ಹೆಮ್ಮೆ ತರುವ ವಿಷಯವಾಗಿದೆ ಪ್ರಾಥಮಿಕ ಶಿಕ್ಷಣವನ್ನು ಅಜ್ಜಂಪುರದ  ಶಾಲೆಯಲ್ಲಿ ಮಾಧ್ಯಮಿಕ  ಮತ್ತು ಪ್ರೌಢಶಾಲೆಯನ್ನು ಸಹೋದರರ ಜೊತೆಯಲ್ಲಿ ತೆರಳಿ ಚಾಮರಾಜ ನಗರದಲ್ಲಿ ಮುಗಿಸಿದ ರಾಜಣ್ಣ ಎಂಬಿಬಿಎಸ್ ವಿದ್ಯಾಭ್ಯಾಸವನ್ನು ದಾವಣಗೆರೆಯಲ್ಲಿ ನಂತರ ಜನರಲ್ ಸರ್ಜರಿ ಸ್ನಾತಕೋತ್ತರ ಪದವಿಯನ್ನು ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿಯೂ ಮುಗಿಸಿ ಸೂಪರ್ ಸ್ಪೆಷಾಲಿಟಿ ತಜ್ಞತೆಯನ್ನು ಬೆಂಗಳೂರು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಪೂರೈಸಿದ ನಂತರ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ದಲ್ಲಿ ಸಹಾಯಕ...

126. ಅಪೂರ್ವ ಕಥೆ ಕವನಗಳ ಅವಲೋಕನ

ಇಮೇಜ್
ಗೆಳೆಯ ಅಪೂರ್ವ ಅಜ್ಜಂಪುರ ಇವರ "ಒಂದಷ್ಟು ಕಥೆಗಳು ಕವಿತೆಗಳು" - ಈ ಪುಸ್ತಕದ ಅವಲೋಕನವು ಇತ್ತೀಚೆಗೆ ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಅದರ ಅವಲೋಕನದ ವರದಿ ಇಲ್ಲಿದೆ.  ಅವರು ನನ್ನ ಮಿತ್ರರು ಎಂಬ ಅಭಿಮಾನ ಒಂದು ಕಡೆ ಇದ್ದರೆ, ಈ ಪುಸ್ತಕದ ಪ್ರಕಟಣಾಪೂರ್ವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾದುದು ಕೂಡ ನನಗೆ ಸ್ಮರಣೀಯ ಸಂಗತಿ.  ಊರ ಲೇಖಕನ ಪುಸ್ತಕವು ಊರಿನಲ್ಲೇ ಅವಲೋಕನಗೊಂಡಿರುವುದು ಕೂಡ ವಿಶೇಷ ಹೌದು! ಚಿತ್ರ - ವರದಿಗಳು ಇಲ್ಲಿವೆ. ಸಂಪಾದಕ ಶಂಕರ ಅಜ್ಜಂಪುರ ಅಂತರಜಾಲದಲ್ಲಿ ಅಜ್ಜಂಪುರ ******************************* "ಅಪೂರ್ವ ಬರೆದದ್ದು ಒಂದಷ್ಟಾದರೂ ಅವು ಅಪರೂಪದ ಸಣ್ಣಕತೆಗಳು, ಕವಿತೆಗಳು!" ಈ ಮಾತು ಹೇಳಿದವರು ಕನ್ನಡ ಪ್ರಾಧ್ಯಾಪಕರಾದ ಪ್ರೊ.ಮಹಾಲಿಂಗಪ್ಪ. ಸಂದರ್ಭ :  ಅಜ್ಜಂಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೪ರ ಮೇ ತಿಂಗಳ ೨೪, ಶುಕ್ರವಾರದಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿ ಮತ್ತು ಸ.ಪ್ರ.ದ.ಕಾಲೇಜು ಸಂಯುಕ್ತವಾಗಿ ಆಯೋಜಿಸಿದ 'ಒಂದಷ್ಟು ಕಥೆ, ಕವಿತೆಗಳು' ಒಂದು ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಅಭಿಪ್ರಾಯ ವ್ಯಕ್ತಪಡಿಸಿದರು. 'ಒಂದು ನಿಧಿಯ ಸುತ್ತ' ಕತೆಯಲ್ಲಿ ಜಾನಪದ, ಐತಿಹಾಸಿಕ ಹಿನ್ನೆಲೆಯಲ್ಲಿ ವರ್ತಮಾನದ ಪ್ರಸಂಗವು ಬಿಚ್ಚಿಕೊಳ್ಳುತ್ತದೆ. ಕತೆಯು ನಡೆಯುವ 'ಅಸಾವತಿ'ಯು ಗಂಗರ ...

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

ಇಮೇಜ್
ಇವರು ನಮ್ಮ ಹಿರಿಯರು ನಾಗರಾಜ್ ಎಂ.ಎನ್. ಅಜ್ಜಂಪುರದಲ್ಲಿ 60 70 ದಶಕದಲ್ಲಿದ್ದ ಪ್ರಾಥಮಿಕ ಶಾಲಾ ಅಧ್ಯಾಪಕರು. ಇವರಿಂದ ಕಲಿತ ಅನೇಕರು ಇಂದು ಉನ್ನತ ಸ್ಥಿತಿಯಲ್ಲಿದ್ದಾರೆ. ಅವರು ತಮ್ಮ ವೃತ್ತಿಯನ್ನು ಪ್ರೀತಿಸಿದ ಪರಿಣಾಮವೇ ಅದಕ್ಕೆ ಕಾರಣ. ಸ್ಪುರದ್ರೂಪಿಯಾಗಿದ್ದ ನಾಗರಾಜ ಮಾಸ್ತರರ ಕನ್ನಡ ಭಾಷೆ ತುಂಬಾ ಸೊಗಸಾಗಿರುತ್ತಿತ್ತು. ನನ್ನ ತಂದೆ ಅಜ್ಜಂಪುರ ಕ್ಷೇತ್ರಪಾಲಯ್ಯ  ಹಾಗೂ ನಾಗರಾಜ್ ಮಾಸ್ತರರು ಆಪ್ತ ಸ್ನೇಹಿತರು. ಅವರಿಬ್ಬರ ಅಭಿರುಚಿ ಮತ್ತು ವೈಚಾರಿಕತೆಗಳು ಸಮಾನವಾಗಿದ್ದರಿಂದ ಅವರ ಸ್ನೇಹ ಗಾಢವಾಗಿತ್ತು. ಒಮ್ಮೆ ಶಿಕ್ಷಣಾಧಿಕಾರಿಯೋರ್ವರು ಶಾಲೆಗೆ ಭೇಟಿ ನೀಡಿದಾಗ, ಇವರಿಬ್ಬರು ಸಡಗರದಿಂದ ಔತಣಕೂಟವನ್ನು ತಮ್ಮದೇ ವೆಚ್ಚದಲ್ಲಿ ಏರ್ಪಡಿಸಿದ್ದರು. ಅದು ಯಾವ ಪ್ರತಿಫಲವನ್ನು ಅಪೇಕ್ಷಿಸಿ ಅಲ್ಲ, ಬದಲಾಗಿ ಆ ಅಧಿಕಾರಿಯ ನಿಸ್ಪೃಹತೆಯನ್ನು ಮೆಚ್ಚಿ ತಮ್ಮ ಗೌರವವನ್ನು ಹಾಗೆ ಸಲ್ಲಿಸಿದ್ದರು. ಒಳ್ಳೆಯವರನ್ನು ಕೇವಲ ಮೆಚ್ಚಿದರೆ ಸಾಲದು, ತಮ್ಮ ಭಾವನೆಯನ್ನು ಅಭಿವ್ಯಕ್ತಗೊಳಿಸುವುದೂ ಮುಖ್ಯ ಎಂಬ ಪಾಠವನ್ನು ಕಾರ್ಯತಃ ಮಾಡಿ ತೋರಿದ್ದರು. ಇತ್ತೀಚೆಗೆ ಎಂ.ಎನ್. ನಾಗರಾಜರ ಮಗ ಶ್ರೀ ನರಸಿಂಹಸ್ವಾಮಿಯನ್ನು ದಾವಣಗೆರೆಯಲ್ಲಿ ಭೇಟಿ ಮಾಡಿದೆ. ಆಗ ಕಂಡ ನಾಗರಾಜ ಮಾಸ್ತರರ ಚಿತ್ರ ಸಹಿತ ಬರಹಕ್ಕಾಗಿ ಕೇಳಿದ್ದೆ. ಅದರಂತೆ ಅವರ ಬಗ್ಗೆ ನರಸಿಂಹಸ್ವಾಮಿ ನೀಡಿದ ವಿವರಗಳು ಕೆಳಗಿನಂತಿವೆ. ಶಂಕರ ಅಜ್ಜಂಪುರ ಸಂಪಾದಕ "ಅಂತರಜಾಲದಲ್ಲಿ ಅಜ್ಜ...

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

ಇಮೇಜ್
ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಗೆ ಉದಾಹರಣೆಯಾಗಿ ನಮ್ಮ ಸುತ್ತಮುತ್ತಲಿನಲ್ಲೇ ಅನೇಕ ಉದಾಹರಣೆಗಳು ದೊರೆಯುತ್ತವೆ. ಆದರೆ ಅದು ಅಮೂಲ್ಯ ಮದ್ದು ಹೌದು ಎಂದು ತಿಳಿಯಲು, ತಿಳಿಸಲು ಸಹೃದಯತೆ ಬೇಕಾಗುತ್ತದೆ. ಅಂಥ ಸಹೃದಯ ಮನೋಭಾವದ ಮಿತ್ರ ಅಪೂರ್ವ ಅಜ್ಜಂಪುರ   ಅವರು ಈ ಸಂಚಿಕೆಯಲ್ಲಿ ಅಪರೂಪದ ವಿದ್ವಾಂಸರನ್ನು ಸೂಕ್ತ ಮತ್ತು ಆಕರ್ಷಕ ಶೀರ್ಷಿಕೆಯೊಡನೆ ಪರಿಚಯಿಸಿದ್ದಾರೆ. ಅವರೇ ಅಜ್ಜಂಪುರ ಸಮೀಪದ ಗೌರಾಪುರದ. ಶ್ರೀ ಗೌ.ಮ. ಉಮಾಪತಿ ಶಾಸ್ತ್ರೀ. ಪ್ರಾಚೀನ ಗ್ರಂಥ ಸಂಪಾದನೆಯು ವಿದ್ವತ್ತನ್ನು ಬೇಡುತ್ತದೆ, ನಿಜ. ಅದೇ ಹೊತ್ತಿಗೆ ಅಂಥ ಸಾಹಿತ್ಯದಲ್ಲಿ ಆಸಕ್ತಿಯಿರುವವರಿಗೆ, ಉಮಾಪತಿಯವರಿದ್ದ ಕಾಲದಲ್ಲಿ ಈಗಿನ ಸೌಲಭ್ಯಗಳು ಇರಲಿಲ್ಲ. ಆದರೆ ಗ್ರಂಥ ಸಂಪಾದನೆಯಂಥ ಕ್ಲಿಷ್ಟಕಾರ್ಯದ ಬಗ್ಗೆ ಸಂಶೋಧಕರು ಇರುತ್ತಿದ್ದರು. ಅವರ ನೆರವು, ಮಾರ್ಗದರ್ಶನಗಳು ದೊರೆಯುತ್ತಿದ್ದ ದಿನಗಳು ಅವು. ಅದೇ ಪ್ರವೃತ್ತಿಯು ಇಂದಿಗೂ ಮುಂದುವರೆದಿರುವುದು ಅಭಿನಂದನೀಯ, ಶಾಸ್ತ್ರಿಗಳನ್ನು ಕುರಿತು ಅಧ್ಯಯನ ಮಾಡಿ ಪಿ.ಎಚ್.ಡಿ. ಪ್ರಬಂಧ ಮಂಡಿಸಿರುವ ಡಾ. ಕಾವ್ಯರ ಕೊಡುಗೆಯೂ ದೊಡ್ಡದು. ಉಮಾಪತಿ ಶಾಸ್ತ್ರಿಗಳ ಬದುಕು-ಬರಹಗಳನ್ನು ದಾಖಲಿಸುವ ಉಪಯುಕ್ತ ಕಾರ್ಯಮಾಡಿದ್ದಾರೆ. ಅವರ ಶ್ರಮ, ಆಸಕ್ತಿಗಳು ಅಭಿನಂದನೀಯ. ಅವರು ಅಜ್ಜಂಪುರ ಸಮೀಪದ ಹೊಸದುರ್ಗ ತಾಲೂಕಿನ  ಜೋಡಿಶ್ರೀರಂಗಾಪುರ ಗ್ರಾಮಕ್ಕೆ ಸೇರಿದವರು. ಉಮಾಪತಿ ಶಾಸ್ತ್ರಿಗಳು ಗೌರಾಪುರದವರಾದರೂ ಅವರ ಕರ್ಮಭೂಮಿ ಉತ್ತರ ಕರ...

ಕೆರೆ ಹಿಂದಿನ ಶ್ರೀ ಶಂಕರ ಲಿಂಗೇಶ್ವರ ದೇವಾಲಯ

ಇಮೇಜ್
ಪರ್ವತರಾಯನ  ಕೆರೆಯಲ್ಲಿ  ಸೂರ್ಯಾಸ್ತ    ಕೆರೆಯ ಹಿನ್ನೆಲೆಯಲ್ಲಿ ಹಣ್ಣೆ ಗುಡ್ಡ ಸಾಮಾನ್ಯವಾಗಿ ಊರಿಗೆ ನೀರು ನೀಡುವ ಜಲಸ್ಥಾನಗಳಲ್ಲಿ ಒಂದು ಚಿಕ್ಕ ಮಂದಿರವಿರುತ್ತಿದ್ದುದು ವಾಡಿಕೆ.  ದೇವಾಲಯದ ಹೊರನೋಟ  ಈ ವಿಷಯದಲ್ಲಿ ಅಜ್ಜಂಪುರವೂ ಹೊರತಾಗಿಲ್ಲ. ಈ ಚಿತ್ರದಲ್ಲಿ ಕಾಣುವ ಚಿಕ್ಕ ಮಂದಿರವನ್ನು ಕೆರೆ ಹಿಂದಿನ ದೇವಸ್ಥಾನ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಅದು ಇರುವುದು ಪರ್ವತರಾಯನ ಕೆರೆಯ ಏರಿಯ ಬುಡದಲ್ಲಿ. ಹೀಗಾಗಿ ಈ ಹೆಸರೇ ಪ್ರಚಲಿತವಿದ್ದರೂ , ಅಲ್ಲಿ ನೆಲೆಗೊಂಡಿರುವುದು ಶ್ರೀ ಶಂಕರಲಿಂಗೇಶ್ವರ.  ನಾಲ್ಕು ಚದರಡಿಯ ಒಂದು ಗರ್ಭಗೃಹ ಮತ್ತು ಹತ್ತು ಚದರಡಿಯ ಮುಖಮಂಟಪವನ್ನು ಮಾತ್ರ ಹೊಂದಿರುವ ಈ ದೇವಾಲಯ ಅಜ್ಜಂಪುರದ ಪ್ರಾಚೀನವೆಂದು ಹೇಳಬಹುದಾದ ಶಿವಮಂದಿರ. ಇಲ್ಲಿ ಹಿಂದೆ ಸಂಭ್ರಮವಿತ್ತು. ಪೂಜಾದಿಗಳು ಯಥಾಕ್ರಮ ನಡೆಯುತ್ತಿದ್ದ ದಿನಗಳಿದ್ದವು. ಇದರ ನಿರ್ವಹಣೆಗೆಂದು ಸಾಕಷ್ಟು ಕೃಷಿ ಜಮೀನನ್ನು ಉಂಬಳಿ ನೀಡಲಾಗಿತ್ತು. ಮಳೆಯ ಅಭಾವವಿರುವ ವರ್ಷಗಳಲ್ಲಿ ಇಲ್ಲಿ ರುದ್ರಾಭಿಷೇಕವನ್ನು ನಡೆಸಿ , ಮಳೆಯನ್ನು ಆಹ್ವಾನಿಸುವ ಪದ್ಧತಿಯಿತ್ತು. ಈಗ ಅದೆಲ್ಲ ಕೇವಲ ನೆನಪು ಮಾತ್ರ.   ಸಾಧಾರಣವಾಗಿ ಇಂಥ ರಚನೆಯ ದೇವಾಲಯಗಳಲ್ಲಿ ಗರ್ಭಗುಡಿಯ ಮೇಲೆ ಇಟ್ಟಿಗೆ-ಗಾರೆಗಳಿಂದ ನಿರ್ಮಿಸುವ ಶಿಖರವಿರುತ್ತದೆ...